ಶ್ರೀನಗರ: ಕಳೆದ 6 ದಿನಗಳಿಂದ ಕಾಶ್ಮೀರದಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಜನತೆ ಯಾವುದೇ ತಿರುಚಲಾದ ಸುದ್ದಿಯನ್ನು ನಂಬಬಾರದು. ಕಣಿವೆಯಲ್ಲಿ ಜನರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನುವುದು ಸುಳ್ಳಿನ ಸುದ್ದಿ. ಕಳೆದ 6 ದಿನಗಳಿಂದ ಒಂದೇ ಒಂದು ಬುಲೆಟ್ ಯಾರ ಮೇಲೂ ಪ್ರಯೋಗ ಮಾಡಿಲ್ಲ. ಪರಿಸ್ಥಿತಿ ಈಗ ಸುಧಾರಣೆ ಆಗುತ್ತಿದ್ದು ಜನ ಸಹಕಾರ ನೀಡುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಶ್ರೀನಗರ ಮತ್ತು ಹಲವು ನಗರದಲ್ಲಿ ಜನ ಈದ್ ಹಬ್ಬಕ್ಕೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಟ್ವೀಟ್ ಮಾಡಿ ತಿಳಿಸಿದೆ.
Press Release.@diprjk @KashmirPolice @igpjmu pic.twitter.com/mDhlKJMYyO
— J&K Police (@JmuKmrPolice) August 10, 2019
ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಅವರು ಶ್ರೀನಗರದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಡ್ರೋನ್ ವಿಡಿಯೋವನ್ನು ಪ್ರಕಟಿಸಿದ್ದಾರೆ. ಈ ಮೂಲಕ ವಿದೇಶ ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ.
ವಿದೇಶಿ ಮಾಧ್ಯಮಗಳು ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ ಜೋರಾಗಿವೆ. ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ಮಾಡಿತ್ತು.
Srinagar today. #Kashmir pic.twitter.com/Oe1c9YyFfs
— Imtiyaz Hussain (@hussain_imtiyaz) August 10, 2019