ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಹೋದ ಅಂಬುಲೆನ್ಸ್ ಚಾಲಕ!

Public TV
1 Min Read
DVG

ದಾವಣಗೆರೆ: ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಾವನ್ನಪ್ಪಿದ್ದಾನೆ ಎಂದು ಅಂಬುಲೆನ್ಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿಯೇ ಬಿಟ್ಟುಬಂದ ಘಟನೆ ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಳಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಕಾರ್ಮಿಕರ ಮೇಲೆ ಮಣ್ಣು ಕುಸಿದು ಬಿದ್ದು ಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್(32), ನಜೀರ್(30) ಹಾಗೂ ಸಿದ್ದಪ್ಪರ ನಾಗರಾಜ್(28) ರನ್ನು ರಕ್ಷಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

vlcsnap 2018 01 09 15h26m05s141

ಈ ವೇಳೆ ಬಂದ ಅಂಬುಲೆನ್ಸ್ ಇಬ್ಬರನ್ನು ಕರೆತಂದು ನಾಗರಾಜ್ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಗ್ರಾಮಸ್ಥರು ನಾಗರಾಜ್ ರನ್ನು ಖಾಸಗಿ ಕಾರ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಬರುವಷ್ಟರಲ್ಲಿ ನಾಗರಾಜ್ ಸಾವನ್ನಪ್ಪಿದ್ದಾರೆ.

ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಸ್ಪತ್ರೆಯ ಮುಂದೆ ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು.

vlcsnap 2018 01 09 15h26m17s11

vlcsnap 2018 01 09 15h26m22s72

vlcsnap 2018 01 09 15h26m32s152

vlcsnap 2018 01 09 15h26m37s222

vlcsnap 2018 01 09 15h26m45s37

vlcsnap 2018 01 09 15h29m51s110

Share This Article
Leave a Comment

Leave a Reply

Your email address will not be published. Required fields are marked *