ಬಳ್ಳಾರಿ: ವಿದ್ಯುತ್ ಬಿಲ್ (Electricity Bill) ಕೇಳಲು ಹೋದ ಜೆಸ್ಕಾಂ (GESCOM) ಬಿಲ್ ಕಲೆಕ್ಟರ್ ಮೇಲೆ ಹಲ್ಲೆ ನಡೆದ ಘಟನೆ ಬಳ್ಳಾರಿ (Bellary) ನಗರದ ವರಬಸಪ್ಪನ ದೇವಸ್ಥಾನ ಹಿಂಭಾಗದಲ್ಲಿ ನಡೆದಿದೆ.
ನಗರದ ರೂಪನಗೂಡಿ ರಸ್ತೆಯ ವರಬಸಪ್ಪನ ಗುಡಿ ಹಿಂಭಾಗದಲ್ಲಿನ ನಿವಾಸಿ ಗಿರೀಶ್ ಎಂಬಾತ ಜೆಸ್ಕಾಂ ಬಿಲ್ ಕಲೆಕ್ಟರ್ ಬಿ.ಎಂ.ಪಾರ್ವತೇಶ್ ಗೌಡ ಹಾಗೂ ನವೀನ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಜೆಸ್ಕಾಂ ಸಿಬ್ಬಂದಿ ಇಬ್ಬರು ಗಿರೀಶ್ ಮನೆಗೆ ತೆರಳಿ 9 ಸಾವಿರ ಬಿಲ್ ಬಾಕಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ
ಗಿರೀಶ್ ನಮ್ಮದು ಮಾತ್ರ ಅಲ್ಲ ಬೇರೆಯವರದ್ದು ಕೂಡ ಬಿಲ್ ಬಾಕಿ ಇದೆ. ಪದೇಪದೇ ಮನೆಗೆ ಬರಬೇಡಿ, ನಾನು ಕಟ್ಟುತ್ತೇನೆ ಎಂದು ಬೈದಿದ್ದಾನೆ. ಅಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ, ಬಿಲ್ ಕಲೆಕ್ಟರ್ ಪಾರ್ವತೇಶ್ ಗೌಡ ಹಾಗೂ ಜೆಸ್ಕಾಂ ಸಿಬ್ಬಂದಿ ನವೀನ್ಕುಮಾರ್ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ. ಈ ಕುರಿತು ಕುರಿತು ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂತಿಮ ಹಂತದಲ್ಲಿ ಕೇಂದ್ರ ಬಜೆಟ್ – ಹಲ್ವಾ ಹಂಚಿದ ನಿರ್ಮಲಾ ಸೀತಾರಾಮನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k