ಕ್ಷೇತ್ರದ ಒಳಿತಿಗಾಗಿ ಕೈ ಶಾಸಕಿ ನಿಂಬಾಳ್ಕರ್ ತಿರುಪತಿ ಪಾದಯಾತ್ರೆ

Public TV
1 Min Read
anjali nimbalkar 1

ಕೋಲಾರ: ನೆರೆಯಿಂದ ತತ್ತರಿಸಿರುವ ಕ್ಷೇತ್ರದ ಜನರನ್ನ ಕಾಪಾಡು ತಿಮ್ಮಪ್ಪ ಎಂದು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಗಳೂರಿನಿಂದ ತಿರುಪತಿಗೆ ಮಾಡುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ಕೋಲಾರ ತಾಲೂಕಿನ ಮೂಲಕ ಹಾದುಹೋಗಿ ಇಂದು ಮುಳಬಾಗಿಲು ತಾಲೂಕಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಿಂದ ತಿರುಪತಿಗೆ ಪಾದಯಾತ್ರೆ ಮಾಡುತ್ತಿರುವ ಶಾಸಕಿ, ಇಂದು ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಪ್ರಾರ್ಥನಾ ಯಾತ್ರೆ ಮಾಡಿದರು.

vlcsnap 2020 01 14 18h04m59s724

ನೆರೆಯಿಂದ ತತ್ತರಿಸಿರುವ ಬೆಳಗಾವಿ ಹಾಗೂ ಖಾನಾಪುರ ಕ್ಷೇತ್ರದ ಸಂತ್ರಸ್ತರಿಗೆ ತಿರುಪತಿ ತಿಮ್ಮಪ್ಪ ದಯೆ ತೋರಬೇಕು. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಂತ್ರಸ್ತರ ಬದುಕನ್ನು ಹಸನುಗೊಳಿಸಬೇಕೆಂದು ತಿಮ್ಮಪ್ಪನ ದರ್ಶಕ್ಕೆ ಪ್ರಾರ್ಥನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ತಮ್ಮ ಪತಿ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ದರ್ಶನಕ್ಕೆ ತೆರಳಿರುವ ಶಾಸಕಿ, ಪ್ರತಿದಿನ 30 ಕಿಲೋಮೀಟರ್‍ಗಳಷ್ಟು ಪಾದಯಾತ್ರೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *