ನವದೆಹಲಿ: ಲೋಕಪಾಲ ರಚನೆ, ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ನೇಮಕ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸತ್ಯಾಗ್ರಹ ಆರಂಭಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಇಂದು ದೆಹಲಿಯ ರಾಮಲೀಲಾ ಮೈದಾನಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ಚರ್ಚೆ ನಡೆಸಿದ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.
ಈ ವೇಳೆ ಮಾತನಾಡಿದ ಅಣ್ಣಾ ಹಜಾರೆ ಅವರು, ಲೋಕಪಾಲ ರಚನೆ ವಿವಾದ ಇನ್ನೂ ಬಾಕಿ ಉಳಿದಿದೆ. ಸಿಎಂ ಫಡ್ನವೀಸ್ ಅವರು ವಿವಾದವನ್ನು ಇನ್ನೂ 6 ತಿಂಗಳಲ್ಲಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಸರ್ಕಾರದ ಮತ್ತು ಪ್ರಜೆಗಳು ಬೇರೆ ಅಲ್ಲ. ಜನರಿಗೆ ಒಳ್ಳೆಯದು ಮಾಡುವುದು ಸರ್ಕಾರ ಕರ್ತವ್ಯ ಎಂದು ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವ ಗಜೇಂದ್ರ ಸಿಂಗ್ ಶೆಖಾವಾತ್ ಅವರು ಸಾಥ್ ನೀಡಿದ್ದರು.
Our PM @narendramodi ji & #AnnaHazare ji’s struggle is for the same cause.
One is in Govt &other in public.
Both are determined for prosperity of farmers&corruption free India.
Both leaders are struggling to achieve same goal:CM praised #AnnaHazare for his struggle for imp issues pic.twitter.com/jebgUvPdum
— CMO Maharashtra (@CMOMaharashtra) March 29, 2018