ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Powerstar PuneethRajkumar) ಈಗ ನೆನಪು ಮಾತ್ರ. ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅನ್ನುವ ಹಾಗೆ ಪುನೀತ್ ಆಗಲಿ ವರ್ಷ ಆಗುತ್ತಿದ್ರೂ ಅವರ ನೆನಪು ಮಾತ್ರ ಅಜರಾಮರ.
ಹೌದು. ಪುನೀತ್ ರನ್ನ ಕಳೆದುಕೊಂಡು ಇದೇ ತಿಂಗಳ 29 ಕ್ಕೆ ವರ್ಷ ಕಳೆಯಲಿದೆ. ಅಂದಹಾಗೆ ಕಳೆದ ವರ್ಷ ಇದೇ ದಿನ ಅಕ್ಟೋಬರ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯ (Ghat Subrahamanya) ಕ್ಕೆ ಅಪ್ಪು ಭೇಟಿ ನೀಡಿದ್ದರು.
ದೇವರ ದರ್ಶನ ಪಡೆದ ನಂತರ ಪುನೀತ್ ದೇವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಕೆಲ ಕಾಲ ಮಾತನಾಡಿದ್ದರು. ಈ ವೇಳೆ ಪುಟಾಣಿ ಅಪ್ಪು ಅಭಿಮಾನಿ ಸಹ ಪುನೀತ್ ರ ಸಿನಿಮಾದ ಡೈಲಾಗ್ ಹೇಳಿ ಅಪ್ಪು ರನ್ನ ಸಂತೋಷಪಡಿಸಿದ್ದರು. ಇದನ್ನೂ ಓದಿ: Exclusive -‘ಕಾಂತಾರ’ ನೋಡಿದ ರಜನಿಕಾಂತ್: ಕಾಲ್ ಮಾಡಿ ಸರ್ ಪ್ರೈಸ್ ಕೊಟ್ಟ ತಲೈವ
ಇದೀಗ ಇದೇ ಫೋಟೋಗಳನ್ನ ಘಾಟಿ ದೇವಾಲಯದ ಸಿಬ್ಬಂದಿ ಹಂಚಿಕೊಂಡು ಅಪ್ಪು ಅವರ ನೆನಪು ಮಾಡಿಕೊಂಡಿದ್ದಾರೆ.