ಬಳ್ಳಾರಿ: ವಿಜಯನಗರ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸಖತ್ ಬ್ಯುಸಿ ಆಗಿದ್ದಾರೆ. ಆದರೆ ಈ ಮಧ್ಯೆಯೂ ಅದ್ಧೂರಿಯಾಗಿ ನಿರ್ಮಿಸಿದ ತಮ್ಮ ಬೃಹತ್ ಬಂಗಲೆ ಗೃಹಪ್ರವೇಶ ಕಾರ್ಯಕ್ರಮ ಮಾಡುತ್ತಿದ್ದಾರೆ.
ನಗರದ ಸ್ಟೇಷನ್ ರಸ್ತೆಯಲ್ಲಿ ಆನಂದ್ ಸಿಂಗ್ ಅವರು ಅರಮನೆ ರೀತಿ ಕಾಣುವ ಬೃಹತ್ ಬಂಗಲೆ ಕಟ್ಟಿಸಿದ್ದಾರೆ. ಅದಕ್ಕೆ ‘ದ್ವಾರಕ ನಿಲಯ’ ಎಂದು ಹೆಸರಿಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಈ ಬೃಹತ್ ಬಂಗಲೆಗೆ ಇಂದು ಸರಳವಾಗಿ ಗೃಹಪ್ರವೇಶ ಮಾಡಲಾಗುತ್ತಿದೆ. ಕುಟುಂಬ ಸದಸ್ಯರಿಗೆ ಮಾತ್ರ ಕಾರ್ಯಕ್ರಮ ಸೀಮಿತವಾಗಿದ್ದು, ಉಪಚುನಾವಣೆ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎನ್ನಲಾಗಿದೆ.
ಎರಡು ವರ್ಷ ಸಮಯ ಪಡೆದು, ಬರೋಬ್ಬರಿ ಮೂರು ಎಕ್ರೆ ಪ್ರದೇಶದಲ್ಲಿ ಬಂಗಲೆ ನಿರ್ಮಿಸಲಾಗಿದೆ. ಹಾಗೆಯೇ ಕುಟುಂಬಸ್ಥರಿಗೆ ಬಿಟ್ಟರೆ ಒಳಗೆ ಯಾರಿಗೂ ಪ್ರವೇಶವಿಲ್ಲ. ಡಿಸೆಂಬರ್ 1 ರಂದು ಆನಂದ್ ಸಿಂಗ್ ಮಗ ಸಿದ್ದಾರ್ಥ ಸಿಂಗ್ ಮದುವೆ ನಿಶ್ಚಯವಾಗಿದ್ದು, ಮಗನ ಮದುವೆಗೆ ಎಲ್ಲರಿಗೂ ಆನಂದ್ ಸಿಂಗ್ ಆಮಂತ್ರಣ ನೀಡಿದ್ದಾರೆ.