ರಾಯಚೂರು: ಕಾಂಗ್ರೆಸ್ ಸರ್ಕಾರ ದೇಶಕ್ಕೆ ಏನು ಮಾಡಲ್ಲ, ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದರು.
ರಾಯಚೂರಿನ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ 3 ಕಡೆ ಎನ್ಡಿಎ (NDA) ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್ ಉತ್ತರ ಭಾರತದಲ್ಲಿ ಮುಗ್ಗರಿಸಿದೆ ಎಂದರು.
ರಾಜ್ಯ ಸರ್ಕಾರ ಜಿಲ್ಲೆಗೆ 4,500 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ನೀಡಿದೆ. ಯಾವಾಗ ಕಾಂಗ್ರೆಸ್ (Congress) ಸರ್ಕಾರ ಇತ್ತೊ, ಆಗ ಭ್ರಷ್ಟಾಚಾರ ಮಾಡಿದೆ. ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಆ ಹಣವನ್ನು ದೆಹಲಿಗೆ ಕಳುಹಿಸುತ್ತದೆ. ಬಿಎಸ್ವೈ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಕೊಟ್ಟಿದ್ದೀರಿ. ಜೆಡಿಎಸ್ ಕಡಿಮೆ ಸೀಟು ಪಡೆದು, ದುರ್ಬಲ ಸರ್ಕಾರ ಮಾಡಿತ್ತು. ರಾಜ್ಯದ ಬಿಜೆಪಿ (BJP) ಸರ್ಕಾರ ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಆರ್ಥಿಕ ಸ್ಥಿತಿಯಲ್ಲಿ ದೇಶ 11 ರಿಂದ 5ನೇ ಸ್ಥಾನಕ್ಕೆ ಏರಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಪುಲ್ವಾಮ ಪ್ರಕರಣದಲ್ಲಿ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಮನೆ ಮನೆಗೆ ಗ್ಯಾಸ್, ಶೌಚಾಲಯ, ವಿದ್ಯುತ್ ನೀಡಿದೆ ಕೊರೊನಾದ ಎರಡು ಲಸಿಕೆಗೆ ಒಂದೇ ಒಂದು ಪೈಸೆ ಪಡೆದಿಲ್ಲ. ಪ್ರತಿ ಬಡವರ ಮನೆಗೆ ಐದು ಕೆಜಿ ರೇಷನ್ ನೀಡಿದೆ ಎಂದರು. ಇದನ್ನೂ ಓದಿ: ಅರಸೀಕೆರೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದ ಶಿವಲಿಂಗೇಗೌಡರಿಗೆ ಈ ಬಾರಿ ಸಿಗುತ್ತಾ ಜಯ?
ಬೊಮ್ಮಾಯಿ ಸರ್ಕಾರ ಕೂಡ, ಮೈನಾರಿಟಿ ಅವರಿಗೆ ಮೀಸಲಾತಿ ಹೆಚ್ಚಿಸಿದೆ. ಲಿಂಗಾಯತರಿಗೂ ಮೀಸಲಾತಿ ನೀಡಿದ್ದಾರೆ. 5,000 ಕೋಟಿ ಹಣವನ್ನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ನೀಡಿದೆ. ರಾಯಚೂರಿನಲ್ಲಿ ಏರ್ಪೋರ್ಟ್ ಕೂಡ ಸ್ಥಾಪನೆಯಾಗತ್ತದೆ ಎಂದು ಹೇಳಿದರು. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್ ಕಿ ಬಾತ್ನಲ್ಲಿ ಮೋದಿ ಕರೆ