ಅಣ್ಣ ತಮ್ಮಂದಿರ ನಡುವೆ ದ್ವೇಷ- ದ್ರಾಕ್ಷಿ ಗಿಡಗಳಿಗೆ ಮಚ್ಚಿನೇಟು

Public TV
1 Min Read
grapes

ಚಿಕ್ಕಬಳ್ಳಾಪುರ: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಅಣ್ಣ, ತಮ್ಮಂದಿರ ನಡುವಿನ ಜಮೀನು ವಿವಾದದ ದ್ವೇಷಕ್ಕೆ 150ಕ್ಕೂ ಹೆಚ್ಚು ದ್ರಾಕ್ಷಿ ಗಿಡಗಳನ್ನು (Grapes) ಮಚ್ಚಿನಿಂದ ಕೊಚ್ಚಿ ಕಟಾವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ನಾರಾಯಣರೆಡ್ಡಿ ಹಾಗೂ ನಾಗರಾಜ್ ನಡುವೆ ಪಿತ್ರಾರ್ಜಿತ ಆಸ್ತಿ ಸಂಬಂಧ ಜಮೀನು ವಿವಾದವಿದ್ದು, ವಿವಾದಿತ ಜಮೀನಿನಲ್ಲಿ ನಾರಾಯಣರೆಡ್ಡಿ ಬೆಳೆಸಿರುವ 150ಕ್ಕೂ ದ್ರಾಕ್ಷಿ ಗಿಡಗಳನ್ನು ಮಚ್ಚಿನಿಂದ ಬುಡದಲ್ಲಿ ಕೊಚ್ಚಿ ಇಡೀ ಗಿಡವನ್ನು ಸಂಪೂರ್ಣವಾಗಿ ನಾಶವಾಗುವಂತೆ ಮಾಡಲಾಗಿದೆ.

police jeep 1

ಈ ಸಂಬಂಧ ರೈತ ನಾರಾಯಯಣರೆಡ್ಡಿ ಸಹೋದರ ನಾಗರಾಜ್ ಹಾಗೂ ಆತನ ಮಗ ಮನೋಜ್ ವಿರುದ್ಧ ನಾಶ ಮಾಡಿದ ಆರೋಪ ಹೊರಿಸಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕ್ರಮದಲ್ಲಿ `ಸಿದ್ದು ನಿಜಕನಸುಗಳು’ ಕೃತಿ ಬಿಡುಗಡೆಗೆ ಪ್ಲಾನ್?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *