Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೃಷಿ ವಲಯಕ್ಕೂ ಬಂತು AI – ಬೆಳೆಗಳಿಗೆ ತಗುಲುವ ರೋಗದ ಬಗ್ಗೆ ಮೊದಲೇ ಎಚ್ಚರಿಸುತ್ತೆ IOT

Public TV
Last updated: March 18, 2024 3:42 pm
Public TV
Share
3 Min Read
AI IOT
SHARE

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಅರ್ಧದಷ್ಟು ಜನ ಜೀವಾನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಕೃಷಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ, ಆಧುನಿಕ ಉಪಕರಣ, ಕೃಷಿ ಪದ್ಧತಿ ಎಲ್ಲವೂ ಬದಲಾಗಿದೆ. ಹಾಗಾಗಿಯೇ ಕೃಷಿ ವಲಯವನ್ನು ಮೇಲೆತ್ತಲು ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಹಾಗೆಯೇ ತೋಟಗಾರಿಕಾ ಬೆಳೆಗಳಿಗೆ ತಗುಲುವ ರೋಗಗಳು ಹಾಗೂ ಹವಾಮಾನ ಅನಿಶ್ಚಿತತೆಯ ಬಗ್ಗೆ ಮಾಹಿತಿ ನೀಡುವ `ಇಂಟರ್‌ನೆಟ್ ಆಫ್ ಥಿಂಗ್ಸ್ (IOT)’ ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ಯಂತ್ರವೊಂದು ರೈತರ ಗಮನ ಸೆಳೆದಿದೆ. ಬೆಂಗಳೂರಿನ ಫಸಲ್ (Fasal) ಸಂಸ್ಥೆಯೇ ತಯಾರಿಸಿರುವ ಈ ಯಂತ್ರವನ್ನು ಇತ್ತೀಚೆಗೆ ನಡೆದ ತೋಟಗಾರಿಕಾ ಮೇಳದಲ್ಲಿಯೂ ಪ್ರದರ್ಶನಕ್ಕಿಡಲಾಗಿತ್ತು.

Fasal IOT 02

ಈ ಯಂತ್ರ ಹಣ್ಣಿನ ಬೆಳೆಗಳು (Fruit Crop) ಸೇರಿದಂತೆ ವಿವಿಧ ಬಗೆಯ ಗಿಡಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಕೊಡಬೇಕು. ಗಿಡಕ್ಕೆ ಯಾವ ಹಂತದಲ್ಲಿ ಯಾವ ರೋಗ ಬರುತ್ತದೆ ಎಂಬುದರ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ. ಜೊತೆಗೆ ರೋಗಕ್ಕೆ ಯಾವ ಔಷಧ ಸಿಂಪಡಿಸುತ್ತಾರೆಂಬ ಮಾಹಿತಿಯ ನೀಡುತ್ತದೆ. ಈ ಯಂತ್ರ ಅಳವಡಿಸಿಕೊಳ್ಳುವವರು, ತಮ್ಮ ಮೊಬೈಲ್‌ನಲ್ಲಿ ಫಸಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಈ ಆಪ್ ಮೂಲಕ ಯಂತ್ರ ಪ್ರತಿ ಹಂತದಲ್ಲೂ ಸೂಚನೆ ನೀಡುತ್ತದೆ. ಇದು ಇತ್ತೀಚೆಗೆ ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿ ವರುಣ್ ತಿಳಿಸಿದ್ದಾರೆ.

ಫಸಲ್ ಬಗ್ಗೆ ತಿಳಿಯುವುದು ಹೇಗೆ?
ಮೊದಲು ಪ್ಲೇ ಸ್ಟೋರ್ ಮೂಲಕ ಫಸಲ್ ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು, ಮೊಬೈಲ್‌ನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ನಂತರ ಹೆಸರು, ವಿಳಾಸ, ಜಮೀನಿನ ವಿಸ್ತೀರ್ಣದ ಬಗ್ಗೆ ಮಾಹಿತಿಗಳನ್ನು ನಮೂದಿಸಬೇಕು. ನಂತರ ಅಲ್ಲಿ ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದರೀರಿ ಅನ್ನೋ ಬಗ್ಗೆ ಮಾಹಿತಿ ನೀಡಬೇಕು. ಇದರ ಸಂಪೂರ್ಣ ಮಾಹಿತಿ ಪ್ರಕ್ರಿಯೆಯನ್ನೂ ಫಸಲ್ ಸಂಸ್ಥೆಯವರೇ ಹೇಳಿಕೊಡುತ್ತಾರೆ. ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

Fasal IOT 04

ಫಸಲ್ ಕೆಲಸವೇನು?
ಮಳೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಬರುತ್ತದೆ? ಎಂಬ ಮಾಹಿತಿಯನ್ನು 14 ದಿನಗಳ ಮುಂಚೆಯೇ ತಿಳಿಸುತ್ತದೆ. ಅಲ್ಲದೇ ಬೆಳೆಗಳಿಗೆ ಯಾವ ರೋಗ ತಗುಲುತ್ತದೆ? ಎಷ್ಟು ಪ್ರಮಾಣದಲ್ಲಿ ಔಷಧ ಸಿಂಪಡಣೆ ಮಾಡಬೇಕು? ಎಲೆ ಮತ್ತು ಭೂಮಿಯ ಮೇಲೆ ಎಷ್ಟು ತೇವಾಂಶ ಇದೆ? ಭೂಮಿ ಮತ್ತು ಬೆಳೆಗಳಿಗೆ ಸಿಂಪಡಿಸಿದ ನೀರು ಎಷ್ಟು ಪ್ರಮಾಣದಲ್ಲಿ ಆವಿಯಾಗುತ್ತಿದೆ? ಗಾಳಿ ಯಾವ ಪ್ರಮಾಣದಲ್ಲಿ ಬೀಸುತ್ತಿದೆ? ವಾತಾವರಣ ಹೇಗಿದೆ? ಎಂಬ ಎಲ್ಲಾ ಮಾಹಿತಿಯನ್ನು ಆಪ್ ಮೂಲಕವೇ ಒದಗಿಸುತ್ತದೆ. ಇದನ್ನೂ ಓದಿ: ಆರ್‌ಸಿಬಿ ಮಹಿಳಾ ತಂಡಕ್ಕೆ ಸಿದ್ದರಾಮಯ್ಯ, ಡಿಕೆ ಸುರೇಶ್‌, ಬಿಜೆಪಿಯಿಂದ ಪ್ರಸಂಶೆಗಳ ಮಹಾಪೂರ

Fasal IOT 03

ಖರೀದಿಸುವುದು ಹೇಗೆ?
ಈಗಾಗಲೇ ದೇಶಾದ್ಯಂತ 6 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ಫಸಲ್ ಥಾಯ್‌ಲ್ಯಾಂಡ್‌ನಲ್ಲೂ ಹೆಚ್ಚಿನ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲವು ರೈತ ಗ್ರಾಕರು 8 ರಿಂದ 12 ಡಿವೈಸ್‌ಗಳನ್ನೂ (ಇಂಟರ್‌ನೆಟ್ ಆಫ್ ಥಿಂಗ್ಸ್ – ಐಒಟಿ) ಸಹ ಖರೀದಿಸಿದ್ದಾರೆ. ಐಒಟಿ ಎಐ ಡಿವೈಸ್ ಚಂದಾದಾರಿಕೆ ಆಧರಿತವಾದ ಯಂತ್ರವಾಗಿದೆ. ಇದನ್ನು ಒಮ್ಮೆ ಖರೀದಿಸಿದರೆ ನಂತರ ಒಟಿಟಿ ವೇದಿಕೆಯಂತೆ ಚಂದಾದಾರಿಕೆ ಪಡೆಯಬೇಕಾಗುತ್ತದೆ. ಆರಂಭಿಕ ಬೆಲೆ ರಿಯಾಯಿತಿ ದರ ಕಳೆದು ಒಂದು ಡಿವೈಸ್‌ಗೆ 40 ಸಾವಿರ ರೂ. ಇರುತ್ತದೆ. ಮೊದಲ 1 ವರ್ಷ ಯಾವುದೇ ಶುಲ್ಕ ಇರೋದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ನಂತರ ವಾರ್ಷಿಕ 9 ಸಾವಿರ ರೂ.ಗಳಿಗೆ ಚಂದಾದಾರಿಕೆ ಪಡೆಯಬೇಕಾಗುತ್ತದೆ.

Fasal IOT 05

ಯಾವುದಕ್ಕೆಲ್ಲ ಫಸಲ್ ಉಪಯುಕ್ತ?
ಫಸಲ್ ಸಾಮಾನ್ಯ ಬೆಳೆಗಳಿಗಿಂತಲೂ ದಾಳಿಂಬೆ, ದ್ರಾಕ್ಷಿ, ಸೇಬು, ಬಾಳೆ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಅಲ್ಲದೇ ಒಂದೇ ಗುಣಲಕ್ಷಣದ ಮಣ್ಣನ್ನು ಹೊಂದಿದ್ದರೆ, ಅನುಕೂಲವಾಗುತ್ತದೆ. ಒಂದು ವೇಳೆ ಬೇರೆ ಗುಣಲಕ್ಷಣ ಇರುವ ಮಣ್ಣು ಹೊಂದಿದ್ದರೆ (ಉದಾ: ಕಪ್ಪು, ಕೆಂಪು ಮಣ್ಣು), ಮಣ್ಣಿನ ಲಕ್ಷಣಕ್ಕೆ ತಕ್ಕಂತೆ ಬೇರೆ ಬೇರೆ ಡಿವೈಸ್‌ಗಳನ್ನು ಬಳಸಬೇಕಾಗುತ್ತದೆ. ಇದನ್ನೂ ಓದಿ: ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಾಲಯದಲ್ಲಿಲ್ಲ, ಮಾ.21ರ ಒಳಗಡೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ – ಎಸ್‌ಬಿಐ ವಿರುದ್ಧ ಸುಪ್ರೀಂ ಕೆಂಡ

ಐಒಟಿ ಡಿವೈಸ್ ಸಾಮರ್ಥ್ಯ ಎಷ್ಟು?
ಐಒಟಿ ಎಐ ಡಿವೈಸ್ ಒಂದು ಡಿವೈಸ್ 5 ಎಕರೆಗಳಷ್ಟು ಭೂಮಿಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಒಂದು ಯಂತ್ರವನ್ನು ಅರ್ಧ ಎಕರೆಯಿಂದ 5 ಎಕೆರೆಗಳಷ್ಟು ಭೂ ಪ್ರದೇಶಕ್ಕೂ ಬಳಸಬಹುದು. ಇದು ಸೋಲಾರ್‌ನಿಂದಲೇ ಕೆಲಸ ಮಾಡುವುದರಿಂದ ವಿದ್ಯುತ್ ಖರ್ಚು ಸಹ ಉಳಿತಾಯವಾಗುತ್ತದೆ. ಒಂದು ಬಾರಿ 100% ನಷ್ಟು ಚಾರ್ಜ್ ಆದರೆ, ಕನಿಷ್ಠ 30 ದಿನಗಳ ಕಾಲ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ವರುಣ್.

– ಮೋಹನ ಬಿ.ಎಂ

TAGGED:cropfarmersFasal AppirrigationSmart Farmingweather forecastಫಸಲ್‌ ಆಪ್‌ಬೆಂಗಳೂರುಬೆಳೆ ನಿರ್ವಹಣೆರೈತರು
Share This Article
Facebook Whatsapp Whatsapp Telegram

Cinema News

Darshan 11
ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್
Bengaluru City Cinema Court Latest Sandalwood Top Stories
Vishnuvardhan Memorial 3
ದಾದಾ ಅಂತ್ಯಕ್ರಿಯೆ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಿ – ಫಿಲ್ಮ್ ಚೇಂಬರ್‌ಗೆ ವಿಷ್ಣು ಅಭಿಮಾನಿಗಳ ಸಂಘ ಮನವಿ
Cinema Latest Sandalwood Top Stories
Actor Jaggesh at mantralaya 1
ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ
Cinema Districts Latest Raichur Sandalwood Top Stories
rana daggubati
ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ
Cinema Latest Top Stories
Dhruva Sarja Raghavendra Hegde
ಧ್ರುವ ಬಳಗದ ಆರೋಪಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಸ್ಪಷ್ಟನೆ
Cinema Latest Sandalwood Top Stories

You Might Also Like

trump modi putin
Latest

ಭಾರತದ ಮೇಲೆ 50% ಸುಂಕ ವಿಧಿಸಿದ್ದು, ರಷ್ಯಾಗೆ ದೊಡ್ಡ ಹೊಡೆತ ಕೊಟ್ಟಿದೆ: ಟ್ರಂಪ್‌

Public TV
By Public TV
15 minutes ago
world organ donation
Explainer

Explainer: ಕರ್ನಾಟಕದಲ್ಲಿ ಹೇಗಿದೆ ಅಂಗಾಂಗ ದಾನ ಜಾಗೃತಿ?- ಕಿಡ್ನಿ, ಹೃದಯ ಕಸಿ ಆಪರೇಷನ್‌ಗೆ BPL ಕಾರ್ಡುದಾರರು ಎಷ್ಟು ಕಟ್ಟಬೇಕು?

Public TV
By Public TV
26 minutes ago
EGG
Latest

ಮಂಡ್ಯ| ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ 70ಕ್ಕೂ‌ ಅಧಿಕ ಮಕ್ಕಳು ಬೇರೆ ಶಾಲೆಗೆ ಸೇರ್ಪಡೆ

Public TV
By Public TV
1 hour ago
APSRTC Bus
Latest

ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

Public TV
By Public TV
1 hour ago
Plane Crashes US
Latest

ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದು ವಿಮಾನ ಪತನ

Public TV
By Public TV
2 hours ago
Mantaralaya
Districts

354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?