– ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ
ಯಾದಗಿರಿ: ಶಿವಮೊಗ್ಗದಲ್ಲಿ (Shivamogga) ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಆಂದೋಲಶ್ರೀ (Andola Shri) ಶಿವಮೊಗ್ಗ ಘಟನೆಯನ್ನ ಖಂಡಿಸುತ್ತಾ ಎರಡು ಬಾರಿ ಹೊಡೆದ್ರೆ ಎರಡು ತುಂಡು ಆಗ್ತೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಜೊತೆಗೆ ಹಿಂದೂ ಮಹಿಳೆಯರಿಗೆ ಎಚ್ಚರಿಕೆ ಕೊಡ್ತಾರೆ. ನೀವು ಸುಮ್ನೆ ಇದ್ದರೆ ಸರಿ, ಇಲ್ಲದಿದ್ರೆ ರೇಪ್ ಮಾಡ್ತೀವಿ ಅಂತಾ ಎಚ್ಚರಿಕೆ ಕೊಡ್ತಾರೆ. ಅಂತಹ ದುಷ್ಟ ಸಾಬ್ರೆ ನಿಮ್ಮ ಹತ್ರ ಮಂಡ್ ತಲ್ವಾರ್ ಇರಬಹುದು. ಮಂಡ್ ತಲ್ವಾರ್ ನಿಂದ ಎದುರಿಸಲು ಬಂದ್ರೆ, ನಮ್ಮಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಖಡ್ಗ, ಛತ್ರಪತಿ ಶಿವಾಜಿ ಖಡ್ಗವಿದೆ. ನಮ್ದೂ ಏಕ್ ಮಾರ್ ದೋ ತುಕಡಾ. ಒಂದು ಬಾರಿ ಹೊಡೆದ್ರೆ ಎರಡು ತುಕಡಿಯಾಗುತ್ತೀರಿ. ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ರು.
ಹಿಂದೂಗಳನ್ನು ಕೆಣಕಬೆಡಿ, ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ. ಹಿಂದೂಗಳ ಮೇಲೆ ಟಾರ್ಗೆಟ್ ಮಾಡುತ್ತಿದ್ರು, ಇಲ್ಲಿ ನರಸತ್ತ ಸರ್ಕಾರವಿದೆ. ಕ್ರಮಕೈಗೊಳ್ಳಲು ಮುಂದೆ ಬರುತ್ತಿಲ್ಲ. ಹಿಂದೂ ಜಾಗೃತನಾದರೆ ಭಾರತ ಉಳಿಯಲು ಸಾಧ್ಯ. 2024ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ. ಪಾಕಿಸ್ತಾನಕ್ಕೆ ಸದೆ ಬಡಿಯುವ ನೇತಾರರು ಬೇಕಾಗಿದ್ದಾರೆ. ಭಾರತ, ಹಿಂದೂ ಸುರಕ್ಷಿತವಾಗಿ ಇರಬೇಕಾದರೆ ಭಗತ್ ಸಿಂಗ್ ಹೇಳಿದ ಹಾಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಬಂದೂಕು ಇಟ್ಟುಕೊಳ್ಳಬೇಕು. ಬಂದೂಕು ಮನೆಯಲ್ಲಿ ಇಟ್ಟುಕೊಂಡರೆ ಭಾರತ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದರು.
ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಉಡಾಫೆ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಆಂದೋಲನ ಶ್ರೀ, ಶಿವಮೊಗ್ಗದಲ್ಲಿ ಸಣ್ಣ ಘಟನೆಯಾಗಿದೆ ಅಂದಿದ್ದಾರೆ. ಪರಮೇಶ್ವರ್ ಅವರೇ, ಇದೇ ಮುಸ್ಲಿಮರು ನಿಮ್ಮ ಮನೆಗೆ ಬಂದು ನಿಮ್ಮ ಹೆಣ್ಮಕ್ಕಳಿಗೆ ಬೆದರಿಕೆ ಹಾಕಿದ್ರೆ ನಿಮ್ಮ ಸ್ಥಿತಿ ಏನಿರುತಿತ್ತು?. ಅವರ ಗುರಿ ಒಂದೇ 2047ಕ್ಕೆ ಭಾರತವನ್ನು ಇಸ್ಲಾಂ ಮಾಡುವುದಾಗಿದೆ. ಮೋದಿ, ಯೋಗಿ ಈ ದೇಶದಲ್ಲಿದ್ರೆ ನಿಮ್ಮ ಕನಸು ನನಸಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]