ಬೆಂಗಳೂರು: ಸ್ಯಾಂಟ್ರೋ ರವಿಯ (Santro Ravi) ಬಂಧನ ಆಗಿಯೇ ಆಗುತ್ತೆ, ಆತ ಎಲ್ಲೇ ಇದ್ರೂ ಎಳೆದುಕೊಂಡು ಬಂದೇ ಬರ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಯಾಂಟ್ರೋ ರವಿ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಲಾಗಿದೆ. ಅವನ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲೆಲ್ಲ ಕಡೆ ಪೊಲೀಸ್ನವರು ಸರ್ಚ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಬಂಧನಕ್ಕೆ ಎಲ್ಲ ರೀತಿ ಟೀಮ್ ಮಾಡಿ ಮೈಸೂರು ಪೊಲೀಸರು (Mysuru Police) ಸರ್ಚ್ ಮಾಡುತ್ತಿದ್ದಾರೆ. ಉಳಿದುಕೊಂಡಿದ್ದ ಲಾಡ್ಜ್ ಎಲ್ಲ ಚೆಕ್ ಮಾಡುತ್ತಿದ್ದಾರೆ. ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ, ಹಾಗಾಗಿ ಹುಡುಕೋದು ಕಷ್ಟವಾಗಿದೆ ಎಂದು ಮಾಹಿತಿ ನೀಡಿದರು.
ನಾನು ನಿಮ್ಮೆಲ್ಲರಿಗೂ ಗೊತ್ತು, ಯಾರು ಬೇಕಾದ್ರೂ ನನ್ನ ಬಂದು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸ್ ಸರ್ಟಿಫಿಕೇಟ್ ತಗೊಂಡು ಬಾ ಅನ್ನೋಕಾಗಲ್ಲ. ಅನೇಕರು ಬಂದಾಗ ಫೊಟೋ ತೆಗೆಸಿಕೊಳ್ತಾರೆ. ಬಂದ್ರು, ಫೋಟೋ ತೆಗೆಸಿಕೊಂಡ್ರು ಅನ್ನೋ ಕಾರಣಕ್ಕೆ ನಾವು ಅವರ ಜೊತೆ ಇರಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ 8 ಕಿ.ಮೀ. ಶವ ಹೊತ್ತು ನಡೆದ ಗ್ರಾಮಸ್ಥರು!
ರವಿಯಿಂದ ವರ್ಗಾವಣೆ ದಂಧೆ ನಡೆಯುತ್ತಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಬ್ ಇನ್ಸ್ಪೆಕ್ಟರ್ ಸ್ಕ್ಯಾಮ್ನಲ್ಲಿ ಯಾರನ್ನ ಬಿಟ್ಟಿದ್ದೇವೆ ಹೇಳಿ? ಇದೇ ರವಿ ಸಿಗಲಿ, ಯಾರೇ ಇದ್ದರೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಮೆಲ್ನೋಟಕ್ಕೆ ಏನನ್ನೂ ಹೇಳಲು ಆಗಲ್ಲ, ವಿಚಾರಣೆ ಹೊರಗೆ ಬರಲಿ ನೋಡೋಣ ಎಂದರು.
ಈ ನಡುವೆ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ (Congress) ಏನೇ ಆರೋಪ ಮಾಡೋದಕ್ಕೂ ಹೇಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆಯಲು ಕಾರಣ. ಆತನನ್ನ ನಾವು ಮಟ್ಟ ಹಾಕುತ್ತೇವೆ. ಯಾರೇ ಆಗಿದ್ರೂ ಬಿಡೋದಿಲ್ಲ, ಬಂಧನ ಮಾಡಿಯೇ ಮಾಡುತ್ತೇವೆ. ನಾವು ಯಾರ ಕರೆ ಬಂದರೂ ಪ್ರತಿಕ್ರಿಯೆ ಮಾಡಲೇಬೇಕು, ಆಗ ಇಂತಹವರೂ ಕೂಡ ಕರೆ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮೆಟ್ರೋ ದುರಂತ – 8 ಮಂದಿ ಮೇಲೆ FIR: ಆರಗ ಜ್ಞಾನೇಂದ್ರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k