ನವದೆಹಲಿ: ಲಂಕೆಯನ್ನು ಸುಟ್ಟು ಹನುಮಂತ ಬಂದಂತೆ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ಕ್ಯಾಂಪ್ಗಳನ್ನು ಸುಟ್ಟು ನೆಲಸಮ ಮಾಡಿದೆ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಏರ್ಸ್ಟ್ರೈಕ್ ಶೌರ್ಯವನ್ನು ಹೊಗಳಿದ್ದಾರೆ.
ಭಾರತೀಯ ವಾಯುಪಡೆಗೆ ಇಂತಹ ಅದ್ಭುತ ಏರ್ಸ್ಟ್ರೈಕ್ ನಡೆಸಲು ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೂ ಧನ್ಯವಾದಗಳು. ಈ ಮೂಲಕ ಪಾಕಿಸ್ತಾನ ಮತ್ತೆ ಭಾರತದತ್ತ ತನ್ನ ಕೆಟ್ಟ ದೃಷ್ಟಿ ಹಾಕಲು ಹೆದರುವಂತೆ ವಾಯುಸೇನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.
ಪವನ ಪುತ್ರ ಹನುಮಂತ ಲಂಕೆಯನ್ನು ಧ್ವಂಸ ಮಾಡಿ ವಾಪಸ್ ಆದಂತೆ ವಾಯುಪಡೆ ಉಗ್ರರನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ದೇಶಕ್ಕೆ ಮರಳಿದೆ. ಒಂದೇ ಒಂದು ಸಣ್ಣ ಗಾಯವಾದಂತೆ ಚಾಣಾಕ್ಯತನದಿಂದ ಕೆಲಸ ಮುಗಿಸಿ ವಾಯುಪಡೆ ವಾಪಸ್ ಬಂದಿದೆ. ಈ ಮೂಲಕ ಪ್ರಜೆಗಳಲ್ಲಿ ದೇಶದಲ್ಲಿ ಭಯೋತ್ಪದನೆ ನೆಲಸಮವಾಗುತ್ತದೆ ಎಂಬ ನಂಬಿಕೆ ಮೂಡುತ್ತಿದೆ. ಇಷ್ಟೆಲ್ಲ ನಡೆದರೂ, ನೂರಾರು ಉಗ್ರರು ಮಣ್ಣಾದರೂ ಪಾಕ್ ಸೇನೆಗೆ ಮಾತ್ರ ಕಿಂಚಿತ್ತು ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದು ಭಾರತೀಯ ಸೇನೆಯ ಶಕ್ತಿ ಎಂದು ಸುಮಿತ್ರಾ ಮಹಾಜನ್ ಹೆಮ್ಮೆಯಿಂದ ವಾಯುಪಡೆಯ ಏರ್ಸ್ಟ್ರೈಕ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv