ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

Public TV
1 Min Read
ANI DINESH BOXER

ಚಂಡೀಗಢ: ಬಾಕ್ಸಿಂಗ್ ನಲ್ಲಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದು 2010ರ ಅರ್ಜುನ ಪ್ರಶಸ್ತಿ ಪಡೆದಿದ್ದ ಬಾಕ್ಸರ್ ಇಂದು ಜೀವನೋಪಾಯಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದಿದ್ದ ದಿನೇಶ್ ಕುಮಾರ್ ಸದ್ಯ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಒಟ್ಟು 23 ಪದಕಗಳನ್ನು ಗೆದ್ದಿದ್ದು ಇದರಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಸ್ಪರ್ಧೆಯ ಪದಕಗಳು ಸೇರಿದೆ.

2014 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 30 ವರ್ಷದ ದಿನೇಶ್ ಕುಮಾರ್ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಅವರ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿತ್ತು. ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದಿನೇಶ್ ಅವರ ಬಾಕ್ಸಿಂಗ್ ವೃತ್ತಿ ಜೀವನ ಅಲ್ಲಿಗೆ ಅಂತ್ಯವಾಗಿತ್ತು. ಆದರೆ ಇದಕ್ಕೂ ಮುನ್ನವೇ ದಿನೇಶ್ ಅವರ ತಂದೆ ಮಗನನ್ನು ತರಬೇತಿಗೊಳಿಸಿ ಉತ್ತಮ ಬಾಕ್ಸರ್ ಆಗಿ ಮಾಡಲು ಸಾಕಷ್ಟು ಹಣ ವ್ಯಹಿಸಿದ್ದರು. ಆದರೆ ಅವರ ಕನಸು ಸಂಪೂರ್ಣವಾಗಿ ನನಸಾಗುವ ಮುನ್ನವೇ ದಿನೇಶ್ ಅವರ ಜೀವನದಲ್ಲಿ ಅವಘಡ ಸಂಭವಿಸಿತ್ತು.

https://twitter.com/ANI/status/1056582298257317888?

ಕುಟುಂಬ ಮೇಲೆ ದಿನದಿಂದ ದಿನಕ್ಕೆ ಚಿಕಿತ್ಸೆ ಹಾಗೂ ತರಬೇತಿಗಾಗಿ ಪಡೆದ ಸಾಲದ ಮೊತ್ತದ ಒತ್ತಡ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ದಿನೇಶ್ ತಂದೆಗೆ ಸಹಾಯ ಮಾಡಲು ಅವರೊಂದಿಗೆ ಬೀದಿ ಬೀದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಇವರಿಗೆ ಸರ್ಕಾರದ ವತಿಯಿಂದ ಯಾವುದೇ ಸಹಾಯಕೂಡ ಲಭ್ಯವಾಗಿಲ್ಲ. ಸರ್ಕಾರ ನನಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ದಿನೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ತನಗಾದ ಅಪಘಾತದಿಂದ ಬಾಕ್ಸಿಂಗ್ ವೃತ್ತಿ ಜೀವನ ಅಂತ್ಯವಾದರೂ ನನ್ನಲ್ಲಿರುವ ಬಾಕ್ಸಿಂಗ್ ಹಾಗೆಯೇ ಇದೆ. ತಾನು ಈಗಲೂ ಕಿರಿಯರಿಗೆ ಬಾಕ್ಸಿಂಗ್ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದೆನೆ. ಅದ್ದರಿಂದ ರಾಜ್ಯಮಟ್ಟದಲ್ಲಿ ತರಬೇತಿ ನೀಡಲು ಉದ್ಯೋಗ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ದಿನೇಶ್ ಅವರ ಕೋಚ್ ಕೂಡ ದಿನೇಶ್ ಅವರಿಗೆ ಬೆಂಬಲವಾಗಿದ್ದು, ಸರ್ಕಾರ ಈತನಿಗೆ ಒಂದು ಉತ್ತಮ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *