ಚಿತ್ರದುರ್ಗ: ರಸ್ತೆ ಮಧ್ಯೆ ವಾಹನ ತಡೆದು ದರೋಡೆ ನಡೆಸುತ್ತಿದ್ದ ಮೂವರು ದರೋಡೆಕೋರರನ್ನು ಚಿತ್ರದುರ್ಗದ ಭರಮಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂನ್ 25ರಂದು ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ದರೋಡೆ ನಡೆದಿತ್ತು. ಪಾನ್ ಮಸಾಲಾ ಸಾಗಿಸುತ್ತಿದ್ದ ಲಾರಿ ತಡೆದು ಚಾಲಕ ಮಲ್ಲಪ್ಪಗೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ ಹಾಕಿ, ವಾಹನದಲ್ಲಿದ್ದ ಪಾನ್ ಮಸಾಲಾ ಬೇರೆ ವಾಹನಕ್ಕೆ ಶಿಫ್ಟ್ ಮಾಡಿಕೊಂಡು ಪರಾರಿ ಆಗಿದ್ದರು. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ
ಈ ಪ್ರಕರಣದ ಬೆನ್ನತ್ತಿದ ಭರಮಸಾಗರ ಪೊಲೀಸರು ಕೊಪ್ಪಳ ಮೂಲದ ದೊಡ್ಡ ಬಸವ, ಮರ್ದಾನ್ ಸಾಬ್, ಹನುಮಪ್ಪ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವರಿಂದ 16 ಲಕ್ಷ ಮೌಲ್ಯದ ಪಾನ್ ಮಸಾಲಾ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಲಂಚ ಪಡೆದ ಆರೋಪ- ಬೆಂಗಳೂರು ಡಿಸಿ ಎತ್ತಂಗಡಿ