ದಾವಣಗೆರೆ: ಈ ಶತಮಾನದಲ್ಲಿಯೂ ಕೆಲವು ಭಾಗಗಳಲ್ಲಿ ದಲಿತರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದ ಪರಿಸ್ಥಿತಿ ಇದೆ. ಆದರೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ಮಾತ್ರ ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಹಲವು ಜನ ಕಾಯುತ್ತಿರುವ ವಿಶಿಷ್ಟ ಆಚರಣೆಯಿದೆ.
ದಲಿತ ಪೂಜಾರಿ ಪಾದ ಸ್ಪರ್ಶ ಮಾಡಲು ಕಿಲೋಮೀಟರ್ ಗಟ್ಟಲೇ ದಾರಿಯುದ್ದಕ್ಕೂ ಸಾವಿರಾರು ಭಕ್ತರು ಮಲಗಿ ಕಾಯುತ್ತಿರುತ್ತಾರೆ. ಭಕ್ತರ ಮೇಲೆ ಆ ದಲಿತ ಪೂಜಾರಿ ನಡೆದರೆ ಅವರ ಎಲ್ಲ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದರ ಜೊತೆಗೆ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನಗಳಿಗಿದೆ.
ಈ ರೀತಿಯ ವಿಶಿಷ್ಟ ಆಚರಣೆ ಅರಸೀಕೆರೆ ದಂಡಿ ದುಗ್ಗಮ್ಮ ಜಾತ್ರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಆಚಾರವಾಗಿದೆ. ಕಾರ್ತಿಕ ನಂತರದ ಅಮಾವಾಸ್ಯೆ ದಿನದಂದು ಈ ಜಾತ್ರೆ ನಡೆಯಲಿದ್ದು, ಬೆಳಗ್ಗಿನ ಜಾವ ದಲಿತ ಪೂಜಾರಿ ಗಂಗೆ ಪೂಜೆ ಸಲ್ಲಿಸಿ ದೇವರ ಮೂರ್ತಿಯನ್ನು ಹೊತ್ತು ಸಾಗುತ್ತಾರೆ. ಊರ ಹೊರಗೆ ಗಂಗೆಪೂಜೆ ಮುಗಿಸಿ ದಂಡಿ ದುಗ್ಗಮ್ಮನ ಮೂರ್ತಿಯನ್ನು ಹೊತ್ತು ಎರಡು ಕಿಲೋಮೀಟರ್ ನಡೆಯುತ್ತಾರೆ. ಇದನ್ನೂ ಓದಿ: 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ





