ಬಿಜೆಪಿಗೂ, ರೆಡ್ಡಿಗೂ ಸಂಬಂಧವಿಲ್ಲ ಅಂದ ಶಾ ಹೇಳಿಕೆಗೆ ಶ್ರೀರಾಮುಲು ಹೀಗಂದ್ರು

Public TV
1 Min Read

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಧವಿಲ್ಲ ಅಂತ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಹಿರಂಗವಾಗಿ ಸ್ಪಷ್ಟಪಡಿಸಿದ್ದು, ಈ ವಿಚಾರವಾಗಿ ಸಂಸದ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಶಾ ಹೇಳಿಕೆ ಕುರಿತು ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇದ್ದಾರೆ. ಅವರು ಬೇರೆಯಲ್ಲ ನಾನು ಬೇರೆಯಲ್ಲ. ಆದ್ರೆ ಇದೀಗ ಅವರ ವಿಚಾರದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಕೆ ನಾನು ಇಷ್ಟಪಡಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

ಜನಾರ್ದನ ರೆಡ್ಡಿ ಬಿಜೆಪಿಯ ಅಭಿಮಾನಿ. ಹೀಗಾಗಿ ಅವರ ಬೆಂಬಲಿಗರು ಅಭಿಮಾನಿಗಳು ಬಿಜೆಪಿಯೊಂದಿಗೆ ಇದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಬೇರೆಯಲ್ಲ ಜನಾರ್ದನ ರೆಡ್ಡಿ ಬೇರೆಯಲ್ಲ ಹೀಗಾಗಿ ನಾನು ಮತ್ತು ರೆಡ್ಡಿ ಕುಟುಂಬ ಒಂದೇ ಆಗಿದೆ. ಜನಾರ್ದನ ರೆಡ್ಡಿ ವಿಚಾರದ ಬಗ್ಗೆ ಬಹಿರಂಗ ಚರ್ಚೆ ಮಾಡಲು ನಾನು ಇಷ್ಟಪಡಲ್ಲ. ಹಿರಿಯ ನಾಯಕರ ಜೊತೆ ನಾನು ಮಾತನಾಡಿ ಎಲ್ಲ ಸರಿಪಡಿಸುವೆ. ನಮ್ಮ ಗುರಿ ಇದೀಗ ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಗೆಲ್ಲೋದಾಗಿದೆ ಅಂದ್ರು. ಇದನ್ನೂ ಓದಿ: ಸಾರ್ವಜನಿಕ ಜೀವನ ಪರಿಗಣಿಸಿ ಬಿಜೆಪಿ ಟಿಕೆಟ್?- ರೆಡ್ಡಿ, ರಾಮುಲು ಆಪ್ತರಿಗೂ ಟಿಕೆಟ್ ಡೌಟ್

ಕೂಡ್ಲಿಗಿ ಶಾಸಕ ನಾಗೇಂದ್ರಗೆ ಅಧಿಕಾರ ಮತ್ತು ಹಣ ಬಲ ಹೆಚ್ಚಾದ ಪರಿಣಾಮ ನಮ್ಮಿಂದ ದೂರವಾಗಿದ್ದಾರೆ. ಅವರ ಬಗ್ಗೆ ಮಾತನಾಡಲು ಇಷ್ಟಪಡಲ್ಲವೆಂದು ಅಂತ ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

Share This Article
Leave a Comment

Leave a Reply

Your email address will not be published. Required fields are marked *