ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಅಕ್ಬರ್ಪುರ ಹೆಸರನ್ನು ಬದಲಾಯಿಸುವ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸುಳಿವು ನೀಡಿದ್ದಾರೆ.
ನಗರದ ಹೆಸರನ್ನು ಉಚ್ಛರಿಸುವುದರಿಂದ ಬಾಯಿಗೆ ಕೆಟ್ಟ ರುಚಿ ಬರುತ್ತದೆ. ಇವೆಲ್ಲವೂ ಬದಲಾಗುತ್ತವೆ. ನಾವು ನಮ್ಮ ರಾಷ್ಟ್ರದಿಂದ ವಸಾಹತುಶಾಹಿಯ ಎಲ್ಲಾ ಅವಶೇಷಗಳನ್ನು ತೊಡೆದುಹಾಕಬೇಕು. ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್ ಪಡೆ ಲ್ಯಾವೆಂಡರ್ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?
ಅಕ್ಬರ್ಪುರ (Akbarpur) ಅಷ್ಟೇ ಅಲ್ಲದೆ, ಅಲಿಗಢ್, ಅಜಮ್ಗಢ್, ಷಹಜಹಾನ್ಪುರ, ಗಾಜಿಯಾಬಾದ್, ಫಿರೋಜಾಬಾದ್, ಫರೂಕಾಬಾದ್ ಮತ್ತು ಮೊರಾದಾಬಾದ್ ಸೇರಿದಂತೆ ರಾಜ್ಯದೊಳಗಿನ ಹಲವಾರು ಜಿಲ್ಲೆಗಳ ಹೆಸರನ್ನು ಬದಲಾಯಿಸಲು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2017 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಐತಿಹಾಸಿಕ ಅಧೀನತೆಯ ಸಂಕೇತಗಳನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮಳೆ ಅಬ್ಬರ; ಧರೆಗುರುಳಿದ ಮರ, ವಿದ್ಯುತ್ ಕಂಬಗಳು – ಎಲ್ಲೆಲ್ಲಿ ಏನಾಗಿದೆ?
2019 ರ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿತು. ಇದು ನಗರದ ಐತಿಹಾಸಿಕ ಗುರುತನ್ನು ಮರಳಿ ಪಡೆಯುವಲ್ಲಿ ಬೇರೂರಿದೆ ಎನ್ನಲಾಗಿತ್ತು. ಈ ಐತಿಹಾಸಿಕ ಸ್ಥಳದ ಮೂಲ ಹೆಸರು ಪ್ರಯಾಗ್ರಾಜ್. ಆದರೆ ಇದನ್ನು ಮೊಘಲರು ‘ಅಲಹಾಬಾದ್’ ಎಂದು ಬದಲಾಯಿಸಿದ್ದರು ಎಂದು ಸಂತರ ವಾದವಾಗಿತ್ತು.
ಫೈಜಾಬಾದ್ ಅನ್ನು ಅಯೋಧ್ಯೆ ಎಂದೂ, ಝಾನ್ಸಿ ರೈಲು ನಿಲ್ದಾಣಕ್ಕೆ ರಾಣಿ ಲಕ್ಷ್ಮಿ ಬಾಯಿಯ ಹೆಸರನ್ನು ಮರುನಾಮಕರಣ ಮಾಡಲಾಯಿತು.