ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯಲ್ಲಿ ಆಂಜನೇಯಸ್ವಾಮಿ ಪ್ರಾರ್ಥನೆ- ವೀಡಿಯೋ ವೈರಲ್

Public TV
2 Min Read
shrirangapattana hanuman chalisa 3

ಮಂಡ್ಯ: ಜಾಮಿಯಾ ಮಸೀದಿಯಲ್ಲಿ ಇಬ್ಬರು ಹನುಮ ಭಕ್ತರು ಆಂಜನೇಯಸ್ವಾಮಿ ಪ್ರಾರ್ಥನೆ ಮಾಡಿರುವ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಶನಿವಾರ ಶ್ರೀರಂಗಪಟ್ಟಣ ಚಲೋಗೆ ಕರೆ ಹಿನ್ನೆಲೆಯಲ್ಲಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಟ್ಟೆಚ್ಚರ ವಹಿಸಿದ್ದರು. ಆದರೂ ನೂರಾರು ಹಿಂದೂ ಕಾರ್ಯಕರ್ತರು ಬೈಕ್ ಮೂಲಕ ಶ್ರೀರಾಮ ಘೋಷಣೆ ಕೂಗುತ್ತಾ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ಆದರೆ ಪೊಲೀಸರು ಹಿಂದೂ ಕಾರ್ಯಕರ್ತರನ್ನು ಕಿರಂಗೂರು ಬಳಿ ತಡೆದಿದ್ದರು.

shrirangapattana hanuman chalisa 2

ಆದರೂ ಅಲ್ಲೇ ಇರುವ ಬನ್ನಿಮಂಟಪದಲ್ಲಿ ಆಂಜನೇಯಸ್ವಾಮಿ ಪೂಜೆ ಸಲ್ಲಿಸಿ, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು. ಜೈ ಶ್ರೀರಾಮ್, ಜೈ ಆಂಜನೇಯ ಎಂದು ಘೋಷಣೆ ಕೂಗಿಕೊಂಡು ಹಿಂದೂ ಕಾರ್ಯಕರ್ತರು ಕುಣಿದು, ಮಂಗಳಾರತಿ ಮಾಡಿ ಪೂಜೆ ಮಾಡಿದರು. ಆದರೆ ಇಬ್ಬರು ಹನುಮ ಭಕ್ತರು ಮಸೀದಿಯ ಒಳಗಡೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪ್ರಾರ್ಥನೆ ಮಾಡಿರುವ ವೀಡಿಯೋವನ್ನು ಹಿಂದೂ ಮುಖಂಡರು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಹಿಂದೂ ಸಂಘಟನೆ ಮುಖಂಡರು ಮಾತನಾಡಿ, ಮೂಡಲಬಾಗಿಲು ಆಂಜನೇಯ ದೇವಾಲಯದಲ್ಲಿ ಹನುಮಾನ್ ಚಾಲೀಸಾವನ್ನು ನಾವು ಪಠಿಸಿದ್ದೇವೆ. ಇಬ್ಬರು ಹಿಂದೂ ಸಂಘಟನೆ ಮುಖಂಡರು ದೇವಾಲಯದ ಒಳಗೆ ಕೂತು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ನಾವು ಈ ಹೋರಾಟದಲ್ಲಿ ಮೊದಲು ಗೆಲವು ಸಾಧಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಸೀದಿಯೋ, ಮಂದಿರವೋ ಕೋರ್ಟ್‍ನಲ್ಲಿ ನೋಡುತ್ತೇವೆ – ಮೊದಲು ಅಕ್ರಮವಾಗಿ ನಡೆಸುತ್ತಿರುವ ಮದರಸಾವನ್ನು ನಿಲ್ಲಿಸಿ

shrirangapattana hanuman chalisa 1

ಶ್ರೀರಂಗಪಟ್ಟಣ ಚಲೋ ಇಂದಿಗೆ ಅಂತ್ಯವಲ್ಲ. ದೇವಾಲಯ ನಮ್ಮ ವಶಕ್ಕೆ ಪಡೆಯುವವರೆಗೂ ಹೋರಾಟ ಇರುತ್ತೆ. ಮೂಡಲಬಾಗಿಲುನಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಹಿಂದೂ ಮುಖಂಡರು ಘೋಷಣೆ ಕೂಗಿದರು.

ಜೂನ್ ತಿಂಗಳ ಅಂತ್ಯಕ್ಕೆ ನಮ್ಮ ಬೇಡಿಕೆ ಈಡೇರದಿದ್ದರೆ ನಾಡಿನಾದ್ಯಂತ ಎಲ್ಲಾ ಕಡೆಯಿಂದ ಹನುಮ ಭಕ್ತರು ದೇವಸ್ಥಾನಕ್ಕೆ ಬರಲಿದ್ದಾರೆ. ಮದರಸಾ ಬಂದ್ ಆಗಲೇಬೇಕು. ಇಲ್ಲದೆ ಇದ್ದರೆ ಯಾವುದೇ ಸೂಚನೆ ಕೊಡದೇ ದೇವಸ್ಥಾನಕ್ಕೆ ಬಂದು ಮದರಸಾ ಖಾಲಿ ಮಾಡಿಸುತ್ತೇವೆ. ಅವತ್ತು ನಡೆಯುವ ಎಲ್ಲಾ ಘಟನೆಗಳಿಗೂ ಮಂಡ್ಯ ಜಿಲ್ಲಾಡಳಿತ ಹೊಣೆ ಎಂದು ಹಿಂದೂ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು

shrirangapattana hanuman chalisa 2 1

ಶ್ರೀರಂಗಪಟ್ಟಣ ಮಂದಿರ ಚಲೋ ಕರೆ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿಗೆ ಸಾರ್ವಜನಿಕ ನಿರ್ಬಂಧ ಹೇರಲಾಗಿತ್ತು. ಈ ಇತಿಹಾಸ ಪ್ರಸಿದ್ಧ ಮಸೀದಿಯನ್ನು ವೀಕ್ಷಿಸಲು ರಾಜ್ಯವಲ್ಲದೆ ಹೊರ ರಾಜ್ಯದಿಂದಲೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಆದರೆ ಇಂದಿನಿಂದ ನಾಳೆ ಮಧ್ಯಾಹ್ನ 12 ಗಂಟೆವರೆಗೂ ಮಸೀದಿಗೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *