ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ನಟ ಅರ್ಜುನ್ ಸರ್ಜಾ ಕಾರಣ?

Public TV
2 Min Read
Malli Missing Collage

ಬೆಂಗಳೂರು: ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ಬಹುಭಾಷಾ ನಟ ಅರ್ಜುನ್ ಸರ್ಜಾ ಕಾರಣವೇ ಎನ್ನುವ ಅನುಮಾನ ಶುರುವಾಗಿದೆ.

ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಿಸಿದ ‘ಪ್ರೇಮಬರಹ’ ಸಿನಿಮಾವನ್ನು ತೂಗುದೀಪ್ ಪ್ರೊಡಕ್ಷನ್ ವಿತರಣೆ ಮಾಡಿತ್ತು. ಇದರ ಉಸ್ತುವಾರಿಯನ್ನ ಮಲ್ಲಿಕಾರ್ಜುನ್ ನೋಡಿಕೊಳ್ಳುತ್ತಿದ್ದ. ಮೊದಲ ವಾರದ ಸಿನಿಮಾದ ಶೇರ್ 10 ಲಕ್ಷ ಎಂದು ಮಲ್ಲಿ, ಅರ್ಜುನ್ ಸರ್ಜಾಗೆ ಲೆಕ್ಕ ಕೊಟ್ಟಿದ್ದಾನೆ.

ಅನುಮಾನಗೊಂಡ ಅರ್ಜುನ್ ಸರ್ಜಾ ಕ್ರಾಸ್‍ಚೆಕ್ ಮಾಡಿದ್ದಾರೆ. ಎಲ್ಲ ಚಿತ್ರಮಂದಿರಕ್ಕೆ ಕರೆ ಮಾಡಿ ಎಷ್ಟು ಟಿಕೆಟ್ ಸೇಲ್ ಆಗಿದೆ, ಎಷ್ಟು ಶೋ ನಡೆದಿದೆ ಎಂಬುದನ್ನು ಮರು ಪರಿಶೀಲಿಸಿದ್ದಾರೆ. ಈ ವೇಳೆ ಮೊದಲ ವಾರ 10 ಲಕ್ಷ ಅಲ್ಲ 40 ಲಕ್ಷ ಅನ್ನೊದು ಕನ್ಫರ್ಮ್ ಆಗಿದೆ. ಮಲ್ಲಿಯನ್ನು ಕೂರಿಸಿ ತಮ್ಮ ಸ್ಟೈಲ್‍ನಲ್ಲಿ ವಿಚಾರಿಸಿದ ಸರ್ಜಾ ಅಸಲಿ ಕಥೆ ಬಾಯಿ ಬಿಡಿಸಿದ್ದಾರೆ. ತಪ್ಪು ಒಪ್ಪಿಕೊಂಡ ಮಲ್ಲಿ ಒಂದು ಕೋಟಿಯ ಚೆಕ್ ಕೊಟ್ಟು ದರ್ಶನ್ ಅವರಿಗೆ ಈ ವಿಚಾರವನ್ನು ತಿಳಿಸದಂತೆ ಕೈ ಮುಗಿದಿದ್ದಾನೆ ಎಂದು ತಿಳಿದುಬಂದಿದೆ. ಆ ಒಂದು ಕೋಟಿಯ ಚೆಕ್ ಬೌನ್ಸ್ ಆಗ್ತಿದಂತೆ ಮಲ್ಲಿ ಗಾಯಬ್ ಆಗ್ತಿದ್ದಾನೆ.

ಪ್ರೇಮಬರಹ ಚಿತ್ರದ ವಿತರಣೆಯನ್ನು ಮಲ್ಲಿ ಮಾಡಿದ್ದನು. ಮಲ್ಲಿ ಸಿನಿಮಾ ವಿತರಣೆ ಮಾಡಿ ಈಗ ಆಗ ಎಂದು ಹೇಳಿ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ. ಅದು ತುಂಬಾ ಬೇಸರದ ವಿಷಯ. ಇದ್ದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಿಲ್ಲ. ಮಲ್ಲಿ 10 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಮೋಸ ಮಾಡಿದ್ದಾನೆ. ಎಲ್ಲರಿಗೂ ಮೋಸ ಮಾಡಿ ಹೋಗಿದ್ದಾನೆ. ಹಣಕ್ಕಿಂತ ಹೆಚ್ಚು ಆತ ನಂಬಿಕೆ ದ್ರೋಹ ಮಾಡಿದ್ದಾನೆ. ನಾವು ಮೋಸ ಹೋಗಿದ್ದೇವೆಂದು ತಿಳಿದು ಮನಸಿಗೆ ಬೇಸರವಾಗುತ್ತದೆ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಮಲ್ಲಿಕಾರ್ಜುನ್ ಕಳೆದ 15-20 ದಿನದಿಂದ ಕಾಣೆಯಾಗಿದ್ದಾನೆ.

ಮಲ್ಲಿ ಈ ಹಿಂದೆ ನಮ್ಮ ಡಿಸ್ಟ್ರಿಬ್ಯೂಶನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಮಲ್ಲಿಕಾರ್ಜುನ್‍ನನ್ನು ನಂಬಿ ಸಾಕಷ್ಟು ಜನ ಕೋಟಿ ಕೋಟಿ ಹಣ ಹೇಗೆ ನೀಡಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಮಲ್ಲಿ ಕಾಣೆಯಾದ ಮೇಲೆ ಎಲ್ಲರೂ ನಮಗೆ ಕರೆ ಮಾಡಿ ಹಣವನ್ನು ಕೇಳುತ್ತಿದ್ದಾರೆ. ಮಲ್ಲಿ ನಮ್ಮ ಸಂಸ್ಥೆಯಲ್ಲಿ 15 ವರ್ಷದಿಂದ ಕೆಲಸ ಮಾಡುತ್ತಿದ್ದು, ತುಂಬ ನಂಬಿಕಸ್ಥ ವ್ಯಕ್ತಿ ಎಂದು ಅವನನ್ನು ಜೊತೆಯಲ್ಲೇ ಇರಿಸಿಕೊಳ್ಳುತ್ತಿದ್ದೇವು ಎಂದು ದರ್ಶನ್ ಸಹೋದರ ದಿನಕರ್ ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *