ಗದಗ: ಅನಂತ ಕುಮಾರ್ ಕರ್ನಾಟಕದ ಒಬ್ಬ ಎತ್ತರದ ನಾಯಕ. ಕರ್ನಾಟಕ ಹಿತ ಕಾಪಾಡುವಲ್ಲಿ ಮುತ್ಸದ್ದಿ ನಾಯಕರಾಗಿ ಪಕ್ಷಾತಿತವಾಗಿ ದಿಟ್ಟ ನಿಲುವು ತಾಳುತ್ತಿದ್ದ ಗೆಳೆಯನ ಅಗಲುವಿಕೆ ಸಾಕಷ್ಟು ನೋವುಂಟಾಗಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಅನಂತ್ ಕುಮಾರ ನಿಧನಕ್ಕೆ ಕಂಬನಿ ಮಿಡಿದರು.
ಅನಂತ ಕುಮಾರ್ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಜೊತೆಗೆ ಸಂಘಟನೆಗೆ ಧುಮುಕಿದವರು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ, ವಿದ್ಯಾರ್ಥಿಗಳ ಒಳಿತಿಗೆ, ವಿದ್ಯಾರ್ಥಿಗಳ ಶಕ್ತಿಗೆ ಚಿಂತನೆ ಮಾಡಿದ ಒಬ್ಬ ಯುವನಾಯಕ. ನನ್ನ ಅವರ ಸಂಪರ್ಕ ಬಹಳ ಗಾಢವಾಗಿತ್ತು. ಸೆನೆಟ್ ಸದಸ್ಯನಾಗುವ ಚುನಾವಣೆಯಲ್ಲಿ ಜೊತೆಗೂಡಿ ಕೆಲಸ ಮಾಡಿದ ನೆನಪು ಅಚ್ಚಳಿಯದಂತಿವೆ. ನಾನು ವಿಧಾನ ಪರಿಷತ್ ಸದಸ್ಯನಿದ್ದಾಗಲೂ ಹಲವಾರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಹುಬ್ಬಳ್ಳಿಯಲ್ಲಿ ಒಟ್ಟಿಗೆ ಬಹಳಷ್ಟು ಕಾಲ ಕಳೆದಿದ್ದೇವೆ. ಅನಂತ ಕುಮಾರ್ ನಾವು ಉತ್ತಮ ಗೆಳೆಯರಾಗಿದ್ದೇವು ಎಂದು ಎಚ್.ಕೆ ಪಾಟೀಲ್ ಸ್ಮರಿಸಿಕೊಂಡರು.
- Advertisement 2
- Advertisement 3
ಅನಂತ ಕುಮಾರ್ ವಾಜಪೇಯಿ, ಎಲ್.ಕೆ ಆಡ್ವಾಣಿ ಅವರಿಂದ ಬಹಳ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದರು. ಅನಂತ ಕುಮಾರ್ ಕರ್ನಾಟಕದಲ್ಲಿ ಎಬಿವಿಪಿ ಹಾಗೂ ಬಿಜೆಪಿ ಸಂಘಟನೆ ಮಾಡಲು ಬಹಳ ಯಶಸ್ವಿಯಾದರು. ಕೇಂದ್ರ ಸಚಿವರಾದ ವೇಳೆ ಕರ್ನಾಟಕ ವಿಷಯ ವಿಚಾರಗಳು ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣ, ಕಾವೇರಿ ವಿವಾದಗಳು, ಸಮಸ್ಯೆಗಳು ಬಂದಾಗ ಸಲೀಸಾಗಿ ಬಗೆಹರಿಸುತ್ತಿದ್ದರು. ಒಗ್ಗಟ್ಟಿನ ನಿಲುವು ಅವರಲ್ಲಿತ್ತು ಕರ್ನಾಟಕ ವಿಷಯದಲ್ಲಿ ಬಹಳ ಮುತುವರ್ಜಿ ತೋರಿಸುತ್ತಿದ್ದರು ಎಂದು ಹೇಳಿದರು.
- Advertisement 4
ಕಳಸಾ ಬಂಡೂರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ಮೇಲೆ ಒಪ್ಪಿಗೆ ರದ್ದಾಗುವ ಪ್ರಸಂಗ ನಿರ್ಮಾಣವಾಗಿತ್ತು. ಆ ವೇಳೆ ಒಪ್ಪಿಗೆ ನೀಡಿದ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿದ ರಾಜಕೀಯ ನಿರ್ಣಯ ತೆಗೆದುಕೊಂಡರು. ಪ್ರತ್ಯತ್ತರವಾಗಿ ಎಸ್.ಎಂ ಕೃಷ್ಣ, ವಾಜಪೇಯಿ ಅವರಿಗೆ ಪತ್ರ ಬರೆದರು. ಕಳಸಾ ಬಂಡೂರಿ ನೀರಿನ ತೀರ್ಪಿನ ವಿಷಯದಲ್ಲಿ ಅನಂತ ಕುಮಾರ್ ಕೊಡುಗೆ ಅನನ್ಯವಾಗಿದೆ. ಅನಂತ ಕುಮಾರ್ ಅವರ ಬಹಳ ಉಜ್ವಲ ಭವಿಷ್ಯ ನೋಡಬೇಕಾಗಿತ್ತು. ಅವರ ಅಕಾಲಿಕೆಯ ಅಗಲುವಿಕೆ ಕರ್ನಾಟಕಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಎಚ್.ಕೆ ಪಾಟೀಲ್ ಕಂಬನಿ ಮಿಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews