Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bidar

6,000 ವರ್ಷದ ಇತಿಹಾಸ – ಆಂಜನೇಯನ ಮಂಗಳಾರತಿಗೆ ವಾನರ ದಂಡು

Public TV
Last updated: December 30, 2018 8:47 am
Public TV
Share
2 Min Read
BDR MONKEYS
SHARE

ಬೀದರ್: ಕಾರ್ಗಿಲ್ ಯುದ್ದದಲ್ಲಿ ಯೋಧರು ಹೋರಾಟ ಮಾಡಿದ್ದನ್ನು ನೀವು ಕೇಳಿದ್ದೀರಿ. ಆದರೆ ಗಡಿ ಜಿಲ್ಲೆಯಲ್ಲಿ ನಿಜಾಮರಿಂದ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದ್ದಾಗ ನಿಜಾಮನ ವಿರುದ್ಧ ವಾನರಗಳು ಹೋರಾಡಿದ ಇತಿಹಾಸವಿದೆ.

ಹೌದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಾಳಕಾಪೂರ್ ಗ್ರಾಮದಲ್ಲಿರುವ ಪವಾಡ ಪುರುಷ ಆಂಜನೇಯನ ದೇವಸ್ಥಾನದಲ್ಲಿ ಚಮತ್ಕಾರ ನಡೆಯುತ್ತಿದೆ. 6 ಸಾವಿರ ವರ್ಷ ಇತಿಹಾಸವಿರುವ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಆ ಸಮಯಕ್ಕೆ ಸರಿಯಾಗಿ ನೂರಾರು ಕೋತಿಗಳು ಹಾಜರಾಗಿ ಒಗಟ್ಟು ತೋರಿಸುತ್ತವೆ.

bdr 2

ಬೇರೆ ಸಮಯದಲ್ಲಿ ನೋಡಲು ಒಂದು ಮಂಗಗಳು ಸಿಗುವುದಿಲ್ಲ. ಆದರೆ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ನೂರಾರು ಮಂಗಗಳು ಎಲ್ಲಿಂದ ಬರುತ್ತವೆ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜೊತೆಗೆ 200 ವರ್ಷಗಳ ಹಿಂದೆ ನಿಜಾಮರ ದೌಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದಾಗ ಸಾವಿರಾರು ಮಂಗಳು ಒಟ್ಟಾಗಿ ಸೇರಿ ನಿಜಾಮರ ವಿರುದ್ಧ ಹೋರಾಡಿ ನಿಜಾಮರಿಂದ ಮುಕ್ತಿ ನೀಡುತ್ತಿದ್ದು, ಅಂದಿನಿಂದ ಹಿಂದೂಗಳು ನಿರಾಳವಾಗಿ ಬದುಕುತ್ತಿದ್ದಾರೆ ಎಂದು ಸ್ಥಳೀಯ ಭಕ್ರ ಅನೀಲ್‍ಕುಮಾರ್ ಕೋರೆ ಹೇಳಿದ್ದಾರೆ.

ಈ ದೇವಸ್ಥಾನಕ್ಕೆ ಬಹುದೊಡ್ಡ ಇತಿಹಾಸವಿದ್ದು, ಶ್ರೀರಾಮ, ಲಕ್ಷ್ಮಣ ವನವಾಸದಲ್ಲಿ ಇರುವಾಗ ಈ ಚಳಕಾಪೂರ್ ಅರಣ್ಯದಲ್ಲಿ ವಾಸವಾಗಿದ್ದರಂತೆ. ಚಳಕಾ ದೇವಿಯ ಮಾತಿನಂತೆ ಶ್ರೀರಾಮ ಅಸುರನ್ನು ಸಂಹಾರ ಮಾಡಿದ್ದರಿಂದ “ಚಳಕಾಪೂರ್” ಎಂದು ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ. ಇನ್ನು ಹನುಮಂತ ಸಂಜೀನಿ ಪರ್ವತ ಅಂಗೈಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಒಂದು ಸಣ್ಣ ತುಂಡು ಈ ಸ್ಥಳದಲ್ಲಿ ಬಿದ್ದಿರುವ ಕಾರಣ ಇಲ್ಲಿ ಆಂಜನೇಯ ನೆಲೆಸಿದ್ದಾನೆ. ಈ ದೇವಸ್ಥಾಕ್ಕೆ ಬಂದು ಹರಕೆ ಬೇಡಿಕೊಂಡರೆ ಮನಸ್ಸಿನ ಇಷ್ಟಾರ್ಥ ದಯ ಪಾಲಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.

bdr

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ್ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಪವರ್ ಫುಲ್ ಆಂಜನೇಯನ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ದೇವರ ವಿಶೇಷತೆ ಜೊತೆಗೆ ಭಕ್ತರು ಮಂಗಗಳ ಪವಾಡ ನೋಡಿ ಆಶ್ಚರ್ಯಚಕಿತರಾಗಿ ಮಂಗಗಳಿಗೆ ಹಣ್ಣು, ಹಂಪಲು ನೀಡಿ ದರ್ಶನ ಪಡೆಯುತ್ತಾರೆ ಎಂದು ಭಕ್ತ ಆಕಾಶ್ ಮಾಳೆ ತಿಳಿಸಿದ್ದಾರೆ.

ನಾವು ಹಲವಾರು ರೀತಿಯ ಪವಾಡಗಳನ್ನು ನೋಡಿದ್ದೇವೆ. ಆದರೆ ಈ ರೀತಿ ಮಂಗಗಳ ಪವಾಡ ನೋಡುತ್ತಿರುವುದು ಇದೇ ಮೊದಲು ಎನ್ನಬಹುದು. ಮಂಗಗಳಲ್ಲಿ ದೇವರು ಸ್ವರೂಪ ಇದೆ ಎನ್ನುವುದಕ್ಕೆ ಈ ದೇವಸ್ಥಾನಕ್ಕೆ ಬರುವ ಕೋತಿಗಳ ಸಮೂಹವೇ ಸಾಕ್ಷಿಯಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:anjaneya templebidarmonkeysPublic TVಆಂಜನೇಯ ದೇವಾಲಯಪಬ್ಲಿಕ್ ಟಿವಿಬೀದರ್ಮಂಗಗಳು
Share This Article
Facebook Whatsapp Whatsapp Telegram

You Might Also Like

M.P Renukacharya
Davanagere

ಜಾತಿಗಣತಿ ವರದಿ ಬಿಡುಗಡೆ ಮಾಡ್ತೀನಿ ಎಂದಿದ್ದ ಸಿಎಂ ಪೌರುಷ ಏನಾಯ್ತು? – ರೇಣುಕಾಚಾರ್ಯ

Public TV
By Public TV
2 minutes ago
Forever Naveen Kumar Kannada Cinema Sandalwood
Cinema

ಸೆಲೆಬ್ರಿಟಿ ವಸ್ತ್ರವಿನ್ಯಾಸಕ ನವೀನ್ ಕುಮಾರ್‌ಗೆ ಅಮೆರಿಕ ಗೌರವ

Public TV
By Public TV
21 minutes ago
Mangaluru Rain
Dakshina Kannada

ಮಂಗಳೂರಿನಲ್ಲಿ ಭಾರೀ ಮಳೆ – ಪಂಪ್‌ವೆಲ್ ಸರ್ಕಲ್ ಮತ್ತೆ ಮುಳುಗಡೆ

Public TV
By Public TV
34 minutes ago
ED 1
Bengaluru City

Exclusive | ವಾಲ್ಮೀಕಿ ಹಗರಣ: ಬಳ್ಳಾರಿ ಚುನಾವಣೆಗೆ 27 ಕೋಟಿ ಬಳಕೆಯಾಗಿದ್ದು ಹೇಗೆ? – 87 ಕೋಟಿ ಎಲ್ಲೆಲ್ಲಿ ಹಂಚಿಕೆಯಾಯ್ತು?

Public TV
By Public TV
39 minutes ago
Siddaramaiah 4
Districts

ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ

Public TV
By Public TV
1 hour ago
Bunny Hop Catch
Cricket

`ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?