ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಲ್ಲಿ ಪ್ರಾರಂಭವಾದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ದೆಹಲಿವರೆಗೆ ತೆಗೆದುಕೊಂಡು ಹೋದ ರಾಗಿ ಮುಂದೆ ನಮ್ಮ ಜನಕ್ಕೂ ಸಿಗಲಿ ಅಂತ ದೇವೇಗೌಡರ ಮೇಲಿನ ಪ್ರೀತಿಗೆ ಪರಿಷತ್ ಸದಸ್ಯ ಶರವಣ ಪ್ರಾರಂಭ ಮಾಡಿದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಲಾಭದಲ್ಲೆ ನಡೆಯುತ್ತಿದ್ದ ಅಪ್ಪಾಜಿ ಕ್ಯಾಂಟೀನ್ ಜೆಡಿಎಸ್ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ಸದ್ದಿಲ್ಲದೆ ಮುಚ್ಚಿ ಹೋಗಿದೆ. ಜೆಪಿ ಭವನಕ್ಕೆ ಜನರೇ ಬಾರದೇ ಇರೋದ್ರೀಂದ ಕ್ಲೋಸ್ ಮಾಡಿರೋದಾಗಿ ಶರವಣ ಹೇಳ್ತಾರೆ.
ಹನುಮಂತನಗರ ಹಾಗೂ ಜೆಪಿ ಭವನದಲ್ಲಿ ಶರವಣ ಈ ಕ್ಯಾಂಟೀನ್ ಓಪನ್ ಮಾಡಿದ್ದರು. ಹಸಿದವರ ಹೊಟ್ಟೆಗೆ ಅನ್ನ ಅನ್ನೋ ವಾಕ್ಯದೊಂದಿಗೆ ಪ್ರಾರಂಭವಾದ ಈ ಕ್ಯಾಂಟೀನ್ ಮುಚ್ಚೋಕೆ ಕಾರಣವೇ ಬೇರೆ ಅಂತಿದೆ ಮೂಲಗಳು. ಸರ್ಕಾರ ಬರೋ ಮುನ್ನ ಜೆಡಿಎಸ್ ಗೆ ಇಂದಿರಾ ಕ್ಯಾಂಟೀನ್ ಗೆ ಸೆಡ್ಡು ಹೊಡೆಯಲು ಶರವಣ ಕ್ಯಾಂಟೀನ್ ಪ್ರಾರಂಭ ಮಾಡಿದ್ರು. ಸರ್ಕಾರ ಬಂದ ಮೇಲೆ ನಮಗೆ ಯಾವುದಾದ್ರು ಒಂದು ಸ್ಥಾನ ಸಿಗುವ ಆಶಯದಲ್ಲಿ ಶರವಣ ಇದ್ದರು. ಹೀಗಾಗಿ ಹಣ ಕಡಿಮೆ ಆದರು ಇವ್ರೆ ಹಣ ಹಾಕಿಕೊಂಡು ಕ್ಯಾಂಟೀನ್ ನಡೆಸುತ್ತಿದ್ದರು. ಸರ್ಕಾರ ಬಂದ ಮೇಲೆ ದೊಡ್ಡಗೌಡ್ರ ಫ್ಯಾಮಿಲಿ ನಿಷ್ಠಾವಂತರನ್ನ ದೂರ ತಳ್ಳಿದ್ದಾರಂತೆ. ಎಲ್ಲಾ ಲಾಸ್ ಮಾಡಿಕೊಂಡು ನಾವ್ಯಾಕೆ ಇಷ್ಟು ರಿಸ್ಕ್ ತಗೋಬೇಕು ಅಂತ ಜೆಪಿ ಭವನದ ಕ್ಯಾಂಟೀನ್ ಕ್ಲೋಸ್ ಮಾಡಿ ಪರೋಕ್ಷವಾಗಿ ಅಸಮಾಧಾನ ತೋರಿಸಿದ್ದಾರಂತೆ. ಹನುಮಂತ ನಗರದ ಕ್ಯಾಂಟೀನ್ ಸದ್ಯಕ್ಕೆ ನಡೆಯುತ್ತಿದೆ ಅಂತೆ.
ಗೌಡ್ರ ಫ್ಯಾಮಿಲಿ ಮೇಲೆ ಕೋಪಕ್ಕೆ ಮಾಡಿದ್ರೋ, ಅಥವಾ ಲಾಸ್ ಆಗುತ್ತೆ ಅಂತ ಮಾಡಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಡಿಮೆ ಹಣಕೊಟ್ಟು ಮುದ್ದೆ ಸವಿಯುತ್ತಿದ್ದ ಜನರಿಗೆ ಮಾತ್ರ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿರೋದು ನೋವು ತಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv