ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ

Public TV
1 Min Read

– ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಣಿಸಿದ ಎದೆನೋವು

ಚೆನ್ನೈ: ತಮಿಳು  (Tamil Cinema) ನಿರ್ದೇಶಕ ವಿಕ್ರಂ ಸುಗುಮಾರನ್ (47) (Vikram Sugumaran) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

ನಿರ್ಮಾಪಕರೊಬ್ಬರಿಗೆ ಹೊಸ ಚಿತ್ರದ ಕತೆ ಹೇಳಿ ಮಧುರೈನಿಂದ ಚೆನ್ನೈಗೆ ಬಸ್‌ನಲ್ಲಿ ಹೊರಟಿದ್ದಾಗ, ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಕ್ರಂ ಸುಗುಮಾರನ್ ಚೊಚ್ಚಲ ಚಿತ್ರ ‘ಮಧ ಯಾನೈ ಕೂಟ್ಟಂ’ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರವಾಗಿದೆ. ಇದನ್ನೂ ಓದಿ: ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

ವಿಕ್ರಮ್ ಸುಗುಮಾರನ್ 1999 ಮತ್ತು 2000ರ ನಡುವೆ ನಿರ್ದೇಶಕ ಬಾಲು ಮಹೇಂದ್ರ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ‘ಮಧ ಯಾನೈ ಕೂಟ್ಟಂ’ ಚಿತ್ರದ ಮೂಲಕ ಮೆಚ್ಚುಗೆ ಪಡೆದಿದ್ದರು. ಅವರು ‘ಥೇರಮ್ ಪೋರಮ್’ ಎಂಬ ಹೊಸ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಕ್ರಮ್ ಸುಗುಮಾರನ್ ಅವರ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆದಿದೆ. ಇವರ ಸಾವಿಗೆ ತಮಿಳು ಚಿತ್ರದ ನಟ, ನಟಿಯರು ಹಾಗೂ ಆಪ್ತವಲಯ ಕಂಬನಿ ಮಿಡಿದಿದೆ. ಇದನ್ನೂ ಓದಿ: ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

Share This Article