Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Corona

ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

Public TV
Last updated: April 8, 2020 8:16 pm
Public TV
Share
16 Min Read
ananthkumar hegde
SHARE

– ಹಲವು ಉಗ್ರರಿಗೂ ಸಂಘಟನೆಗೂ ಸಂಬಂಧ
– ಲಾಕ್‍ಡೌನ್ ವಿಫಲಗೊಳಿಸಲೆಂದೇ ದೇಶದೆಲ್ಲೆಡೆ ಓಡಾಟ
– ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ವೈರಾಣು ಅಸ್ತ್ರವಾಯಿತೇ?

ಕಾರವಾರ: ಸದಾ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗ್ಡೆ ತಮ್ಮ ಫೇಸ್‍ಬುಕ್ ನಲ್ಲಿ ತಬ್ಲಿಘಿ ಜಮಾತ್ ಕುರಿತು ಸುದೀರ್ಘ ಲೇಖನ ಬರೆದು, ಅದೊಂದು ಉಗ್ರ ಸಂಘಟನೆ ಎಂದು ಬಿಂಬಿಸಿದ್ದಾರೆ.

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲಿಘಿ ಜಮಾತ್ ಒಳಸುಳಿಗಳು ಎಂದು ಶೀರ್ಷಿಕೆಯಡಿ ಲೇಖನವನ್ನು ತಮ್ಮ ಫೇಸ್‍ಬುಕ್ ಹಾಗೂ ಬ್ಲಾಗ್ ನಲ್ಲಿ ಇಂದು ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ಅನಂತ್‍ಕುಮಾರ್ ಅವರು ತಬ್ಲಿಘಿ ಇಸಹಾಸವೇನು? ಭಾರತ ಮೂಲದ ಇಸ್ಲಾಂ ಧರ್ಮ ಪ್ರಚಾರದ ಸಂಸ್ಥೆ ವಿಶ್ವವ್ಯಾಪಿ ಬೆಳೆದಿದ್ದು ಹೇಗೆ? ತಬ್ಲಿಘಿಗೂ ಉಗ್ರಸಂಘನೆಗೂ ಹೇಗೆ ನಂಟು? ಧರ್ಮ ಪ್ರಚಾರದಕ್ಕೆ ತಬ್ಲಿಘಿ ಜಮಾತ್ ಸದಸ್ಯರನ್ನು ಹೇಗೆ ಬಳಸಿಕೊಂಡಿತು? ರಷ್ಯಾ- ಅಫ್ಘಾನಿಸ್ತಾನ್‍ನ ವಿವಾದವೇನು? ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದಾರೆ.

Tablighi Jamaat meet C

“ಇಸ್ಲಾಮ್ ರಾಜಕಾರಣ” ಎಂಬ ತಲೆಬರಹ ನೀಡಿ ಅನಂತ್‍ಕುಮಾರ್ ಬರೆದ ಯಥಾವತ್ ಬರಹವನ್ನು ಇಲ್ಲಿ ನೀಡಲಾಗಿದೆ.

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು.
ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೊನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ. ಈ ಮಾರಣಾಂತಿಕ ಸೋಂಕು ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ ಹರಡುತ್ತಿದೆ. ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ.

ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

Ananthkumar Hegde

ಅದೇ ರೀತಿ ಕೊರೊನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಕಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು. ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

ಕೊರೊನಾ ಎಂಬ ನಿಗೂಢ ವೈರಸ್ಸಿನಿಂದ ಉಂಟಾಗಬಹುದಾದ ಅಪಾಯದ ಅರಿವೇ ಇಲ್ಲದೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ವಿಜ್ಞಾನಿಗಳು, ವೈದ್ಯರು ಹೇಗೆ ಸೋತು ಹೋದರೋ, ಅದೇ ರೀತಿ ತಬ್ಲಿಘಿ ಜಮಾತ್ ಎಂಬ ರಹಸ್ಯ ಸಂಘಟನೆ ಮತ್ತು ಇಸ್ಲಾಮ್ ಎಂಬ ಅಪಾಯಕಾರಿ ಮತವನ್ನು, ಅದು ಇಡೀ ಮಾನವಜನಾಂಗಕ್ಕೆ ತಂದೊಡ್ಡಲಿರುವ ಗಂಡಾಂತರವನ್ನು ಅಂದಾಜಿಸುವಲ್ಲಿ ಇಡೀ ಪ್ರಪಂಚದ ಅಷ್ಟೂ ರಾಜಕಾರಣಿಗಳು, ರಾಜತಂತ್ರಜ್ಞರು, ಮುತ್ಸದ್ದಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಅನಿಸುತ್ತಿದೆ. ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವ ಕೊರೊನಾ ವೈರಸ್ ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ, ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೇ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್, ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ.

Nizamuddin Tablighi Jamaat 1

ತಬ್ಲೀಘಿ ಜಮಾತ್, ಭಾರತದಲ್ಲೇ ಹುಟ್ಟಿ ಇವತ್ತು ವಿಶ್ವದೆಲ್ಲೆಡೆ ಬೇರುಬಿಟ್ಟು ಹರಡಿಕೊಂಡು ಕೋಟ್ಯಂತರ ಸದಸ್ಯರನ್ನು ಹೊಂದಿರುವ ಒಂದು ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ. ಇದು ಮೂಲತಃ ಭಾರತದ್ದೇ ಇನ್ನೊಂದು ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ದೇವ್ ಬಂದ್ ನ ಒಂದು ಶಾಖೆಯಾಗಿ ಪ್ರಾರಂಭವಾಯಿತು. ಇದರ ಮೂಲ ಉದ್ದೇಶ ಇಸ್ಲಾಮ್ ಪ್ರಚಾರ. ಅದರಲ್ಲೂ ಪ್ರವಾದಿ ಮೊಹಮ್ಮದರ ಕಾಲದಲ್ಲಿದ್ದಂತೆಯೇ ಕಟ್ಟುನಿಟ್ಟಿನ ಜೀವನ ಪದ್ಧತಿ ರೂಢಿಸಿಕೊಳ್ಳಲು ಮುಸ್ಲಿಮರನ್ನೇ ಪ್ರೇರೇಪಿಸುವುದು ಇದರ ಆಶಯ. ದಾರಿ ತಪ್ಪಿರುವ, ಇಸ್ಲಾಮ್ ಧರ್ಮವನ್ನು ಸರಿಯಾಗಿ ಪಾಲಿಸದ ಮುಸ್ಲಿಮರೇ ಈ ಸಂಸ್ಥೆಯ ಗುರಿ. ಖುರಾನ್ ಹದೀಸ್, ಸುನ್ನಾಹ್‍ವನ್ನೇ ಭೋಧಿಸುವ, ಮತಪ್ರಚಾರದ ಕೆಲಸ ಬಿಟ್ಟರೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದ ಸಂಘಟನೆ ಅಂತ ಹೇಳಿಕೊಂಡಿದ್ದ ತಬ್ಲಿಘಿ ಜಮಾತ್ ನ ಪ್ರವರ್ತಕ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ. ರಾಜಕೀಯ ಉದ್ದೇಶ ಇಲ್ಲದ ಸಂಘಟನೆಯಾದುದರಿಂದ ಭಾರತವನ್ನಾಳುತ್ತಿದ್ದ ಬ್ರಿಟಿಷರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಹೀಗೆ 1928ರಲ್ಲಿ ಪ್ರಾರಂಭವಾದ ತಬ್ಲಿಘಿ ಜಮಾತ್‍ಗೆ ಇದ್ದ ಮೂಲ ಉದ್ದೇಶವೇ ಮತಾಂತರ.

ಹೌದು. ಅದಕ್ಕೊಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಮರಾಠರ ಆಕ್ರಮಣದಿಂದ ಮುಘಲರು ಸೋತುಹೋದ ಬಳಿಕ ಭಾರತದ, ಅದರಲ್ಲೂ ದೆಹಲಿಯ ಅಧಿಕಾರ ಗದ್ದುಗೆ ಮುಸ್ಲಿಮರ ಕೈ ತಪ್ಪಿ ಹೋಗಿತ್ತು. ಮುಘಲರ ಕಾಲದಲ್ಲಿ ಲಕ್ಷಾಂತರ ರಾಜಪೂತರು ಇಸ್ಲಾಮಿಗೆ ಬಲವಂತದ ಮತಾಂತರವಾಗಿದ್ದರು. ಇವರಲ್ಲಿ ಹೆಚ್ಚಿನವರು ಮೇವಾರಿ ಭಾಷೆ ಮಾತಾಡುತ್ತಿದ್ದ ಮೀಯೋ ಮುಸ್ಲಿಮರಾಗಿದ್ದರು. ಯಾವಾಗ ದೆಹಲಿಯಲ್ಲಿ ಮುಸ್ಲಿಮರ ಪ್ರಭಾವ ಕಡಿಮೆಯಾಯಿತೋ ಆಗ ಈ ಮುಸ್ಲಿಂ ರಾಜಪೂತರೆಲ್ಲಾ ಮರಳಿ ಹಿಂದೂ ಧರ್ಮಕ್ಕೆ ಮತಾಂತರವಾಗತೊಡಗಿದರು. ಅದಕ್ಕೆಂದೇ ಸ್ವಾಮೀ ದಯಾನಂದ ಸರಸ್ವತಿ ಮತ್ತವರ ಆರ್ಯ ಸಮಾಜ “ಶುದ್ಧೀಕರಣ” ಎಂಬ ಕಾರ್ಯಕ್ರಮ ರೂಪಿಸಿದರು. ದಯಾನಂದರ ಬಳಿಕ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದ 1923 ರಲ್ಲಿ “ಭಾರತೀಯ ಹಿಂದೂ ಶುದ್ಧಿ ಮಹಾಸಭಾ” ಎಂಬ ಹೊಸ ಸಂಘಟನೆಯನ್ನೇ ಶುರುಮಾಡಿ. ಬಲವಂತವಾಗಿ ಇಸ್ಲಾಮಿಗೆ ಮತಾಂತರವಾಗಿದ್ದವರನ್ನೆಲ್ಲ ಮರಳಿ ಮಾತೃಧರ್ಮಕ್ಕೆ ಕರೆತರುವ ಕೆಲಸವನ್ನು ದೊಡ್ಡಮಟ್ಟದಲ್ಲೇ ಶುರುಮಾಡಿದರು. ಇದಕ್ಕೆ ಪ್ರತಿಯಾಗಿ ಎರಡೇ ವರ್ಷ ಕಳೆಯುವಷ್ಟರಲ್ಲಿ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ ತಬ್ಲಿಘಿ ಜಮಾತ್ ಶುರುಮಾಡಿದ್ದ. ಅದಕ್ಕೆ ಬ್ರಿಟಿಷರ ಕೃಪಾಶೀರ್ವಾದ ಕೂಡ ದೊರಕಿತು.

ananthkumar hegde 1

ತಬ್ಲಿಘಿ ಜಮಾತ್ ಅಲ್ಪ ಕಾಲದಲ್ಲೇ ದೇಶದಾದ್ಯಂತ ಪಸರಿಸಿತು. ಪ್ರವಾದಿಯ ಕಾಲದಲ್ಲಿ ಅನುಸರಿಸಲಾಗುತ್ತಿತ್ತೆಂದು ಹೇಳಲಾದ ಖಟ್ಟರ್ ಇಸ್ಲಾಮನ್ನು ಬೋಧನೆ ಮಾಡುತ್ತಿದ್ದ ತಬ್ಲಿಘಿ ಜಮಾತ್, ತನ್ನ ರೀತಿಯ ಧರ್ಮ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಾಂಡಾಲವಿ ಬರೆದ ‘ತಬ್ಲಿಘಿ ನಿಸಾಬ್’ ಎಂಬ ಪುಸ್ತಕವನ್ನು ಪಠ್ಯ ಪುಸ್ತಕದಂತೆ ಉಪಯೋಗಿಸುತ್ತಿತ್ತು. ಇದು ಹಲವಾರು ಪುಸ್ತಕಗಳ ಕಂತೆ. ಇದರಲ್ಲಿ ಕಾಲಾಂತರದಲ್ಲಿ ಸೌಮ್ಯವಾದಿ ಸೂಫಿ ಪಂಥದ ಕತೆಗಳೂ ಸೇರಿಕೊಂಡವು. ಆದರೆ ಬಳಿಕ ಇವುಗಳನ್ನೆಲ್ಲ ಪರಿಷ್ಕರಿಸಿ ಖಟ್ಟರ್ ಇಸ್ಲಾಮಿನ ಬೋಧನೆಗಳಷ್ಟನ್ನೇ ಉಳಿಸಿ ‘ಸಹೀಹ್ ಫಝಯ್ಲ್ ಎ ಅಮಾಲ್’ ಎಂಬ ಪುಸ್ತಕವನ್ನು ಪ್ರಕಟಿಸಲಾಯಿತು. ಇದರೊಂದಿಗೆ ತಬ್ಲಿಘಿ ಜಮಾತ್ ಅನ್ನುವುದು ಖಟ್ಟರ್ ಮೂಲಭೂತವಾದಿ ಇಸ್ಲಾಮನ್ನು ಭೋಧನೆ ಮಾಡುವ ಬೃಹತ್ ಸಂಸ್ಥೆಯಾಗಿ ಬೆಳೆಯಿತು.

ತಬ್ಲಿಘಿ ಜಮಾತ್‍ಗೆ ಒಂದು ದೊಡ್ಡ ತಿರುವು ಸಿಕ್ಕಿದ್ದು ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿ ತಬ್ಲಿಘಿ ಜಮಾತ್ ನ ಬೃಹತ್ ಶಾಖೆಯೊಂದು ಪ್ರಾರಂಭವಾಯಿತು ಮತ್ತು ಇದಕ್ಕೆ ಪಾಕಿಸ್ತಾನ ಸರ್ಕಾರದ ಸಂಪೂರ್ಣ ಬೆಂಬಲ ದೊರಕಿತು. ಮೌಲಾನಾ ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲಿಘಿ ಜಮಾತ್ ಗೆ ಪಾಕಿಸ್ತಾನದಲ್ಲೂ, ಭಾರತದಲ್ಲೂ ಭಾರೀ ರಾಜಕೀಯ ಮತ್ತು ಹಣಕಾಸಿನ ಬೆಂಬಲ ದೊರಕಿ ಅದು ಅಂತಾರಾಷ್ಟ್ರೀಯ ಸಂಘಟನೆಯಾಗಿ ಬೆಳೆಯಿತು. ಅರವತ್ತರ ದಶಕದಲ್ಲಿ ತಬ್ಲಿಘಿ ಜಮಾತ್ ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ತಳ ಊರಿತ್ತು. ಎಪ್ಪತ್ತರ ದಶಕದಲ್ಲಿ ಸೌದಿಯ ವಹಾಬಿಗಳ ಸಹಕಾರ ಮೊಟ್ಟಮೊದಲ ಬಾರಿಗೆ ತಬ್ಲಿಘಿ ಜಮಾತ್ ಗೆ ದೊರೆಯಿತು. ಆಗಿನ ಕಾಲದ ಪ್ರಮುಖ ವಹಾಬೀ ಧರ್ಮಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ತಬ್ಲಿಘಿ ಜಮಾತ್ ನ ಧರ್ಮಪ್ರಚಾರಕ ಮೌಲ್ವಿಗಳ ಜೊತೆಗೆ ತಮ್ಮ ವಹಾಬೀ ಪ್ರಚಾರಕರನ್ನೂ ಕಳುಹಿಸಿಕೊಡಲು ಉತ್ತೇಜಿಸಿದರು. ಇದು ತಬ್ಲಿಘಿನ ಇನ್ನೊಂದು ಟರ್ನಿಂಗ್ ಪಾಯಿಂಟ್. ಅಷ್ಟರಲ್ಲಾಗಲೇ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ತಮ್ಮ ಧರ್ಮ ಪ್ರಚಾರದ ನೆಟ್ ವರ್ಕ್ ಸ್ಥಾಪಿಸಿದ್ದ ತಬ್ಲಿಘಿನ ಜೊತೆಗೆ ಸೌದಿಯ ವಹಾಬಿಗಳು ಕೈಜೋಡಿಸಿ ತಮ್ಮ ಜಾಲವನ್ನು ಬಲಪಡಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದರು. ಮತ್ತು ಅದರಲ್ಲಿ ಯಶಸ್ವಿಯೂ ಆದರು. ತಬ್ಲಿಘಿಗೆ ಸೌದಿಯಿಂದ ಹಣದ ನೆರವು ಕೂಡಾ ಯಥೇಚ್ಛವಾಗಿ ಹರಿದು ಬಂತು. ಸೌದಿ ಮೂಲದ “ವರ್ಲ್ಡ್ ಮುಸ್ಲಿಂ ಲೀಗ್” ಪ್ರಧಾನ ಪೋಷಕನಾಗಿ ತಬ್ಲಿಘಿಗೆ ಸಹಾಯ ಮಾಡಿತು. ವಾಸ್ತವವಾಗಿ ತಬ್ಲಿಘಿ ಜಮಾತ್ ನ ಪ್ರಚಾರಕರು ಸ್ವಯಂ ಸೇವಕರು, ಮತ್ತು ತಮ್ಮ ಕೈಯಿಂದಲೇ ಖರ್ಚು ಮಾಡಿಕೊಂಡು ಪ್ರಯಾಣಿಸುತ್ತಾ ಊರೂರು ತಿರುಗಿ ಧರ್ಮ ಪ್ರಚಾರ ಮತ್ತು ಮತಾಂತರ ಮಾಡುತ್ತಿದ್ದರು. ಆದರೆ ಕಾಲಾಂತರದಲ್ಲಿ ಸೌದಿಯ ಹಣ ಹರಿದುಬಂದಂತೆಲ್ಲ ತಬ್ಲಿಘಿನ ಪ್ರಚಾರಕರ ಪ್ರಯಾಣದ ಖರ್ಚಿಗೆ ಈ ಹಣ ಬಳಕೆಯಾಗತೊಡಗಿತು.

Nizamuddin Tablighi Jamaat 4

ಸೌದಿ ಮೂಲದ ವರ್ಲ್ಡ್ ಮುಸ್ಲಿಂ ಲೀಗ್ 1978ರಷ್ಟು ಹಿಂದೆಯೇ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ಭಾರೀ ದೊಡ್ಡ ಕಟ್ಟಡವೊಂದನ್ನು ತಬ್ಲಿಘಿ ಜಮಾತ್ ಗೆ ಮಸೀದಿಗಾಗಿ ನೀಡಿತು. ಅವತ್ತಿನಿಂದ ಈ ಕಟ್ಟಡ ಪೂರ್ತಿ ಯುರೋಪಿಗೆ ತಬ್ಲಿಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್ ಆಗಿ ಬದಲಾಯಿತು. ತಬ್ಲಿಘಿ ಧರ್ಮ ಪ್ರಚಾರಕರು ಆಫ್ರಿಕಾದಲ್ಲಿ ಅವಿರತವಾಗಿ ಕೆಲಸ ನಿರ್ವಹಿಸಿದರು. ಈ ಕೆಲಸಕ್ಕಾಗಿ ಅವರಿಗೆ ವರ್ಲ್ಡ್ ಮುಸ್ಲಿಂ ಲೀಗ್ ನಿಂದ್ ಭರ್ಜರಿ ಸಂಬಳ ಸಿಗತೊಡಗಿತು. ನಿಧಾನವಾಗಿ ಭಾರತೀಯ ಮೂಲದ ಈ ತಬ್ಲಿಘಿ ಜಮಾತ್ ವಿಶ್ವದಲ್ಲೇ ಅತೀದೊಡ್ಡ ಧರ್ಮ ಪ್ರಚಾರಕ ಸಂಸ್ಥೆಯಾಗಿ ಸದ್ದಿಲ್ಲದೆಯೇ ಬೆಳೆದುಬಿಟ್ಟಿತು. ಆದರೆ ಈ ಸಂಘಟನೆಯ ಇಮೇಜ್ ಅನ್ನು ಬಹಳ ಎಚ್ಚರಿಕೆಯಿಂದ ಕಾಪಾಡಲಾಯಿತು. ತಬ್ಲಿಘಿ ಜಮಾತ್ ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆತೂರಿಸಲೇ ಇಲ್ಲ. ತನ್ನದು ರಾಜಕೀಯರಹಿತವಾದ ಕೇವಲ ಧರ್ಮ ಪ್ರಚಾರದ ಕೆಲಸ ಅಂತ ವ್ಯವಸ್ಥಿತವಾಗಿ ರಹಸ್ಯವಾಗಿಯೇ ಪ್ರಚಾರ ಕೂಡ ಮಾಡಿಕೊಂಡಿತು. ಹಾಗಾಗಿ ಮೂಲಭೂತವಾದಿ ಇಸ್ಲಾಮಿನ ಬಗ್ಗೆ, ಅದರ ವಿವಿಧ ಸಂಘಟನೆಗಳ ಕಾರ್ಯ ಚಟುವಟಿಕೆಯ ಮೇಲೆ ಕಣ್ಣಿಡುವ ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳ ತಜ್ಞರಿಗೂ ತಬ್ಲಿಘಿ ಜಮಾತ್ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಲಾಯಿತು. ಹಾಗಾಗಿ ತಬ್ಲಿಘಿನ ಮೇಲೆ ಅದರ ಕಾರ್ಯ ಚಟುವಟಿಕೆಯ ಮೇಲೆ, ಅದು ಪ್ರಚಾರ ಮಾಡುವ ಮೂಲಭೂತವಾದಿ ಸಿದ್ಧಾಂತಗಳ ಬಗ್ಗೆ ಯಾರಿಗೂ ಸುಳಿವು ಸಿಗಲೇ ಇಲ್ಲ. ಆದರೆ ತಬ್ಲಿಘಿ ಜಮಾತ್‍ನ ವಿಶಾಲ ನೆಟ್ ವರ್ಕ್ ಅನ್ನು ಇತರ ಮೂಲಭೂತವಾದಿ ಸಂಘಟನೆಗಳು ಚೆನ್ನಾಗಿಯೇ ಬಳಸಿಕೊಂಡವು.

ತಬ್ಲಿಘಿ ಜಮಾತ್ ನ ಪ್ರಚಾರಕರು ತಮ್ಮ ಜಾಲದಲ್ಲಿನ ಎಲ್ಲಾ ಸುನ್ನೀ ಮಸೀದಿಗಳಿಗೂ ಭೇಟಿ ನೀಡಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ” ಗಳಲ್ಲಿ ಅಲ್ಲಿನ ಹುಡುಗರು ಭಾಗವಹಿಸುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿನ ತಬ್ಲಿಘಿ ಜಮಾತ್ ಕಚೇರಿಯಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಸೂಕ್ತ ವಿದ್ಯಾರ್ಥಿಗಳನ್ನು ಉಗ್ರಸಂಘಟನೆಗೆ ರಿಕ್ರೂಟ್ ಮಾಡುವ ಕೆಲಸ ಎಂಭತ್ತರ ದಶಕದಲ್ಲೇ ಪ್ರಾರಂಭವಾಗಿತ್ತು. 1980 ರಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ನಲ್ಲಿ ತಬ್ಲಿಘಿ ಜಮಾತ್ ನ ಸದಸ್ಯರ ಪಾತ್ರ ಇತ್ತು. ಆ ಬಳಿಕ ಹುಟ್ಟಿಕೊಂಡ ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಹಲವಾರು ಮಂದಿ ತಬ್ಲಿಘಿ ನ ಸದಸ್ಯರೇ ಆಗಿದ್ದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡ ಪ್ರಕರಣದಲ್ಲಿ ಮತ್ತು 2002ರಲ್ಲಿ ಕರಾಚಿಯಲ್ಲಿ ಫ್ರೆಂಚ್ ಇಂಜಿನಿಯರ್ ಗಳಿದ್ದ ವಾಹನ ಸ್ಫೋಟಿಸಿದ ಪ್ರಕರಣದಲ್ಲಿ ಭಾಗಿಯಾದ ಹರ್ಕತ್ ಉಲ್ ಮುಜಾಹಿದೀನ್ ನ ಉಗ್ರರು ತಬ್ಲಿಘಿ ಜಮಾತ್ ನ ಸದಸ್ಯರೇ ಆಗಿದ್ದರು. ಸುಮಾರು ಆರು ಸಾವಿರಕ್ಕೂ ತಬ್ಲಿಘಿ ಜಮಾತ್ ಸದಸ್ಯರು ಹರ್ಕತ್ ಉಲ್ ಮುಜಾಹಿದ್ದೀನ್ ನ ಕ್ಯಾಂಪ್ ಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಇವರೆಲ್ಲಾ ತಾಲಿಬಾನ್ ಸಂಘಟನೆ ಸೇರಿ ರಷ್ಯಾ ವಿರುದ್ಧ ಹೋರಾಡಿದ್ದರು ಮತ್ತು ರಷ್ಯಾ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಮೇಲೆ ಇವರ ಪೈಕಿ ಬಹುತೇಕ ಮಂದಿ ಅಲ್ ಖಾಯ್ದಾ ಸೇರಿದ್ದರು.

ananthkumar hegde 3

1994ರಲ್ಲಿ ಪ್ಯಾರಿಸ್ ನಲ್ಲಿ ಮತ್ತು ಮೊರಾಕೊ ದಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸಿದ್ದಕ್ಕಾಗಿ ತಬ್ಲಿಘಿ ಜಮಾತ್ ನ ಸದಸ್ಯರಿಗೆ ಶಿಕ್ಷೆ ಆಗಿದೆ. ಮೊರಾಕೋದ ಮಾರಾಕೆಶ್ ನ ಅಟ್ಲಾಸ್ ಅಸ್ನಿ ಹೋಟೆಲಿನಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಸ್ಪ್ಯಾನಿಷ್ ಯಾತ್ರಿಕರ ಸಾವಿಗೆ ಕಾರಣರಾಗಿದ್ದ ಸ್ಟೆಫಾನೀ ಐಟ್ ಇದಿರ್ ಎಂಬ ಆಲ್ಜೀರಿಯಾ ಮೂಲದ ಫ್ರೆಂಚ್ ಪ್ರಜೆ ಮತ್ತು ರೆಡೊಯೆನ್ ಹಮ್ಮದೀ ಎಂಬ ಮೊರಾಕೊ ಪ್ರಜೆಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಅವರಿಬ್ಬರಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಇತ್ತೀಚೆಗೆ ಮೊರಾಕೋದ ಅತ್ ತಫ್ಕೀರ್ ವಲ್ ಹಿಜ್ರಾಹ್ ಎಂಬ ಉಗ್ರ ಸಂಘಟನೆಯ ಸದಸ್ಯ ಯೂಸೆಫ್ ಫಿಕ್ರೀ ಎಂಬಾತನಿಗೆ 2003ರಲ್ಲಿ ನಲವತ್ತಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿ ಮರಣದಂಡನೆ ವಿಧಿಸಲಾಗಿದೆ. ಈತ ಕೂಡಾ ತಬ್ಲಿಘಿ ಜಮಾತ್ ಸದಸ್ಯ ಆಗಿದ್ದ. ಇಷ್ಟಲ್ಲದೆ ತಬ್ಲಿಘಿ ಜಮಾತ್ ಗಿರುವ ಸೌಮ್ಯ ರೂಪದ ಧರ್ಮ ಪ್ರಚಾರದ ಸಂಘಟನೆ ಎಂಬ ಹೆಸರನ್ನೇ ಬಳಸಿಕೊಂಡು ಇತರ ಹಲವು ಭಯೋತ್ಪಾದನಾ ಕೃತ್ಯಗಳಿಗೆ ಸಹಾಯ ಮಾಡಲಾಗಿದೆ. ಪ್ರವಾಸ ಮತ್ತು ಪ್ರವೇಶ ದಾಖಲಾತಿಗಳನ್ನು ಪಡೆದದ್ದು ಸಾಬೀತಾಗಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು, ಪಾಕಿಸ್ತಾನದ ಭಯೋತ್ಪಾದನಾ ವೆಬ್ ಸೈಟ್ ಒಂದು ಆದಷ್ಟು ಜನ ಯುವಕರು ತಬ್ಲಿಘಿ ಜಮಾತ್ ಗೆ ಸೇರಿಕೊಳ್ಳಿ, ಅವರ ಮತೀಯ ಶಿಕ್ಷಣ ಪಡೆದರೆ ಸುಲಭವಾಗಿ ಜಿಹಾದಿಗಳಾಗಬಹುದು ಅಂತ ಬಹಿರಂಗವಾಗಿಯೇ ಪ್ರಕಟಿಸಿತ್ತು.

ಫಿಲಿಪೀನ್ಸ್ ನಲ್ಲಿ ತಬ್ಲಿಘಿ ಜಮಾತ್ ನ ಹನ್ನೊಂದು ಸಾವಿರ ಜನ ಸದಸ್ಯರಿದ್ದಾರೆ. ಫಿಲಿಪೀನ್ಸ್ ಸರಕಾರದ ಪ್ರಕಾರ ತಬ್ಲಿಘಿ ಜಮಾತ್ ಮೂಲಕವೇ ಉಗ್ರ ಚಟುವಟಿಕೆಗಳಿಗೆ ಸೌದಿ ಮೂಲದ ಹಣ ಪೂರೈಕೆಯಾಗುತ್ತಿದೆ. ತಬ್ಲಿಘಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ಕೂಡಾ ನೀಡುತ್ತಿದ್ದಾರೆ ಎಂದು ಅಲ್ಲಿನ ಸರಕಾರದ ಆರೋಪ. ಇದಲ್ಲದೆ ತಬ್ಲಿಘಿ ಜಮಾತ್ ನೇರವಾಗಿಯೇ ಉಗ್ರರನ್ನು ರಿಕ್ರೂಟ್ ಮಾಡಿಕೊಂಡು ತರಬೇತಿ ನೀಡುತ್ತಿದೆ ಎಂಬ ಆರೋಪ 1980 ದಶಕದಲ್ಲೇ ಕೇಳಿಬಂದಿತ್ತು. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು ಒಂಭೈನೂರು ಜನರನ್ನು ಉಗ್ರತರಬೇತಿ ಪಡೆಯಲು ಜಮಾತ್ ಸ್ಪಾನ್ಸರ್ ಮಾಡುತ್ತಿದೆ ಎಂಬ ಆರೋಪದ ಜೊತೆಗೆಯೇ ತಬ್ಲಿಘಿ ಜಮಾತ್ ತನ್ನ ದೇಶದ 400 ಕ್ಕೂ ಹೆಚ್ಚು ಯುವಕರನ್ನು ಉಗ್ರತರಬೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು.

Nizamuddin Tablighi Jamaat

ಅಮೆರಿಕಾದಲ್ಲಿ ತಬ್ಲಿಘಿ ಜಮಾತ್ ಬಹಳ ದೊಡ್ಡ ಜಾಲವನ್ನೇ ಹೊಂದಿದೆ. ಅಲ್ಲಿನ ವಲಸಿಗ ಮುಸ್ಲಿಮರೇ ಜಮಾತ್ ಗೆ ದೊಡ್ಡ ಆಸ್ತಿ. ಅಮೆರಿಕಾದ ಮೊತ್ತ ಮೊದಲ ತಾಲಿಬಾನಿ ಜಾನ್ ವಾಕರ್ ಲಿಂದ್ ಅಲಯಾಸ್ ಸುಲೇಮಾನ್ ಅಲ್ ಫಾರಿಸ್ 2001ರಲ್ಲಿ ಅಮೆರಿಕಾ ಪಡೆಗಳಿಗೆ ಅಫ್ಘಾಅನಿಸ್ತಾನದಲ್ಲಿ ಸೆರೆಸಿಕ್ಕಿದ. ಅವನ ಕತೆ ರೋಚಕ. ಕ್ಯಾಲಿಫೋರ್ನಿಯಾದಲ್ಲಿದ್ದ ಆತನನ್ನು ಹದಿನಾರನೆಯ ವಯಸ್ಸಿಗೇ ಇಸ್ಲಾಮಿಗೆ ಮತಾಂತರಗೊಳಿಸಲಾಗಿತ್ತು. ನಂತರ ಆತ ಯೆಮೆನ್ ಗೆ ಅರಾಬಿಕ್ ಕಲಿಯಲೆಂದು ತೆರಳಿದ. ಅಲ್ಲಿಂದ ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿ ಹರ್ಕತ್ ಉಲ್ ಮುಜಾಹಿದೀನ್ ಬಳಿ ತರಬೇತಿ ಪಡೆದು ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ತಾಲಿಬಾನಿಗೆ ಸೇರಿದ.ಆತನನ್ನು ಮತಾಂತರಗೊಳಿಸಿದ್ದು, ಉಗ್ರತರಬೇತಿ ನೀಡಿಸಿದ್ದೆಲ್ಲಾ ತಬ್ಲಿಘಿ ಜಮಾತ್ ನವರೇ. ನ್ಯೂಯಾರ್ಕ್ ನ ಲಾಖವಾನಾ ಎಂಬ ಪಟ್ಟಣದಲ್ಲಿದ್ದ ಆರು ಯೆಮೆನಿ ಯುವಕರು ಅಲ್ ಖಾಯ್ದಾಗೆ ಸಹಾಯ ಮಾಡಿದ್ದರಿಂದ ಸಿಕ್ಕಿಬಿದ್ದು ಜೈಲುಪಾಲಾದರು. ಅವರು ಕೂಡಾ ತಬ್ಲಿಘಿ ಜಮಾತ್ ನ ಸಂಪರ್ಕ ಹೊಂದಿದ್ದರು. ರಿಚರ್ಡ್ ಕಾಲ್ವಿನ್ ರೀಡ್ ಎಂಬಾತ ಸಣ್ಣಪುಟ್ಟ ಕಳ್ಳತನಮಾಡಿ ಜೈಲುಪಾಲಾಗಿದ್ದ. ಜೈಲಿನಲ್ಲೇ ಆತನನ್ನು ಇಸ್ಲಾಮಿಗೆ ಮತಾಂತರ ಮಾಡಲಾಯಿತು. ಮುಂದೆ ಆತ ಪಾಕಿಸ್ತಾನದಲ್ಲಿ ಉಗ್ರತರಬೇತಿ ಪಡೆದು ಅಲ್ ಖಾಯ್ದಾ ಸೇರಿಕೊಂಡ. 2001ರಲ್ಲಿ ಪ್ಯಾರಿಸ್ಸಿನಿಂದ ಮಿಯಾಮಿಗೆ ಹೋಗುವ ಅಮೆರಿಕಾದ ವಿಮಾನ ಹತ್ತಿಕೊಂಡ. ತಾನು ಧರಿಸಿದ ಶೂವಿನಲ್ಲೇ ಬಾಂಬ್ ಹುದುಗಿಸಿ ವಿಮಾನವನ್ನೇ ಸ್ಫೋಟಿಸಲು ಹೊರಟ. ಆದರೆ ಸ್ಫೋಟ ವಿಫಲವಾಗಿ ಸೆರೆಯಾದ. ಈತನಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಜೋಸ್ ಪಾಡಿಲ್ಲಾ ಅಲಯಾಸ್ ಅಬ್ದುಲ್ಲಾಹ್ ಅಲ್ ಮುಹಾಜಿರ್ ಚಿಕಾಗೋದಲ್ಲಿ ವಿಕಿರಣ ಇರುವಂಥ ಬಾಂಬ್ ಸ್ಫೋಟಿಸುವ ಸಂಚು ಮಾಡಿದ್ದ. 2002ರಲ್ಲಿ ಆತನನ್ನು ಬಂಧಿಸಿ ಸೆರೆಮನೆಗಟ್ಟಲಾಯಿತು ಈತನಿಗೂ ತಬ್ಲಿಘಿ ಜಮಾತ್ ನ ಸಂಪರ್ಕ ಇತ್ತು. ಲೈಮನ್ ಫಾರಿಸ್ ಅಲಯಾಸ್ ಮೊಹಮ್ಮದ್ ರಾವೂಫ್ ಮೂಲತಃ ಪಾಕಿಸ್ತಾನದಾತ. ಈತ ಬ್ರೂಕ್ಲಿನ್ ಸೇತುವೆಯನ್ನು ಸ್ಫೋಟಿಸುವ ಅಲ್ ಖೈದಾ ಯೋಜನೆಗೆ ಸಹಾಯ ಮಾಡಿ ಸಿಕ್ಕಿ ಬಿದ್ದು ಜೈಲುಪಾಲಾದ. ಆತನಿಗೂ ತಬ್ಲಿಘಿ ಜಮಾತ್ ನದ್ದೇ ಸಂಪರ್ಕ. ಹೀಗೆ ಅಮೆರಿಕಾದ ತುಂಬಾ ತನ್ನ ಜಾಲ ಹರಡಿಕೊಂಡಿರುವ ತಬ್ಲಿಘಿ ಜಮಾತ್ ಮತಪ್ರಚಾರದ ಹೆಸರಿನಲ್ಲಿ ಬೋಧಿಸುವುದು ಮತಾಂಧತೆಯನ್ನೇ. ಅಲ್ ಖಾಯ್ದಾ ದ ಕ್ರೇಜ್ ತುತ್ತತುದಿ ತಲುಪಿದ್ದ 1990ರ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ಆಕರ್ಷಣೆಗೆ ಒಳಗಾಗಿ ಅಮೇರಿಕ ಒಂದರಿಂದಲೇ ಸುಮಾರು ಒಂದರಿಂದ ಎರಡು ಸಾವಿರ ಯುವಕ ಯುವತಿಯರು ದೇಶ ತೊರೆದು ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ ಖೈದಾ ಸೇರಿಕೊಂಡಿದ್ದರು. ಇವರೆಲ್ಲರ ಹಿಂದೆಯೂ ಢಾಳಾಗಿ ಕಾಣಿಸುತ್ತಾ ಇದ್ದದ್ದು ತಬ್ಲಿಘಿ ಜಮಾತ್ ನ ನೆರಳೇ. ಇದೆಲ್ಲದ್ದಕ್ಕೆ ಪೂರಕವಾಗಿ ಸ್ವತಃ ಪಾಕಿಸ್ತಾನದ ಗುಪ್ತಚರ ಇಲಾಖೆಯೇ ನೀಡಿದ್ದ ರಹಸ್ಯ ವರದಿಯಲ್ಲಿ 1989ರಿಂದ ಅಮೆರಿಕಾದ ಸುಮಾರು 400 ಕ್ಕೂ ಮಿಕ್ಕಿದ ತಬ್ಲೀಘಿ ಜಮಾತ್ ಸದಸ್ಯರು ಪಾಕಿಸ್ತಾನಕ್ಕೆ ಬಂದು ಉಗ್ರತರಬೇತಿ ಪಡೆದ ಬಗ್ಗೆ ವಿವರಣೆಯಿದೆ.

ananth kumar hegde 1

ಕಳೆದೊಂದು ದಶಕದಿಂದ ನ್ಯೂ ಯಾರ್ಕ್ ನ ಕ್ವೀನ್ಸ್ ನಲ್ಲಿರುವ ಅಲ್ ಫಲಾಹ್ ಮಸೀದಿಯೇ ತಬ್ಲೀಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್. ಸೌದಿಯಿಂದ ನಿಯಂತ್ರಿತವಾಗಿರುವ ವಲ್ರ್ಡ್ ಮುಸ್ಲಿಂ ಲೀಗ್, ವಲ್ರ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಹರಮೈನ್ ಫೌಂಡೇಶನ್, ಇಂಟರ್ ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದ್ದು ತಬ್ಲಿಘಿ ಜಮಾತ್ ತನ್ನ ಮತಾಂತರದ ಚಟುವಟಿಕೆಗಳನ್ನು ಬಹಳ ದೊಡ್ಡಮಟ್ಟದಲ್ಲಿ ಮಾಡುತ್ತಿದೆ. ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಆಫ್ರಿಕಾ ಮೂಲದ ಕರಿಯ ಅಮೆರಿಕನ್ನರನ್ನು ತಬ್ಲಿಘಿ ಜಮಾತ್ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿದೆ. ಅಮೆರಿಕಾದ ಕರಿಯ ಸಮುದಾಯವನ್ನು ತನ್ನತ್ತ ಸೆಳೆದುಕೊಂಡು ಬಿಟ್ಟರೆ ಆಗ ಪೂರ್ತಿ ಅಮೆರಿಕಾದ ಅಧಿಕಾರದ ಚುಕ್ಕಾಣಿ ಹಿಡಿಯುವ, ಆ ಮೂಲಕ ಅಮೆರಿಕಾವನ್ನೇ ಇಸ್ಲಾಮಿಕ್ ರಾಷ್ಟ್ರ ಮಾಡುವ ಭಾರೀ ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಇವತ್ತು ಅಮೆರಿಕಾದ ಮುಸ್ಲಿಮರ ಪೈಕಿ ಶೇಕಡಾ 30 ರಿಂದ 40 ಶೇಕಡಾ ಮುಸ್ಲಿಮರು ಕರಿಯರೇ. ಅಮೆರಿಕಾದ ಜೈಲುಗಳನ್ನೇ ತಬ್ಲಿಘಿ ಜಮಾತ್ ಸಂಸ್ಥೆ ಗುರಿಯಾಗಿಸಿಕೊಂಡಿದೆ. ಜೈಲುಗಳಲ್ಲಿರುವ ಕರಿಯ ಖೈದಿಗಳನ್ನು ಮನವೊಲಿಸಿ ಇಸ್ಲಾಮಿಗೆ ಮತಾಂತರಿಸುವ ಕೆಲಸ ಸದ್ದಿಲ್ಲದೆಯೇ ನಡೀತಿದೆ. ಈಗ ಪ್ರತೀ ವರ್ಷವೂ ಅಂದಾಜು ಮೂವತ್ತು ಸಾವಿರ ಕರಿಯ ಖೈದಿಗಳು ಇಸ್ಲಾಮಿಗೆ ಮತಾಂತರವಾಗುತ್ತಿದ್ದಾರೆ. ಹೀಗೆ ಅಮೆರಿಕಾದ ಮೇಲೆಯೇ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಮತ್ತು ಈ ಭಾರೀ ಷಡ್ಯಂತ್ರದ ಹಿಂದೆ ತಬ್ಲಿಘಿ ಜಮಾತ್ ಇದೆ.

ಭಾರತದಲ್ಲಿ ಮೂಲವನ್ನು ಹೊಂದಿರುವ ತಬ್ಲಿಘಿ ಜಮಾತ್ ಇವತ್ತು ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ಮಲೇಷ್ಯಾದಲ್ಲಿ, ಇಂಡೋನೇಷ್ಯಾದಲ್ಲಿ, ಫಿಲಿಪೀನ್ಸ್ ನಲ್ಲಿ ಇಂಗ್ಲೆಂಡಿನಲ್ಲಿ, ಯುರೋಪಿನಲ್ಲಿ, ಅಮೆರಿಕಾ ಖಂಡದಲ್ಲಿ ಹಿಂದಿನ ಸೋವಿಯತ್ ರಷ್ಯಾ ದ ಹಲವಾರು ದೇಶಗಳಲ್ಲಿ, ಹೀಗೆ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಹಬ್ಬಿ ನಿಂತಿದೆ.

Tabligh e Jamaat Nizamuddin Markaz Delhi Corona 4

ತಬ್ಲಿಘಿ ಜಮಾತ್ ಸಂಘಟನೆ ಸಂಪೂರ್ಣ ಧಾರ್ಮಿಕ ಸಂಘಟನೆ ಮತ್ತು ಸಂಪೂರ್ಣ ರಾಜಕೀಯೇತರ ಸಂಘಟನೆ ಅಂತಲೇ ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ತಬ್ಲಿಘಿ ಜಮಾತ್ ಗೆ ಅಲ್ಲಿನ ರಾಜಕೀಯ ಪಕ್ಷಗಳು, ಅಲ್ಲಿನ ಮಂತ್ರಿಗಳು, ಅಲ್ಲಿನ ಸರಕಾರಗಳು ಸಂಪೂರ್ಣ ಬೆಂಬಲ ನೀಡಿವೆ ಮತ್ತು ಮೂಲಭೂತವಾದೀ ಇಸ್ಲಾಮನ್ನು ಪ್ರಚುರ ಪಡಿಸಲು ಯಥೇಚ್ಛ ಹಣಕಾಸಿನ ಮತ್ತು ಆಡಳಿತಾತ್ಮಕ ನೆರವು ನೀಡಿದೆ. ಪಾಕಿಸ್ತಾನವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಿದ್ದ ಜಿಯಾ ಉಲ್ ಹಕ್ ತಬ್ಲಿಘಿ ಜಮಾತ್ ಗೆ ಮತಪ್ರಚಾರಕ್ಕೆ ಬೇಕಾದ ಎಲ್ಲ ನೆರವು ಸೌಲಭ್ಯಗಳನ್ನು ಒದಗಿಸಿದ್ದ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲಿಘಿ ಜಮಾತ್ ಗೆ ದೊಡ್ಡ ಫೈನಾನ್ಷಿಯರ್ ಆಗಿದ್ದರು. ಆತನ ಮಗ ಪ್ರಧಾನಿ ಆದ ಮೇಲೆ ಜಮಾತ್ ಸದಸ್ಯರಿಗೆ ಪಾಕಿಸ್ತಾನ ಸರಕಾರದ ಉನ್ನತ ಹುದ್ದೆಗಳು ಲಭಿಸಿದ್ದವು ಪಾಕಿಸ್ತಾನದ ಒಂಭತ್ತನೇ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲಿಘಿ ಜಮಾತ್ ನ ಕ್ಯಾಂಡಿಡೇಟುಗಳಾಗಿದ್ದರು. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯುವ ಸಂಚಿನಲ್ಲೂ ತಬ್ಲಿಘಿ ಜಮಾತ್ ಪಾತ್ರ ಇತ್ತು.

ಈಗ ಇದೆ ತಬ್ಲಿಘಿ ಜಮಾತ್ ಭಾರತಕ್ಕೇ ಗಂಡಾಂತರ ಉಂಟುಮಾಡುವ ಭಾರೀ ಸಂಚು ನಡೆಸಿದ ಆರೋಪ ಎದುರಿಸುತ್ತಿದೆ. ಕೊರೋನಾ ವೈರಸ್ ಭಯಾನಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್ ನ ತಮ್ಮ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಮತಪ್ರಚಾರಕರನ್ನು ಸೇರಿಸಿಕೊಂಡು ಸೋಂಕನ್ನು ದೇಶಾದಾದ್ಯಂತ ಹರಡುವ ಒಂದು ವಿಕೃತ ಸಂಚು ನಡೆಸಲಾಯಿತೇ? ಮೇಲ್ನೋಟಕ್ಕೆ ಸಂಚು ನಿಜ ಅಂತಲೇ ಅನ್ನಿಸುತ್ತದೆ. ಯಾಕೆಂದರೆ ಈ ಸಭೆಯಲ್ಲಿ ಹಲವಾರು ವಿದೇಶೀ ಮತಪ್ರಚಾರಕರಿದ್ದರು. ಅವರಿಗಿದ್ದ ವೈರಸ್ಸಿನ ಸೋಂಕು ಇತರರಿಗೂ ಹರಡಿದ್ದು, ಹಾಗೆ ಸೋಂಕಿತರಾದ ತಬ್ಲೀಘಿ ಜಮಾತ್ ಸದಸ್ಯರು ಎಲ್ಲೆಂದರಲ್ಲಿ ದೇಶಪೂರ್ತಿ ಓಡಾಡಿದ್ದಾರೆ ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ಭಾರತ ಸರಕಾರ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಿ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

699032 anant kumar hegde

ಅಷ್ಟೇ ಅಲ್ಲ, ತಬ್ಲಿಘಿ ಜಮಾತ್ ನ ಅಧ್ಯಕ್ಷನನ್ನು ಸೇರಿಸಿ ಅದೆಷ್ಟೋ ಮಂದಿ ತಲೆತಪ್ಪಿಸಿ ಎಲ್ಲೆಲ್ಲೋ ಮಸೀದಿಗಳಲ್ಲಿ ಅವಿತು ಕುಳಿತಿದ್ದಾರೆ. ಎಷ್ಟೇ ವಿನಂತಿ ಮಾಡಿಕೊಂಡರೂ ಇವರ್ಯಾರೂ ಕೊರೋನಾ ವೈರಸ್ ತಪಾಸಣೆಗೆ ಒಪ್ಪುತ್ತಿಲ್ಲ ಅದಕ್ಕಿಂತಲೂ ಹೀನವೆಂದರೆ ಈಗಾಗಲೇ ಕೊರೋನಾಗೆ ತುತ್ತಾಗಿರುವ ತಬ್ಲಿಘಿ ಜಮಾತ್ ಸದಸ್ಯರು ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ, ವೈದ್ಯರ ಮೇಲೆ ದಾದಿಯರ ಮೇಲೆ ಉಗುಳುತ್ತಿದ್ದಾರೆ, ನಗ್ನವಾಗಿ ಓಡಾಡುತ್ತ ಮುಜುಗರ ಸೃಷ್ಟಿಸುತ್ತಿದ್ದಾರೆ. ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ. ತಮಗೆ ಯಾವುದೇ ವೈರಸ್ ಸೋಂಕೂ ಇಲ್ಲವೆಂದೇ ಹಠಹಿಡಿಯುತ್ತಿದ್ದಾರೆ. ಇದೆಲ್ಲವೂ ಒಂದು ವ್ಯವಸ್ಥಿತ ಸಂಚು ಅಂತಲೇ ಅನ್ನಿಸತೊಡಗಿದೆ.

ಇವತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ತುಂಬಾ, ದೇಶದ ಉದ್ದಗಲಕ್ಕೂ ಸುಮಾರು ಹದಿನೈದು ಸಾವಿರ ತಬ್ಲೀಘಿ ಜಮಾತ್ ಮತಪ್ರಚಾರಕರು ಕಾರ್ಯಾಚರಿಸುತ್ತಿದ್ದಾರೆ. ಅದೇ ಹೊತ್ತಿಗೆ ಕಾಕತಾಳೀಯವಾಗಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿ ಅಮೆರಿಕಾ ಈಗ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಹಾಗಾಗಿ ಭಾರತದಲ್ಲಿ ಮಾಡಿದ ರೀತಿಯ ಸಂಚನ್ನೇ ತಬ್ಲಿಘಿ ಜಮಾತ್ ಅಮೆರಿಕಾದಲ್ಲಿಯೂ ಮಾಡಿತೇ? ಜಗತ್ತನ್ನೇ ಇಸ್ಲಾಮೀಕರಣಗೊಳಿಸುವ ಬೃಹತ್ ಷಡ್ಯಂತ್ರದ ಭಾಗವಾಗಿಯೇ ಇದೆಲ್ಲವೂ ನಡೆಯುತ್ತಿದೆಯೇ? ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ?

ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ? ಮುಂದುವರಿಯುವುದು…. ಎಂದು ಬರೆದು ಅನಂತ್‍ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

TAGGED:Anantkumar HegdeCorona Virusfacebook postindiaPublic TVTablighi Jamaatಅನಂತ್‍ಕುಮಾರ್ ಹೆಗ್ಡೆಕೊರೊನಾ ವೈರಸ್ತಬ್ಲಿಘಿ ಜಮಾತ್ಪಬ್ಲಿಕ್ ಟಿವಿಫೇಸ್‍ಬುಕ್ ಪೋಸ್ಟ್ಭಾರತ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Bigg Boss Kannada
BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!
Cinema Latest Top Stories TV Shows
Darshan Bail Cancelled Supreme Court order sends a good message to society Priya Haasan
ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌
Cinema Latest Top Stories
Actor Shishir 1
ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ
Cinema Karnataka Latest Sandalwood Top Stories
Daali Dhananjaya 1
ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್
Cinema Latest Sandalwood
Actress Ramya 2
ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್
Cinema Latest Sandalwood Top Stories

You Might Also Like

Belagavi
Belgaum

3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

Public TV
By Public TV
15 minutes ago
Trump Putin
Latest

ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

Public TV
By Public TV
25 minutes ago
Almatti Dam
Districts

ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

Public TV
By Public TV
1 hour ago
Fire Accident 4
Bengaluru City

ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

Public TV
By Public TV
2 hours ago
Nagaland Governor La Ganesan
Latest

ನಾಗಾಲ್ಯಾಂಡ್ ಗವರ್ನರ್ ಲಾ ಗಣೇಶನ್ ನಿಧನ – ಮೋದಿ ಸಂತಾಪ

Public TV
By Public TV
2 hours ago
chandrashekaranatha swamiji
Bengaluru City

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?