ಬೆಂಗಳೂರು: ಕನ್ನಡ ಚಿತ್ರರಂಗ ಡಿಕೆ ಶಿವಕುಮಾರ್ (DK Shivakumar) ಜೀತದಾಳಾ ಅಥವಾ ಅಥವಾ ಯಾರನ್ನಾದ್ರೂ ಜೀತಕ್ಕೆ ಇಟ್ಟುಕೊಂಡಿದ್ದಾರಾ ಎಂದು ಆರ್ಆರ್ ನಗರದ (RR Nagara) ಬಿಜೆಪಿ ಶಾಸಕ ಮುನಿರತ್ನ (Munirathna) ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಟ್ಟು ಬೋಲ್ಟು ಟೈಟ್ ಮಾಡುತ್ತೇನೆ. ನನಗೆ ಗೊತ್ತಿದೆ, ಸರ್ಕಾರದ ಸವಲತ್ತು ಸಿಗದಂತೆ ಮಾಡ್ತೇನೆ ಅಂದಿದ್ದಾರೆ. ಡಿಕೆಶಿ ಒಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಕನ್ನಡ ಚಿತ್ರರಂಗ ಅವರದ್ದಲ್ಲ, ದೊಡ್ಡದಾಗಿ ಬೆಳೆದಿದೆ. ಇಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
Advertisement
Advertisement
ಮೊದಲು ನಿಮ್ಮ ಬಳಿ ಕೆಲಸ ಮಾಡುವವರ ನಟ್ಟು ಬೋಲ್ಟು ಟೈಟ್ ಮಾಡಿ. ನೀವೂ ಸಿನಿಮಾದವರೇ, ನಿಮ್ಮ ಟೆಂಟ್ನಲ್ಲಿ ಸಿನಿಮಾ ಹಾಕಿದವರು ನೀವು. ಮೊದಲು ಪದ ಬಳಕೆ ಸರಿ ಮಾಡಿಕೊಳ್ಳಿ
Advertisement
ಮೇಕೆದಾಟು ಪಾದಯಾತ್ರೆ ಪೋಟೋ ರಿಲೀಸ್ ಮಾಡಿದ ಮುನಿರತ್ನ ಕಾಂಗ್ರೆಸ್ ಪಕ್ಷದ ಚಿಹ್ನೆ, ಕಾಂಗ್ರೆಸ್ ಪಕ್ಷದ ಸಾಲು, ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರ ಬಳಕೆ ಆಗಿದೆ. ಈ ಪಾದಯಾತ್ರೆಯಲ್ಲಿ ಚಿತ್ರರಂಗದ ಕಲಾವಿದರು ಭಾಗವಹಿಸಬೇಕಾ? ಎಲ್ಲಾದರೂ ಕನ್ನಡ ಭಾವುಟ ಇದ್ಯಾ ಎಂದು ಪ್ರಶ್ನಿ ವಾಗ್ದಾಳಿ ನಡೆಸಿದರು.
Advertisement
ನೆಲ ಜಲ ರಕ್ಷಣೆ ನೀರು ಬೇಕು ಅಂತ ಪಾದಯಾತ್ರೆ ಮಾಡಿದ ನೀವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿಮ್ಮ ಪಕ್ಷದ ಚಿನ್ಹೆಯನ್ನು ಹಾಕಿದ್ದು ಯಾಕೆ? ಪಾದಯಾತ್ರೆ ನಿಮ್ಮ ಪಕ್ಷದ ಕಾರ್ಯಕ್ರಮ. ನಿಮ್ಮದು ನೆಲ ಜಲಕ್ಕಾಗಿ ನಡೆದ ಪಾದಯಾತ್ರೆ ಅಲ್ಲ ಅಧಿಕಾರಕ್ಕಾಗಿ ನಡೆಸಿದ ಪಾದಯಾತ್ರೆ ಎಂದು ಕಿಡಿಕಾರಿದರು.