ನಟ ಕಮಲ್ ಹಾಸನ್ (Kamal Haasan) ಅಭಿನಂದಿಸಲು ಬಂದ ಅಭಿಮಾನಿ ಮೇಲೆ ಗರಂ ಆದ ಪ್ರಸಂಗ ನಡೆದಿದೆ.
ರಾಜ್ಯಸಭೆಗೆ ನಾಮಕರಣಗೊಂಡ ಹಿನ್ನೆಲೆ ಚೆನ್ನೈನಲ್ಲಿ (Chennai) ಎಂಎನ್ಎಂ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಮಲ್ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಖಡ್ಗದ ಗಿಫ್ಟ್ ಕೊಡಲು ಮುಂದಾಗಿದ್ದಾರೆ. ಇದು ಕಮಲ್ಗೆ ಇಷ್ಟ ಆಗಲಿಲ್ಲ. ಖಡ್ಗವನ್ನು ಹಿಡಿಯಲು ನಿರಾಕರಿಸಿದರು. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್ ಬಜೆಟ್ ಸಿನಿಮಾಗೆ ಕಮಲ್ ಪ್ಲ್ಯಾನ್
VIDEO | Chennai: Actor and MNM Chief Kamal Haasan (@ikamalhaasan) gets angry at man who gifts him a sword during party meeting.#KamalHaasan_MP
(Full video available on PTI Videos – https://t.co/n147TvrpG7) pic.twitter.com/5H9KZXBoEn
— Press Trust of India (@PTI_News) June 14, 2025
ಎಚ್ಚರಿಕೆ ಕೊಟ್ಟರೂ ಅಭಿಮಾನಿ ಕೇಳಲಿಲ್ಲ. ಬಲವಂತವಾಗಿ ಖಡ್ಗ ನೀಡಲು ಮುಂದಾಗಿದ್ದಾನೆ. ಆಗ ಕಮಲ್ಗೆ ಕೋಪ ಬಂದು, ಗರಂ ಆಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆಗೆ, ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕಮಲ್ ಅಭಿನಯದ ಥಗ್ಲೈಫ್ ಚಿತ್ರ ರಿಲೀಸ್ಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಚಿತ್ರತಂಡ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ವೇಳೆ ಕನ್ನಡಿಗರ ಕ್ಷಮೆ ಕೇಳದ ಕಮಲ್ಗೆ ಹೈಕೋರ್ಟ್ ಚಾಟಿ ಬೀಸಿತ್ತು. ಬಳಿಕ ಥಗ್ಲೈಫ್ (Thug Life) ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್ ಜೂ.20ಕ್ಕೆ ಮುಂದೂಡಿತ್ತು.
ಶುಕ್ರವಾರ ವಿಚಾರಣೆ ನಡೆಸಿದ್ದ ನ್ಯಾ.ನಾಗಪ್ರಸನ್ನ ಅವರು, ಕಮಲ್ ಹಾಸನ್ಗೆ ಕ್ಷಮೆಯಾಚನೆ ಮತ್ತು ವಿವಾದ ಇತ್ಯರ್ಥ ಮಾಡಿಕೊಳ್ಳಲು ಒಂದು ವಾರ ಅವಕಾಶ ಕೋರಲಾಗಿತ್ತು. ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲಿಲ್ವಾ? ಸುಪ್ರೀಂ ಕೋರ್ಟ್ ವಿಚಾರಣೆ ಏನಾಯ್ತು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಕಮಲ್ ಪರ ವಕೀಲರು ಕ್ಷಮೆ ಕೇಳಿಲ್ಲ, ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್