ವಿಡಿಯೋ: ವಿವಾದಕ್ಕೆ ಕಾರಣವಾಯ್ತು ಯಕ್ಷಗಾನ ಶೃಂಗಾರ ದೃಶ್ಯ!

Public TV
1 Min Read

ಮಂಗಳೂರು: ಯಕ್ಷಗಾನ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕಲಾವಿದರು ಚುಂಬಿಸಿದ ದೃಶ್ಯ ಈಗ ವಿವಾದಕ್ಕೆ ಕಾರಣವಾಗಿದೆ.

ರಾಮ ಕಾರುಣ್ಯ ಎಂಬ ಪ್ರಸಂಗದಲ್ಲಿ ಜಯಂತ ಮತ್ತು ಸುಷಮೆ ಎಂಬ ಪತಿ ಪತ್ನಿಯರ ಪಾತ್ರದಲ್ಲಿ ಕಲಾವಿದರು ಶೃಂಗಾರ ರಸದಲ್ಲಿ ಅಭಿನಯಿಸಿದ್ದರು. ಕಟೀಲು ಮೇಳದ ಸ್ತ್ರೀ ವೇಷಧಾರಿ ಪ್ರಶಾಂತ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಹೀಗೆ ಚುಂಬಿಸಿದ್ದು ಶಾಸ್ತ್ರೀಯ ಯಕ್ಷಗಾನ ಕಲಾವಿದರ ಆಕ್ಷೇಪಕ್ಕೆ ಕಾರಣವಾಗಿದೆ.

ಬಂಟ್ವಾಳ ತಾಲೂಕಿನ ವಗೆನಾಡು ಸುಬ್ರಾಯ ದೇವಸ್ಥಾನದಲ್ಲಿ ಕಳೆದ ಸೆ.16 ರಂದು ಯಕ್ಷಗಾನ ವೈಭವ ನಡೆದಿತ್ತು. ತೆಂಕುತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಯಕ್ಷಗಾನ ನಾಟ್ಯ ವೈಭವಕ್ಕೆ ಭಾಗವತರಾಗಿದ್ದರು. ಈಗ ಶೃಂಗಾರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಬೇಕೆಂದೇ ಮುತ್ತು ಕೊಟ್ಟಿರುವುದು ಅಲ್ಲ. ಪಾತ್ರದ ದೃಶ್ಯದ ವೇಳೆ ಟೋಪನ್ ಗೆ ಮುತ್ತು ನೀಡಿದ್ದಾರೆ. ನಾವು ಮಾಡಿದ್ದು ತಪ್ಪು ಆದರೆ ಖಂಡಿತ ಒಪ್ಪುತ್ತೇನೆ ಎಂದು ತಿಳಿಸಿದ್ದಾರೆ.

https://youtu.be/5caQu_u6mxA

https://youtu.be/9sKsONVo7ro

 

Share This Article
Leave a Comment

Leave a Reply

Your email address will not be published. Required fields are marked *