ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ದುಷ್ಕರ್ಮಿಗಳು ಇಮೇಲ್ ಮಾಡಿದ್ದಾರೆ.
ಅಪಹರಣ ಬೆದರಿಕೆ ಬಂದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಅವರ 23 ವರ್ಷದ ಪುತ್ರಿ ಹರ್ಷಿತಾಗೆ ಭದ್ರತೆ ಒದಗಿಸಲಾಗಿದೆ. ದುಷ್ಕರ್ಮಿಗಳು ದೆಹಲಿ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬುಧವಾರ (ಜನವರಿ 9)ರಂದು ಇಮೇಲ್ ಕಳುಹಿಸಿ, ನಿಮ್ಮ ಪುತ್ರಿಯನ್ನು ನಾವು ಅಪಹರಿಸುತ್ತೇವೆ. ನಿಮಗೆ ರಕ್ಷಿಸಿಕೊಳ್ಳಲು ಸಾಧ್ಯವೇ ಎಂದು ಸವಾಲು ಹಾಕಿದ್ದಾರೆ.
Delhi Chief Minister's Office received an anonymous mail on January 9 that threatened to kidnap CM Arvind Kejriwal's daughter. Delhi Police has deployed a Protective Service Officer (PSO) for CM's daughter & the matter has been handed over to Cyber cell. pic.twitter.com/Jy9PJaRF9k
— ANI (@ANI) January 12, 2019
ಇಮೇಲ್ ಕಳುಹಿಸಿದ್ದು ಯಾರು? ಎಲ್ಲಿಂದ ಕಳುಹಿಸಿದ್ದಾರೆ? ಅವರ ಬೇಡಿಕೆ ಏನು ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ದೆಹಲಿ ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್, ಸುನಿತಾ ದಂಪತಿಗೆ ಪುತ್ರಿ ಹರ್ಷಿತಾ ಹಾಗೂ ಪುತ್ರ ಪುಲ್ಕಿಟ್ ಇದ್ದಾರೆ. ಹರ್ಷಿತಾ 2014ರಲ್ಲಿ ಐಐಟಿಯ ಅರ್ಹತಾ ಪರೀಕ್ಷೆಯಲ್ಲಿ ಉರ್ತೀಣಗೊಂಡಿದ್ದು ಎಂಜಿನಿಯರಿಂಗ್ ವ್ಯಾಸಂಗ ಓದುತ್ತಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv