Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಏ.10 ಮಹಾವೀರ ಜಯಂತಿ – ಏನಿದರ ಮಹತ್ವ? ಆಚರಣೆ ಹೇಗೆ?

Public TV
Last updated: April 9, 2025 11:12 am
Public TV
Share
3 Min Read
Mahaveera 1
SHARE

ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾದ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏ.10 ರಂದು ಆಚರಣೆ ಮಾಡಲಾಗುತ್ತದೆ. ಆಚರಣೆ ಹೇಗೆ? ಆಚರಣೆಯ ಮಹತ್ವ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದಲ್ಲಿ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. ಅವರು 30ನೇ ವಯಸ್ಸಿನಲ್ಲಿ, ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರು. ಇನ್ನೂ ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ.

Mahaveer

ಪ್ರಾಪಂಚಿಕ ಜೀವನ ತ್ಯಜಿಸಿದ್ದು ಭಗವಾನ್ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಆತಂರಿಕ ಶಾಂತಿ ಮತ್ತು ಜ್ಞಾನೋದಯವನ್ನು ಪಡೆಯಲು ರಾಜ್ಯ, ಕುಟುಂಬ ಹಾಗೂ ಲೌಕಿಕ ಕರ್ತವ್ಯಗಳನ್ನು ತೊರೆಯುತ್ತಾರೆ. ಅವರು ಅಶೋಕ ವೃಕ್ಷದ ಕೆಳಗೆ 12 ವರ್ಷಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯ ಪಡೆಯುತ್ತಾರೆ. ಇವರು ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದಾರೆ.

ಈ ಹಬ್ಬದ ಮಹತ್ವ
ಮಹಾವೀರ ಜಯಂತಿ ಜೈನರ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಭಗವಾನ್ ಮಹಾವೀರರ ಬೋಧನೆಗಳಾದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಸನ್ಯಾಸ ಜನರ ನೈತಿಕ ನಡವಳಿಕೆಯ ಅಡಿಪಾಯವನ್ನು ನಿರ್ಮಾಣ ಮಾಡುತ್ತದೆ.

ಮಹಾವೀರ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ?
ಈ ದಿನದಂದು ಜೈನರು ಪ್ರಾರ್ಥನೆ, ಧಾರ್ಮಿಕ ಮೆರವಣಿಗೆ,ದಾನ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗುತ್ತಾರೆ. ಜೈನ ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಿ, ಅನೇಕ ಸ್ಥಳಗಳಲ್ಲಿ ರಥಯಾತ್ರೆ ನಡೆಸಲಾಗುತ್ತದೆ. ರಥ ಅಥವಾ ಪಲ್ಲಕ್ಕಿಯಲ್ಲಿ ಭಗವಾನ್ ಮಹಾವೀರರ ವಿಗ್ರಹ ಅಥವಾ ಚಿತ್ರವನ್ನು ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

Mahaveera 1 1

ಮನೆ ಅಥವಾ ಬಸದಿಗಳಲ್ಲಿ ಮಹಾವೀರ ಸ್ವಾಮಿಯ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡುತ್ತಾರೆ. ಈ ಸಮಯದಲ್ಲಿ, ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಬೋಧನೆಗಳನ್ನು ವಿವರಿಸುತ್ತಾರೆ. ಈ ದಿನ, ದೇಶಾದ್ಯಂತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಈ ಶುಭ ದಿನದಲ್ಲಿ ತಯಾರಿಸಲಾಗುವ ಭಕ್ಷ್ಯಗಳು
ಮಹಾವೀರ ಜಯಂತಿಯಂದು , ಜೈನರು ಜೈನ ಧರ್ಮದ ತತ್ವಗಳಿಗೆ ಹೊಂದಿಕೆಯಾಗುವ ವಿವಿಧ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ. ದಾಲ್ ಬಾತಿ ಚುರ್ಮಾ , ಧೋಕ್ಲಾ , ಸಾಬುದಾನ ಖಿಚಡಿ, ಕಚೋರಿ, ಪುರಿ ಮತ್ತು ಸಬ್ಜಿ , ಜೈನ್ ಪುಲಾವ್ , ಮತ್ತು ಜೈನ್ ಭಿಂಡಿ ಮಸಾಲಾ ಸೇರಿದಂತೆ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಹಬ್ಬದ ದಿನ ಉಪವಾಸ ಆಚರಿಸುವವರು ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ.

ತೀರ್ಥಂಕರರು ಎಂದರೆ ಯಾರು?
ಪೌರಾಣಿಕ ಕಥೆಗಳ ಪ್ರಕಾರ, ಮಹಾವೀರರನ್ನು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದಾರೆ. ಕಠಿಣ ತಪಸ್ಸು ಮಾಡಿ ಇಂದ್ರಿಯಗಳು ಮತ್ತು ಮನಸ್ಸಿನ ಭಾವನೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರನ್ನು ತೀರ್ಥಂಕರರು ಎಂದು ಹೇಳಲಾಗುತ್ತದೆ.

PARSHVANATH PARVATHA

ಭಗವಾನ್ ಮಹಾವೀರರ ಐದು ತತ್ವಗಳು:
ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡ ಭಗವಾನ್ ಮಹಾವೀರರು ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿಸಿದರು. ಮಹಾವೀರರು 5 ಮುಖ್ಯ ತತ್ವಗಳನ್ನು ನೀಡಿದ್ದರು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ.

ಸತ್ಯ, ಅಹಿಂಸೆ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ವಿಷಯ ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದು), ಬ್ರಹ್ಮಚರ್ಯವನ್ನು ಅನುಸರಿಸುವುದು. ಭಗವಾನ್ ಮಹಾವೀರರ ಈ ಐದು ತತ್ವಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

ಜೈನ ಧರ್ಮದ ಪ್ರಮುಖ ಕ್ಷೇತ್ರಗಳು
ಕುಂದಲ್ಪುರ: ಇದು ಬಿಹಾರದ ನಳಂದಾ ಜಿಲ್ಲೆಯಲ್ಲಿದೆ. ಈ ಸ್ಥಳವು ಪಾಟ್ನಾದಿಂದ 100 ಕಿಮೀ ಮತ್ತು ಬಿಹಾರ ಷರೀಫ್‌ನಿಂದ ಕೇವಲ 15 ಕಿಮೀ ದೂರದಲ್ಲಿದೆ. ಇದು ಮಹಾವೀರರ ಜನ್ಮಸ್ಥಳವಾಗಿದ್ದು, ಈ ಸ್ಥಳವನ್ನು ಜೈನ ಧರ್ಮದಲ್ಲಿ ಕಲ್ಯಾಣ ಕ್ಷೇತ್ರವೆಂದು ಪರಿಗಣಿಸಲಾಗಿದೆ.

ಪಾರ್ಶ್ವನಾಥ ಪರ್ವತ: ಸಮ್ಮೇದ್ ಶಿಖರ್ಜಿಯನ್ನು ಜೈನ ಧರ್ಮದ ಅತಿದೊಡ್ಡ ಯಾತ್ರಾ ಕೇಂದ್ರವೆಂದು ಪರಿಗಣಿಸಲಾಗಿದೆ. ಇದು ಭಾರತದ ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಚೋಟಾ ನಾಗ್ಪುರ ಪ್ರಸ್ಥಭೂಮಿಯ ಪರ್ವತದ ಮೇಲಿದೆ. ಈ ಪರ್ವತವನ್ನು ಪಾರ್ಶ್ವನಾಥ ಪರ್ವತ ಎಂದು ಕೂಡ ಕರೆಯಲಾಗುತ್ತದೆ.

Bahubali

ಶ್ರವಣಬೆಳಗೊಳ: ಶ್ರವಣ ಬೆಳಗೊಳ ಕರ್ನಾಟಕದಲ್ಲಿದೆ ಇಲ್ಲಿ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣವಾಗಿ ಒಂದೇ ಕಲ್ಲಿನಿಂದ ಕೆತ್ತಲಾಗಿದೆ.

TAGGED:JainismkarnatakaMahavir jayantiMahavira Janma Kalyanakaಜೈನ ಧರ್ಮಮಹಾವೀರ ಜನ್ಮಕಲ್ಯಾಣಮಹಾವೀರ ಜಯಂತಿ
Share This Article
Facebook Whatsapp Whatsapp Telegram

You Might Also Like

Garbage Truck 4
Bengaluru City

ಬೆಂಗಳೂರು | ಮಹಿಳೆಯ ಭಯಾನಕ ಹತ್ಯೆ ಕೇಸ್‌ – ಅಸ್ಸಾಂ ಮೂಲದ ಲಿವ್‌ ಇನ್‌ ಗೆಳೆಯ ತಮ್ಸುದ್ದಿನ್ ಅರೆಸ್ಟ್‌

Public TV
By Public TV
14 minutes ago
ACCIDENT
Bengaluru City

ನೆಲಮಂಗಲದಲ್ಲಿ ಸರಣಿ ಅಫಘಾತ – ಅದೃಷ್ಟವಶಾತ್‌ ವಾಹನ ಸವಾರರು ಪಾರು

Public TV
By Public TV
31 minutes ago
Accident
Crime

ತುಮಕೂರು | ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
40 minutes ago
Firozpur
Latest

ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ

Public TV
By Public TV
1 hour ago
Mobile video recording
Crime

ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಮದುವೆಯಾಗುವಂತೆ ಟಾರ್ಚರ್‌!

Public TV
By Public TV
2 hours ago
Pension
Bengaluru City

ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯೋರಿಗೆ ಶಾಕ್ – 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ ಅನುಮಾನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?