ಯಾದಗಿರಿ: ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ತ್ರಿಪುರ ಸುಂದರ ಅಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ (Sharanappa Darshanapura) ಲೇವಡಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮೈ ಬಣ್ಣದ ಬಗ್ಗೆ ಟೀಕೆ ಮಾಡಿರುವ ವಿಚಾರಕ್ಕೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಆರಗ ಜ್ಞಾನೇಂದ್ರ ಅವನೇನು ಪರಿಪೂರ್ಣ, ತ್ರಿಪುರ ಸುಂದರ ಅಲ್ಲ ಅಂತಾ ಏಕವಚನದಲ್ಲಿಯೇ ಲೇವಡಿ ಮಾಡಿದ್ರು.
ಬೇರೆ ದೇಶದಲ್ಲಿ ಇಂತಹ ವರ್ಣಬೇಧ ನೀತಿ ನಡಿಯುತ್ತೆ. ಆದರೆ ಭಾರತ ದೇಶದಲ್ಲಿ ನಾವು ಹೆಂಗೆ ಇರುತ್ತೀವಿ ಹಂಗೆ ಇರುತ್ತೇವೆ ಅಂತಾ ತಿರುಗೇಟು ನೀಡಿದ ಅವರು, ನಾವು ಇದೇ ಕಲರ್ ಬೇಕು ಅಂತಾ ಅರ್ಜಿ ಹಾಕಿ ಹುಟ್ಟಿ ಬಂದಿರೋದಿಲ್ಲ. ಅವರ ಬಗ್ಗೆ ಮಾತಾಡಿದ್ರೆ ಜಾಸ್ತಿನೇ ಆಗುತ್ತೆ ಅಂತಾ ಕೌಂಟರ್ ಕೊಟ್ರು. ಇದನ್ನೂ ಓದಿ: ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು – ಪ್ರಿಯಾಂಕ್ ಖರ್ಗೆ ತಿರುಗೇಟು
ಇದೇ ವೇಳೆ ಬಿಜೆಪಿ (BJP) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ಬಿಜೆಪಿ ಅವರಿಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ನಾವು ಕೇವಲ 15 ದಿನಗಳಲ್ಲಿ ಮಂತ್ರಿ ಮಂಡಲ ರಚನೆ ಮಾಡಿ, ನೀಡಿದ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದೇವೆ. ಹಾಗಾಗಿ ಬಿಜೆಪಿಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗದೇ ಹತಾಶಾರಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂತಾ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
Web Stories