ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಕುತೂಹಲ ಮೂಡಿತ್ತು. ಅಂದುಕೊಂಡಂತೆ ಆಗಿದ್ದರೆ ಸ್ಪೂರ್ತಿ ಗೌಡ ಅಥವಾ ಅಕ್ಷತಾ ಕುಕ್ಕಿ ದೊಡ್ಮನೆಯಿಂದ ಆಚೆ ಬರಲಿದ್ದಾರೆ ಎಂದು ಊಹಿಸಲಾಗಿತ್ತು. ಈ ಊಹೆಗೂ ನಿಲುಕದಂತಹ ಘಟನೆಯೊಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್ ಆಗಿದ್ದಾರೆ.
ಅರ್ಜುನ್ ರಮೇಶ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದರು. ಮನೆಯಲ್ಲಿದ್ದವರೇ ಪ್ರೀತಿಯಿಂದಲೇ ಅರ್ಜುನ್ ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದರು. ಅವರ ಖಾಸಗಿ ವಿಚಾರಗಳನ್ನು ಹಂಚಿಕೊಂಡಾಗ ಅನೇಕರು ಅವರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಹಾಗಾಗಿಯೇ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದರು. ಈ ಕ್ಯಾಪ್ಟನ್ ಶಿಪ್ ಅವರಿಗೆ ಮುಳುವಾಯಿತು. ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಿನಿಂದಲೇ ಇಷ್ಟು ದಿನ ಕಳೆದಿದ್ದಾರೆ. ನೋವು ನಿವಾರಣೆ ಆಗದೇ ಇರುವ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ
ಸತತ ಒಂದು ವಾರದಿಂದ ಕೈಗೆ ನೋವು ಮಾಡಿಕೊಂಡೇ ಆಟದಲ್ಲಿ ಭಾಗಿಯಾಗುತ್ತಿದ್ದ ಅರ್ಜುನ್ ರಮೇಶ್ ಅವರನ್ನು ಎಲಿಮಿನೇಟ್ ಮಾಡದೇ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಹೀಗಾಗಿ ಇಡೀ ಮನೆಯಲ್ಲಿ ಭಾವುಕತೆ ತುಂಬಿತ್ತು. ಕೆಲವರಂತೂ ಅತ್ತೆ ಬಿಟ್ಟರು. ಮನೆಯಿಂದ ಅವರನ್ನು ಕಳುಹಿಸುವಾಗಲ ಆದಷ್ಟು ಬೇಗ ಗುಣಮುಖರಾಗಿ ಎಂದು ಶುಭ ಹಾರೈಸಿ ಕಳುಹಿಸಿ ಕೊಟ್ಟಿದ್ದಾರೆ.