Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Special | ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

Special

ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

Public TV
Last updated: October 14, 2025 7:30 pm
Public TV
Share
4 Min Read
Andhra Pradesh Caravan
SHARE

ಪ್ರವಾಸೋದ್ಯಮ (Tourism) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ತರಲು ಆಂಧ್ರ (Andhra Pradesh) ಸರ್ಕಾರ ಮುಂದಾಗಿದೆ. ಪ್ರವಾಸಿಗರ ಮನೆಗಳಿಗೆ ತಲುಪುವ ‘ಕ್ಯಾರವಾನ್ ಪ್ರವಾಸಿ ವಾಹನಗಳು’ ಶೀಘ್ರದಲ್ಲೇ ರಾಜ್ಯದಲ್ಲಿ ಜಾರಿಗೆ ಬರಲಿವೆ. ಈ ಯೋಜನೆಯ ಮೂಲಕ ಪ್ರವಾಸಿಗರು ತಮ್ಮ ಮನೆಗಳಿಂದ ಪ್ರವಾಸಿ ತಾಣಗಳಿಗೆ ಹಾಯಾಗಿ ಪ್ರಯಾಣಿಸಬಹುದಾಗಿದೆ. ಈ ಹೊಸ ಕಲ್ಪನೆಗೆ ಅನುಗುಣವಾಗಿ ರಾಜ್ಯ ಸರ್ಕಾರವು ವಿಶೇಷ ಕ್ಯಾರವಾನ್ (Caravan) ನೀತಿಯನ್ನೂ ಸಿದ್ಧಪಡಿಸುತ್ತಿದೆ. ಹಾಗಿದ್ರೆ ಏನಿದು ಕ್ಯಾರಾವಾನ್‌? ಪ್ರವಾಸಿಗರಿಗೆ ಇದು ಹೇಗೆ ಪ್ರಯೋಜನಕಾರಿ? ಕ್ಯಾರಾವಾನ್‌ ವಿಶೇಷತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಆಂಧ್ರಪ್ರದೇಶ ಸರ್ಕಾರವು ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿಗೆ ಹೊಸ ಹಾದಿಯನ್ನು ರೂಪಿಸುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕ್ಯಾರವಾನ್ ಪ್ರವಾಸೋದ್ಯಮ ನೀತಿಯನ್ನು ಪ್ರಾರಂಭಿಸುವುದು, ಚಾಲಕರಿಗೆ ನೇರ ಹಣಕಾಸು ನೆರವು ಮತ್ತು ದೊಡ್ಡ ಪ್ರಮಾಣದ ನಗರ ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ಸಹಯೋಗದೊಂದಿಗೆ ಓಜಿ ಡ್ರೀಮ್‌ಲೈನರ್ ಕಂಪನಿಯು ವಿಶಾಖಪಟ್ಟಣದಲ್ಲಿ ಐಷಾರಾಮಿ ಕ್ಯಾರವಾನ್ ಅನ್ನು ಪ್ರಾರಂಭಿಸಿದೆ.

ಒಂದೇ ಕಡೆ ಎಲ್ಲಾ ವ್ಯವಸ್ಥೆ:
ಈ ಮೊದಲು ಪ್ರವಾಸಿಗರು ವಸತಿ ಮತ್ತು ಪ್ರಯಾಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಆದರೆ, ಕ್ಯಾರವಾನ್ ವಾಹನಗಳ ಮೂಲಕ ಪ್ರಯಾಣ, ವಸತಿ ಮತ್ತು ಆಹಾರ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಇವು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಮೊಬೈಲ್ ಮನೆಗಳು’ ಇದ್ದಂತೆ. ಪ್ರವಾಸಿಗರು ಈ ವಾಹನಗಳನ್ನು ಬುಕ್ ಮಾಡಿ ಅರಕು, ಲಂಬಸಿಂಘಿ, ಗಂಡಿಕೋಟ, ಸೂರ್ಯಲಂಕಾ ಬೀಚ್, ಶ್ರೀಶೈಲಂ ಮತ್ತು ತಿರುಪತಿಯಂತಹ ಸ್ಥಳಗಳಿಗೆ ತಮ್ಮ ಮನೆಗಳಿಂದಲೇ ಪ್ರಯಾಣಿಸಬಹುದು.

Andhra Pradesh Caravan 2

ವಿಶೇಷವಾಗಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ದೀರ್ಘ ಪ್ರಯಾಣ ಮತ್ತು ರಸ್ತೆ ಪ್ರಯಾಣಕ್ಕೆ ಕ್ಯಾರವ್ಯಾನ್‌ಗಳು ಸೂಕ್ತ. ಮಲಗಲು ಹಾಸಿಗೆ, ಅಡುಗೆ ಮಾಡಲು ಸಣ್ಣ ಅಡುಗೆಮನೆ, ಶೌಚಾಲಯ ಮತ್ತು ಕುಳಿತುಕೊಳ್ಳಲು ವ್ಯವಸ್ಥೆ ಸೇರಿದಂತೆ ಆರಾಮದಾಯಕ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅವು ಹೊಂದಿವೆ. ಕ್ಯಾರವ್ಯಾನ್‌ನ ಒಳ ವಿನ್ಯಾಸ ಸಾಮಾನ್ಯವಾಗಿ ಸರಳವಾಗಿದೆ.ಇದು ಕ್ಯಾಂಪ್, ಪಿಕ್ನಿಕ್ ಮುಂತಾದ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

ಕುಟುಂಬ, ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕ್ಯಾರವಾನ್ ಬಸ್‌ಗಳು ಅನುಕೂಲಕರವಾಗಿವೆ. ಸುಮಾರು 10 ರಿಂದ 15 ಜನರು ಏಕಕಾಲದಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ನಾವು ಉಪಾಹಾರದಿಂದ ಭೋಜನದವರೆಗೆ ಎಲ್ಲವನ್ನೂ ಒದಗಿಸುತ್ತೇವೆ. ಅತಿಥಿಗಳು ವಿಶೇಷ ಭಕ್ಷ್ಯಗಳನ್ನು ಬಯಸಿದರೆ, ಅವುಗಳನ್ನೂ ವ್ಯವಸ್ಥೆ ಮಾಡುತ್ತೇವೆ. ಪ್ರತಿ ಪ್ರವಾಸಕ್ಕೂ ಮಾರ್ಗದರ್ಶಿ ಜೊತೆಗಿರುತ್ತಾರೆ. ಶೀಘ್ರದಲ್ಲೇ ಪ್ಯಾಕೇಜ್‌ಗಳನ್ನು ಘೋಷಿಸುತ್ತೇವೆ ಎಂದು ಓಜಿ ಡ್ರೀಮ್‌ಲೈನರ್‌ ಕಂಪನಿಯ ಸಿಇಓ ಶಿವಾಜಿ ತಿಳಿಸಿದ್ದಾರೆ.

2029ರ ವೇಳೆಗೆ 150 ಕ್ಯಾರವಾನ್‌ಗಳು:
ಆಂಧ್ರ ಸರ್ಕಾರವು 2029ರ ವೇಳೆಗೆ 150 ಕ್ಯಾರವಾನ್ ವಾಹನಗಳು ಮತ್ತು 25 ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.. ಆರಂಭದಲ್ಲಿ ಈ ವಾಹನಗಳನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಾರೆ. ಸರ್ಕಾರವು ಅವರಿಗೆ ತೆರಿಗೆ ವಿನಾಯಿತಿ ಮತ್ತು SGST ಮರುಪಾವತಿಯಂತಹ ಅನೇಕ ಪ್ರೋತ್ಸಾಹಕಗಳನ್ನು ಒದಗಿಸುತ್ತಿದೆ.

ಖಾಸಗಿ ನಿರ್ವಾಹಕರಿಗೆ ವಿಶೇಷ ರಿಯಾಯಿತಿಗಳು:
ಕ್ಯಾರವಾನ್ ಪಾಲಿಸಿಯಡಿಯಲ್ಲಿ ಮೊದಲ 25 ವಾಹನಗಳಿಗೆ 100%  Life Tax Exemption (ರೂ. 3 ಲಕ್ಷದವರೆಗೆ), ಮುಂದಿನ 13 ವಾಹನಗಳಿಗೆ 50% ರಿಯಾಯಿತಿ (ರೂ. 2 ಲಕ್ಷದವರೆಗೆ) ಹಾಗೂ ಇನ್ನೂ 12 ವಾಹನಗಳಿಗೆ 25% ರಿಯಾಯಿತಿ (ರೂ. 1 ಲಕ್ಷದವರೆಗೆ) ನೀಡಲಾಗುತ್ತದೆ. ಇದರ ಜೊತೆಗೆ ಏಳು ವರ್ಷಗಳ ಕಾಲ SGST ಮರುಪಾವತಿ ಸೌಲಭ್ಯವನ್ನು ಒದಗಿಸಲಾಗುವುದು. ಇದು ಖಾಸಗಿ ನಿರ್ವಾಹಕರು ಕ್ಯಾರವಾನ್ ವಲಯದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

Andhra Pradesh Caravan 1

ಕ್ಯಾರವಾನ್ ಪಾರ್ಕ್‌ಗಳಿಗೆ ವಿಶೇಷ ಪ್ರೋತ್ಸಾಹ:
ಆಂಧ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಪಿಟಿಡಿಸಿ) ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿಯನ್ನು ಹಂಚಿಕೆ ಮಾಡುತ್ತದೆ. ಈ ಉದ್ಯಾನವನಗಳು ಕ್ಯಾರವಾನ್‌ಗಳಿಗೆ ಪಾರ್ಕಿಂಗ್ ಸೌಲಭ್ಯಗಳು, ವಸತಿ, ಆಹಾರ ಮತ್ತು ಪ್ರವಾಸಿಗರಿಗೆ ಇತರ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಮೊದಲ ಹಂತದಲ್ಲಿ, ಗಂಡಿಕೋಟ, ಅರಕು, ಸೂರ್ಯಲಂಕಾ ಬೀಚ್, ನಾಗಾರ್ಜುನಸಾಗರ ಮತ್ತು ಶ್ರೀಶೈಲಂನಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ಯಾನವನಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ.

ಪ್ರಸ್ತುತ ರಾಜ್ಯದಲ್ಲಿ ಸ್ವದೇಶ್ ದರ್ಶನ್ 2.0, ಸಾಸ್ಕಿಯಾ ಯೋಜನೆಗಳು ಮತ್ತು ಗಮ್ಯಸ್ಥಾನ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
-ಗಂಡಿಕೋಟ ಮತ್ತು ಗೋದಾವರಿ ಪ್ರದೇಶಗಳ ಅಭಿವೃದ್ಧಿಗೆ 172.35 ಕೋಟಿ ರೂ.
-ಅರಕು, ಲಂಬಸಿಂಗಿ ಮತ್ತು ಸೂರ್ಯಲಂಕಾ ಕಡಲತೀರಗಳ ಅಭಿವೃದ್ಧಿಗೆ 127.39 ಕೋಟಿ ರೂ.
-ಅಹೋಬಿಲಂ ಮತ್ತು ನಾಗಾರ್ಜುನಸಾಗರ ಯೋಜನೆಗಳಿಗೆ 49.49 ಕೋಟಿ ರೂ.
ಈ ಯೋಜನೆಗಳ ಪ್ರವಾಸೋದ್ಯಮ ಮೌಲ್ಯವನ್ನು ಹೆಚ್ಚಿಸುವಲ್ಲಿ ಕ್ಯಾರವಾನ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ.

ದರ ಎಷ್ಟು?
ಒಬ್ಬ ವ್ಯಕ್ತಿಯು ಸುಮಾರು 2,500 ರೂ. ಪಾವತಿಸಿದರೆ, ಪೂರ್ಣ ದಿನ ಪ್ರಯಾಣಿಸಬಹುದು ಮತ್ತು ರಾತ್ರಿ ವಾಸ್ತವ್ಯವನ್ನು ಆನಂದಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಂತಿಮ ಬೆಲೆ ಓಜಿ ಡ್ರೀಮ್‌ಲೈನರ್ ಮತ್ತು ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯ ನಡುವಿನ ಒಪ್ಪಂದವನ್ನು ಅವಲಂಬಿಸಿರುತ್ತದೆ.

Andhra Pradesh Caravan 3

ವಿಶೇಷ ಸೌಲಭ್ಯಗಳು:
– ಈ ಕ್ಯಾರವಾನ್ ವಾಹನಗಳು ಸಣ್ಣ ಬಸ್ಸಿನ ಗಾತ್ರವನ್ನು ಹೊಂದಿವೆ.
– 2-6 ಜನರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.
– ಹಾಸಿಗೆಗಳು, ಊಟಕ್ಕೆ ಜಾಗವಿದೆ.
– ಗ್ಯಾಸ್ ಸ್ಟೌವ್, ಇಂಡಕ್ಷನ್ ಕುಕ್ಕರ್, ಫ್ರಿಡ್ಜ್, ಮೈಕ್ರೋವೇವ್ ಓವನ್ ವ್ಯವಸ್ಥೆ ಇದೆ.
– ಕುಡಿಯುವ ನೀರಿನ ಟ್ಯಾಂಕ್, ಸಿಂಕ್, ಸ್ನಾನಗೃಹ, ಶೌಚಾಲಯ, ಶವರ್, ವಾಶ್ ಬೇಸಿನ್ ಇರಲಿದೆ.
– ಏರ್ ಕಂಡೀಷನರ್, ಹೀಟರ್, ವೈ-ಫೈ, ದೂರದರ್ಶನವಿದೆ.
– ಜಿಪಿಎಸ್ ಟ್ರ್ಯಾಕಿಂಗ್, ಅಗ್ನಿಶಾಮಕಗಳು, ಪ್ರಥಮ ಚಿಕಿತ್ಸಾ ಕಿಟ್ ಇರಲಿದೆ.

ಕ್ಯಾರವಾನ್‌ಗಳು ಪ್ರಯಾಣಿಸುವ ಆರಂಭಿಕ ಮಾರ್ಗಗಳು:
ವಿಶಾಖಪಟ್ಟಣಂ – ಅರಕು
ವಿಶಾಖಪಟ್ಟಣಂ – ಲಂಬಸಿಂಗಿ
ವಿಜಯವಾಡ – ಗಂಡಿಕೋಟ
ವಿಜಯವಾಡ – ಸೂರ್ಯಲಂಕಾ ಬೀಚ್
ವಿಜಯವಾಡ – ನಾಗಾರ್ಜುನಸಾಗರ
ವಿಜಯವಾಡ – ಶ್ರೀಶೈಲಂ
ವಿಜಯವಾಡ – ತಿರುಪತಿ

ಹೋಂ-ಸ್ಟೇ ವಸತಿ ಸೌಲಭ್ಯಗಳನ್ನು ಹೊಂದಿರುವ ಈ ಕ್ಯಾರವಾನ್‌ಗಳು ರಾಜ್ಯದ ಪ್ರವಾಸೋದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಕೇರಳ, ಗೋವಾ ಮತ್ತು ಕರ್ನಾಟಕದಂತೆಯೇ, ಆಂಧ್ರಪ್ರದೇಶವೂ ಈಗ ಕ್ಯಾರವಾನ್ ಪ್ರವಾಸೋದ್ಯಮದಲ್ಲಿ ಸ್ಥಾನ ಪಡೆಯಲಿದೆ.

TAGGED:Andhra PradeshCaravan Tourismchandrababu naidutourismTourists
Share This Article
Facebook Whatsapp Whatsapp Telegram

Cinema news

gilli kavya 1
ಕಣ್ಣೀರಿಟ್ಟ ‘ಕಾವು’ – ವಿಲನ್‌ ಕೊಟ್ಟ ಟಾಸ್ಕಲ್ಲಿ ಗೆದ್ರಾ ಗಿಲ್ಲಿ?
Cinema Latest Top Stories TV Shows
Yash Radhika
ನನ್ನೆಲ್ಲ ಪ್ರಶ್ನೆಗೂ ನೀನೇ ಉತ್ತರ – ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್‌ ಜೋಡಿ
Cinema Latest Sandalwood Top Stories
Rajinikanth Padayappa 2
ಪಡೆಯಪ್ಪ ಪಾರ್ಟ್-2 ಬಗ್ಗೆ ತಲೈವಾ ಹೇಳಿದ್ದೇನು?
Cinema Latest Top Stories
V. Shantaram Biopic Tamannaah Bhatia
ನಟಿ ಜಯಶ್ರೀಯಾದ ತಮನ್ನಾ ಭಾಟಿಯಾ
Cinema Latest Top Stories

You Might Also Like

Yadagiri Fire Accident
Districts

ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ – 1 ಕೋಟಿ ಮೌಲ್ಯದ 60 ಟನ್‌ಗೂ ಅಧಿಕ ಹತ್ತಿ ಭಸ್ಮ

Public TV
By Public TV
38 minutes ago
karwar jail
Crime

ಕಾರವಾರ ಜೈಲಲ್ಲಿ ಕೈದಿಗಳಿಂದ ಮತ್ತೆ ದಾಂಧಲೆ; ಜೈಲಲ್ಲಿದ್ದ ಟಿ.ವಿ ಸೇರಿ ಹಲವು ವಸ್ತುಗಳ ಧ್ವಂಸ

Public TV
By Public TV
2 hours ago
Traffic Fine
Bengaluru City

ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ – 5 ಲಕ್ಷಕ್ಕೂ ಹೆಚ್ಚು ಕೇಸ್ ಇತ್ಯರ್ಥ, 16.63 ಕೋಟಿ ದಂಡ ಸಂಗ್ರಹ

Public TV
By Public TV
2 hours ago
H 1B Visa
Latest

ಅಮೆರಿಕ ಸೋಷಿಯಲ್‌ ಮೀಡಿಯಾ ಹೊಸ ರೂಲ್ಸ್‌ – ಭಾರತೀಯರಿಗೆ H-1B ವೀಸಾ ನೇಮಕಾತಿ ಮುಂದೂಡಿಕೆ

Public TV
By Public TV
2 hours ago
Karnataka Legislatiev Assembly
Belgaum

ಇಂದು ವಿಧಾನಸಭೆಯಲ್ಲಿ ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಮಂಡನೆ

Public TV
By Public TV
3 hours ago
tiger cubs mysuru
Latest

ಮೈಸೂರು| ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?