ಧಾರವಾಡ: ನವೀಕೃತ ಧಾರವಾಡದ ರೈಲು ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ರೇಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಧಾರವಾಡ ಪೇಡಾವನ್ನು (Dharwad Peda) ಹಾಡಿ ಹೊಗಳಿದರು. ಅದರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರನ್ನೂ ವೈಷ್ಣವ್ ಕೊಂಡಾಡಿದ ಪ್ರಸಂಗ ನಡೆಯಿತು.
ಪೇಡಾ ನಗರದ ಜನರಿಗೆ ನಮಸ್ಕಾರ ಎಂದ ಸಚಿವ ವೈಷ್ಣವ್ ಅವರು, ಧಾರವಾಡ ಪೇಡಾ ತಿನ್ನಬೇಕು ಎಂದು ಹೇಳಿ ನಸು ನಕ್ಕರು. ಇಲ್ಲಿ ಜೋಶಿ ಅವರು ಇದ್ದಾರೆ, ಅದರ ಜೊತೆಗೆ ಪೇಡಾನೂ ಇದೆ. ವಂದೇ ಭಾರತ್ ರೈಲು ನಿಮಗೆ ಕೊಡಲೇ ಬೇಕು. ಯಾಕಂದ್ರೆ ನಮಗೆ ಪೇಡಾ ಸಿಕ್ಕಿದೆ ಎಂದು ನುಡಿದರು.
ನಾವು ನಿಮಗೆ ಪಕ್ಕಾ ರೈಲು ಕೊಡುತ್ತೇವೆ. ಮೋದಿ ಅವರ ಬಳಿ ಹೋಗಿ ವಂದೇ ಭಾರತ್ ತಂದಿದ್ದೇವೆ. ಈಗ ಪೇಡಾ ಕೊಡಿ ಎಂದು ಕೇಳುತ್ತೇವೆ. ಇಲ್ಲಿ ಜೋಶಿ ಅವರಿಂದ ಬಹಳ ಅಭಿವೃದ್ಧಿ ಕೆಲಸ ಆಗಿದೆ. ಪೇಡಾ ತಿನ್ನಿಸಿ ಅವರು ಇದನ್ನು ತಂದಿದ್ದಾರೆ ಎಂದು ಹಾಸ್ಯವಾಡಿದರು. ಇದನ್ನೂ ಓದಿ: ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ: ಕಟೀಲ್ ಕಿಡಿ
ಈ ವೇಳೆ ಹುಬ್ಬಳ್ಳಿ ದೆಹಲಿ ನಿಜಾಮುದ್ದೀನ್ ರೈಲಿಗೆ ಸವಾಯಿ ಗಂಧರ್ವ ಎಂಬ ಹೆಸರು ಇಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಡಿಕೆ ಇಟ್ಟರು. ಅವರ ಬೇಡಿಕೆಯನ್ನೂ ಈಡೇರಿಸುತ್ತೇನೆ ಎಂದು ವೈಷ್ಣವ್ ಭರವಸೆ ನೀಡಿದರು. ಇದನ್ನೂ ಓದಿ: ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್ನಲ್ಲಿ ಅಪರೂಪದ ದೃಶ್ಯ ಸೆರೆ