ರಾಜಕೀಯಕ್ಕೆ ವಿಜಯ್‌ ಬ್ಲಾಕ್‌ಬಸ್ಟರ್‌ ಎಂಟ್ರಿ – ರಶ್ಮಿಕಾ, ರಜನಿ, ಕಮಲ್‌ ಬೆಸ್ಟ್‌ ವಿಶ್‌

2 Min Read

– ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರ

ತಮಿಳುನಾಡು: ಚೊಚ್ಚಲ ಪ್ರಯತ್ನದಲ್ಲೇ ರಾಜಕೀಯ ರಂಗಕ್ಕೆ ಬ್ಲಾಕ್‌ಬಸ್ಟರ್‌ ಎಂಟ್ರಿ ಕೊಟ್ಟಿರುವ ಟಿವಿಕೆ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್‌ (Thalapathy Vijay) ಈಗ ಸುದ್ದಿಯಲ್ಲಿದ್ದಾರೆ. ರಾಜಕೀಯ ಇನ್ನಿಂಗ್ಸ್‌ ಶುರುವಾಗುತ್ತಿದ್ದಂತೆ ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna), ತಲೈವಾ ರಜನಿ ಕಾಂತ್, ಉಳಗನಾಯಕ ಕಮಲ್‌ ಹಾಸನ್‌ ಸೇರಿದಂತೆ ಮೊದಲಾದ ಗಣ್ಯರು ತಮ್ಮ ಸೋಷಿಯಲ್‌ ಮೀಡಿಯಾ (Social Media) ಎಕ್ಸ್‌ ಖಾತೆಗಳಲ್ಲಿ ಶುಭಹಾರೈಸಿದ್ದಾರೆ.

ಕನ್ನಡದ ನಟಿ ರಶ್ಮಿಕಾ ಮಂದಣ್ಣ, ವಿಜಯ್‌ಯವರ ಈ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿನಂದನೆಗಳು ವಿಜಯ್ ಸರ್! ತುಂಬಾ ಸಂತೋಷವಾಗುತ್ತಿದೆ. ಈ ಹೊಸ ಯುಗದಲ್ಲಿ ನಿಮ್ಮನ್ನು ನೋಡಲು ಉತ್ಸುಕರಾಗಿದ್ದೇವೆ, ನಿಮಗೆ ಒಳ್ಳೆಯದಾಗಲಿ, ಎಂದು ಹಾರೈಸಿದ್ದಾರೆ.

ತಲೈವಾ ರಜನಿಕಾಂತ್ (Rajinikanth) ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ವಿಜಯಶಾಲಿ ತಮಿಳಗ ವೆಟ್ರಿ ಕಳಗಂನ ಅಧ್ಯಕ್ಷ ತಿರು ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇನ್ನೂ ಹಿರಿಯ ನಟ ಕಮಲ್ ಹಾಸನ್ (Kamal Haasan) ಅವರು ವಿಜಯ್ ಸಾಧನೆಯನ್ನ ಶ್ಲಾಘಿಸುತ್ತಾ, ಜನರ ವಿಶ್ವಾಸ ಗಳಿಸಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ತಿರು. ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು. ಅವರ ಸಾರ್ವಜನಿಕ ಸೇವೆ ವೃದ್ಧಿಸಲಿ ಹಾರೈಸಿದ್ದಾರೆ.

ಇವರಷ್ಟೇ ಅಲ್ಲದೇ, ನಟ ಧನುಷ್, ರಾಮ್ ಚರಣ್, ಚಿರಂಜೀವಿ, ಮಹೇಶ್ ಬಾಬು, ಅನಿರುದ್ಧ್ ರವಿಚಂದರ್, ಕಾಜಲ್ ಅಗರ್ವಾಲ್, ಕಾರ್ತಿ ಮತ್ತು ಸಿಲಂಬರಸನ್, ಗಾಯಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಶುಭಕೋರಿದ್ದಾರೆ.

Share This Article