ಬೆಂಗಳೂರು : ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ, ಗೊಂದಲ, ವಚನ ಭ್ರಷ್ಟತೆ, ತ್ಯಾಗ, ಅಸಮಾಧಾನಕ್ಕೆ ಸಾಕ್ಷಿಯಾಗುತ್ತಿದೆ. ಸಿಎಂ ಯಡಿಯೂರಪ್ಪ 10 ಜನರಿಗೆ ಮಾತ್ರ ವಲಸಿಗರಿಗೆ ಸಚಿವ ಸ್ಥಾನ ಅಂದ ಕೂಡಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬೇಸರಗೊಂಡಿದ್ದಾರೆ. ತಮ್ಮ ಹೆಸರು ಸಂಪುಟದಿಂದ ಕೈ ಬಿಡಲಾಗಿದೆ ಅಂತ ಸುಳಿವು ಸಿಕ್ಕ ಕೂಡಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದೆ ಕಣ್ಣೀರಿಟ್ಟು ನೋವು ತೋಡಿಕೊಂಡಿದ್ದಾರೆ ಅಂತ ಆಪ್ತ ಮೂಲಗಳು ಹೇಳುತ್ತಿವೆ.
ನಗರದ ರೇಸ್ ವ್ಯೂ ಹೊಟೇಲ್ ನಲ್ಲಿ ಬಾಲಚಂದ್ರ ಜಾರಕಿಹೊಳಿ ಅವರನ್ನ ಭೇಟಿಯಾಗಿ ಮಹೇಶ್ ಕುಮಟಳ್ಳಿ ನೋವು ತೋಡಿಕೊಂಡಿದ್ದಾರೆ. ಕೊಟ್ಟ ಮಾತು ಸಿಎಂ ತಪ್ಪುತ್ತಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಅಂತ ಬಾಲಚಂದ್ರ ಜಾರಕಿಹೊಳಿ ಮುಂದೆ ಅಳಲು ತೋಡಿಕೊಡಿದ್ದಾರಂತೆ.
ನೇರವಾಗಿ ತಮ್ಮ ಅಸಮಾಧಾನ ಬಾಲಚಂದ್ರ ಜಾರಕಿಹೊಳಿ ಮುಂದೆ ವ್ಯಕ್ತಪಡಿಸಿದ್ದಾರಂತೆ ಮಹೇಶ್ ಕುಮಟಳ್ಳಿ. ಪಕ್ಷ ಬಿಟ್ಟು, ಪಕ್ಷಕ್ಕೆ ಬಂದು ಗೆದ್ರು ಏನ್ ಪ್ರಯೋಜನ ಆಗಿದೆ ಸಾರ್. ಸಿಎಂ ಮಾತು ಕೊಟ್ಟಿದ್ದಾರೆ. ಆದ್ರೂ ಲಿಸ್ಟ್ ನಲ್ಲಿ ನನ್ನ ಹೆಸರಿಲ್ಲ ಅಂತಿದ್ದಾರೆ. ಬಿಜೆಪಿ ಸರ್ಕಾರ ಬರಲು ಯಾರದ್ದು ಎಷ್ಟು ಪಾಲು ಗೊತ್ತಿಲ್ಲ. ರಮೇಶ್ ಸಾಹುಕಾರ್ ಮೊದಲಿದ್ರೆ, ಅವರ ಹಿಂದೆಯೇ ಎರಡನೇಯದಾಗಿ ನಾನಿದ್ದೆ. ಇದೀಗ ನಾನೇ ಸಂಪುಟದಲ್ಲಿ ಇಲ್ಲ ಅಂದ್ರೆ ಹೇಗೆ ಸರ್ ಅಂತ ಜಾರಕಿಹೊಳಿ ಮುಂದೆ ಕಣ್ಣೀರಿಟ್ಟಿದ್ದಾರಂತೆ.
ಇಷ್ಟಕ್ಕೆ ಸುಮ್ಮನಾಗದ ಮಹೇಶ್ ಕುಮಟಳ್ಳಿ ಇನ್ನೂ ಟೈಂ ಇದೆ. ಏನಾದ್ರೂ ಮಾಡಿ ನನಗೆ ಸಚಿವ ಸ್ಥಾನ ಕೊಡಿಸಿ ಅಂತ ಬಾಲಚಂದ್ರ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ನಾನು ಕ್ಷೇತ್ರದ ಜನರಿಗೆ ಮುಖ ತೋರಿಸೋದು ಹೇಗೆ? ಮಂತ್ರಿ ಮಾಡಲ್ಲ ಅಂದ್ರೆ, ಮಂತ್ರಿ ಮಾಡ್ತೀವಿ ಅಂತಾ ಮಾತು ಕೊಟ್ಟಿದ್ದೇಕೆ? ಅಂತ ಕಣ್ಣೀರು ಹಾಕ್ತಾನೆ ಬಾಲಚಂದ್ರ ಜಾರಕಿಹೊಳಿ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರಂತೆ. ಸದ್ಯ ಸಿಎಂ ನಿರ್ಧಾರದಿಂದ ಕುಮಟಳ್ಳಿ ಬೇಸರವಾಗಿದ್ದಾರೆ. ಬೆಳಗಾವಿ ಸಾಹುಕಾರ್ ಜೊತೆ ಬಂದ ಕುಮಟಳ್ಳಿ ಅವರನ್ನ ಸಾಹುಕಾರ್ ಕೈ ಹಿಡಿಯುತ್ತಾರಾ ನೋಡಬೇಕು.