– ಅರೆಸ್ಟ್ ಮಾಡಿಸಿದ ವ್ಯಕ್ತಿಯಿಂದಲೇ ಪ್ರಶಸ್ತಿ ಸ್ವೀಕಾರ ಅಂತ ಚರ್ಚೆ!
ಪುಷ್ಪ -2 (Pushpa-2) ಚಿತ್ರದ ಉತ್ತಮ ಅಭಿನಯಕ್ಕೆ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಿಎಂ ರೇವಂತ್ ರೆಡ್ಡಿಯವರು ಅಲ್ಲು ಅರ್ಜುನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ್ದಾರೆ.
ಪುಷ್ಪ -2 ಪ್ರಪಂಚದಾದ್ಯಂತ ಭರ್ಜರಿ ಯಶಸ್ಸು ಖಂಡಿದೆ. ಆದರೆ ಈ ಸಿನಿಮಾ ರಿಲೀಸ್ ಆರಂಭದಲ್ಲಿ ನಟ ಅಲ್ಲು ಅರ್ಜುನ್ ಜೈಲುವಾಸ ಅನುಭವಿಸಬೇಕಾದ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು. ಕಾರಣ ತೆಲಂಗಾಣದ ಸಂಧ್ಯಾ ಥಿಯೇಟರ್ಗೆ ಅಲ್ಲು ಅರ್ಜುನ್ ಭೇಟಿ ಕೊಟ್ಟಾಗ ಕಾಲ್ತುಳಿತದಿಂದಾಗಿ ಸಾವಾಗಿತ್ತು. ಈ ವೇಳೆ, ತೆಲಂಗಾಣ ಸರ್ಕಾರ ಅಲ್ಲು ಅರ್ಜುನ್ ಅವರನ್ನ ಬಂಧಿಸಿ ಚಂಚಲಗುಡ್ಡ ಜೈಲಿನಲ್ಲಿ ಇರಿಸಿತ್ತು. ಈಗ ನಟ ಅಲ್ಲು ಅರ್ಜುನ್ಗೆ ಉತ್ತಮ ನಟ ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರವೇ ನೀಡಿದೆ.
2024 – 25ನೇ ಸಾಲಿನ ಗದ್ದರ್ ಅವಾರ್ಡ್ಗಳನ್ನು ತೆಲಂಗಾಣ ಸರ್ಕಾರ ಪ್ರಕಟ ಮಾಡಿದ್ದು, ಉತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್ ಪಾಲಾಗಿದೆ. ಪುಷ್ಪ 2 ಚಿತ್ರದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಲಭಿಸಿದೆ. ಅರೆಸ್ಟ್ ಮಾಡಿಸಿದ್ದ ತೆಲಂಗಾಣ ಸರ್ಕಾರವೇ ಅಲ್ಲು ಅರ್ಜುನ್ಗೆ ಉತ್ತಮ ಪ್ರಶಸ್ತಿ ನೀಡಿದೆ ಅಂತ ಈಗ ಚರ್ಚೆ ಆರಂಭವಾಗಿದೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಂದಲೇ (Revanth Reddy) ಪ್ರಶಸ್ತಿ ಸ್ವೀಕಾರ ಆಗಿರೋದಕ್ಕೆ ಅಭಿಮಾನಿಗಳು ಟ್ರೋಲ್ ಮಾಡ್ತಾ ಇದ್ದಾರೆ. ಪುಷ್ಪ-2 ಚಿತ್ರದ ಆಡಿಯೋ ರಿಲೀಸ್ ವೇಳೆ ರೇವಂತ್ ರೆಡ್ಡಿ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ ರೇವಂತ್ ರೆಡ್ಡಿ ಅರೆಸ್ಟ್ ಮಾಡಿಸಿದ್ದರು. ಅದೇ ರೇವಂತ್ ರೆಡ್ಡಿ ಇಂದು ಉತ್ತಮ ಪ್ರಶಸ್ತಿಯನ್ನು ಅಲ್ಲು ಅರ್ಜುನ್ ಗೆ ವಿತರಿಸಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗ್ತಿದೆ.