‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ

Public TV
2 Min Read
Pranaya Amrutha

ಹೈದರಾಬಾದ್: ದೇಶಾದ್ಯಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರ ಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಮಾರುತಿ ರಾವ್ ಕೊನೆಯದಾಗಿ ತನ್ನ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿರುವ ಡೆತ್‍ನೂಟ್ ಪತ್ತೆಯಾಗಿದೆ.

ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಅದೇ ರೂಮಿನ ಡ್ರೆಸ್ಸಿಂಗ್ ಟೇಬಲ್ ಮೇಲೆ ಡೆತ್‍ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಪ್ರಣಯ್ ಮರ್ಯಾದಾ ಹತ್ಯೆ ಕೇಸ್- ಅಮೃತಾ ತಂದೆ ಆತ್ಮಹತ್ಯೆ

DEATH NOTE

ಡೆತ್‍ನೋಟ್‍ನಲ್ಲಿ ಪತ್ನಿ ಮತ್ತು ಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಮೊದಲಿಗೆ ಪತ್ನಿಗೆ ಗಿರಿಜಾ ನನ್ನನ್ನು ಕ್ಷಮಿಸು ಎಂದು ಬರೆದಿದ್ದಾನೆ. ನಂತರ ಅಮೃತಾ ಅಮ್ಮನ ಬಳಿ ಬಾ ಎಂದು ಬರೆದಿದ್ದಾನೆ. ಸದ್ಯಕ್ಕೆ ಪೊಲೀಸರು ಇದು ಮಾರುತಿ ರಾವ್ ಕೈ ಬರವೇ ಎಂದು ಪರಿಶೀಲನೆ ಮಾಡುತ್ತಿದ್ದಾನೆ. ಇದನ್ನೂ ಓದಿ: ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

ಪ್ರಣಯ್ ಹತ್ಯೆಯ ಬಳಿ ಅಮೃತಾ ಅಮ್ಮನ ಮನೆಗೆ ಹೋಗಿಲ್ಲ. ಬದಲಿಗೆ ಪ್ರಣಯ್ ಅಮ್ಮ ಅಮೃತಾ ಮತ್ತು ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಮೃತಾಗೆ ತನ್ನ ಅಮ್ಮನ ಬಳಿ ಹೋಗುವಂತೆ ಮಾರುತಿ ರಾವ್ ಡೆತ್‍ನೋಟಿನಲ್ಲಿ ತಿಳಿಸಿದ್ದಾನೆ.

AMRUTHA 2

ಏನಿದು ಪ್ರಕರಣ?
ಮಾರುತಿ ರಾವ್ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಿಂದ ಕೆಲಸ ಇದೆ ಎಂದು ಮನೆಯಿಂದ ಹೈದರಾಬಾದ್‍ಗೆ ಹೋಗುವುದಾಗಿ ಪತ್ನಿ ಗಿರಿಜಾಗೆ ತಿಳಿಸಿದ್ದನು. ಆದರೆ ಯಾವ ಕೆಲಸ ಎಂದು ಪತ್ನಿಗೆ ತಿಳಿಸಿರಲಿಲ್ಲ. ಅಲ್ಲದೇ ತನ್ನ ಚಾಲಕ ರಾಜೇಶ್‍ಗೂ ಏನು ಹೇಳದೆ ಕರೆದುಕೊಂಡು ಹೋಗಿದ್ದನು. ಶನಿವಾರ ಆರ್ಯವೈಶ್ಯ ಭವನಕ್ಕೆ ಹೋಗಿ ಊಟಿ ಮಾಡಿ ರೂಮ್‍ಗೆ ಹೋಗಿದ್ದನು. ಚಾಲಕ ಕಾರಿನಲ್ಲಿಯೇ ಮಲಗಿದ್ದನು.

Amrutha Father Facebook

ಮಾರುತಿ ರಾವ್‍ಗೆ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು.

Amrutha police car

Share This Article
Leave a Comment

Leave a Reply

Your email address will not be published. Required fields are marked *