ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಆನೆಯ ರಕ್ಷಣೆ

Public TV
1 Min Read
ಮದಕ 2

ಕೊಡಗು: ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

mdk elephant 5

ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ವಲ್ಲೂರು ಗ್ರಾಮದ ಕಾಡಂಚಿನ ಕೆರೆಯಲ್ಲಿ ಗಾಯಗೊಂಡಿತ್ತು. ಆನೆ ಕಳೆದ ಎರಡು ತಿಂಗಳಿನಿಂದ ಗಾಯಗೊಂಡು ಕೆರೆಯ ದಡದಲ್ಲಿಯೇ ವಾಸ್ತವ್ಯ ಹೂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಪಶು ವೈದ್ಯರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.

mdk elephant 2

ಕಾಡಾನೆಯನ್ನು ರಕ್ಷಿಸಲು ಅಭಿಮನ್ಯು. ಕೃಷ್ಣ, ಭೀಮ, ಗೋಪಾಲಕೃಷ್ಣ ಮತ್ತು ದ್ರೋಣ ಎಂಬ ಐದು ಸಾಕಾನೆಗಳನ್ನು ಕಾರ್ಯಚಾರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಅನೆಯ ಕಾಲಿನ ಬಲ ಭಾಗದ ತೊಡೆಯಲ್ಲಿ ದೊಡ್ಡ ಗಾಯವಾಗಿದ್ದು, ಗಾಯದಿಂದ ಹುಳುಗಳು ಉದುರುತ್ತಿದವು ಹಾಗು ಬೆನ್ನಿನ ಭಾಗದಲ್ಲಿಯೂ ಸಹ ಗಾಯಗಳಾಗಿವೆ. ಪಶುವೈದ್ಯಾಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಸಂಪೂರ್ಣ ಗುಣಮುಖವಾದ ನಂತರ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

mdk elephant 3

mdk elephant 1

ಮದಕ 1

Share This Article