ಬಡಿದಾಡಿಕೊಂಡು ದಸರಾ ಆಚರಣೆ- 80ಕ್ಕೂ ಹೆಚ್ಚು ಜನರಿಗೆ ಗಾಯ

Public TV
1 Min Read
andhra pradesh

ಹೈದರಾಬಾದ್: ಬಡಿಗೆಯಿಂದ ಬಡದಾಡಿಕೊಂಡು ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಣೆ ಮಾಡಿ, 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ.

ಅರಕೇರೆ, ನೇರಣಿಕಿ, ಮಾಳ ಮಲ್ಲೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ದಸರಾವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ಪೊಲೀಸರೆದುರೇ ಸಾವಿರಾರು ಭಕ್ತರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತಾ ಆಚರಣೆ ಮಾಡಿದ್ದಾರೆ.

andhra pradesh 1

ಸುತ್ತಮುತ್ತಲು ಗ್ರಾಮಸ್ಥರು ಸೇರಿ ದಸರಾ ಹಬ್ಬಕ್ಕೆ ಕಟ್ಟಿಗೆ, ಕಬ್ಬಿಣ ಕೋಲಿನಿಂದ ಹೊಡೆದಾಟ ಮಾಡಿಕೊಂಡು ದೇವರನ್ನ ಗ್ರಾಮಕ್ಕೆ ಕರೆದುಕೊಂಡು ಹೋದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರಿಗೆ ಇದೆ. ಹೀಗಾಗಿ ಹಲವು ವರ್ಷಗಳಿಂದ ಈ ಪದ್ಧತಿ ಆಚರಣೆ ನಡೆದುಕೊಂಡು ಬಂದಿದೆ. ಇದೀಗ ಕೊರೊನಾದಿಂದ ಈ ಆಚರಣೆಗೆ ನಿಷೇಧ ಇದ್ದರು ಸ್ಥಳೀಯರು ಎಲ್ಲರೂ ಸೇರಿಕೊಂಡು ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

andhra pradesh 2

ಹೀಗೆ ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ಮುಂಜಾನೆವರೆಗೂ ನಡೆದ ಈ ಆಚರಣೆಯಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಬಡಿದಾಟಕ್ಕೆ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article