ಚೆನ್ನೈ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಇಂದು ಚೆನ್ನೈನ ಕಾವೇರಿ ಆಸ್ಪತ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷ ಎಸ್. ತಿರುನವುಕರಸರ್ ರೊಂದಿಗೆ ಸಂಜೆ 4.15 ಭೇಟಿ ನೀಡಿದ್ದಾರೆ. ಈ ವೇಳೆ ಕರುಣಾನಿಧಿಯವರ ಆರೋಗ್ಯದ ಕುರಿತು ಪುತ್ರ ಸ್ಟಾಲಿನ್ ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
I visited Kalaignar today. Wonderful to see that the Tamil fighting spirit that has endeared him to millions, is still strong! I join his fans all around the world, his well wishers and his family, in wishing him a speedy recovery. #Karunanidhi pic.twitter.com/3QEv9myfCn
— Rahul Gandhi (@RahulGandhi) July 31, 2018
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕರುಣಾನಿಧಿಯವರ ವಿಚಾರದಲ್ಲಿ ಸಿಎಂ ಪಳನಿಸ್ವಾಮಿಯವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಕರುಣಾನಿಧಿಯವರು ತಮಿಳುನಾಡಿನ ಅತ್ಯಂತ ಕಠಿಣ ವ್ಯಕ್ತಿಯಾಗಿದ್ದು, ಆದಷ್ಟು ಬೇಗ ಅವರು ಗುಣವಾಗಲಿದ್ದಾರೆ ಎಂದರು.
ಕರುಣಾನಿಧಿಯವರ ಅವರ ಆರೋಗ್ಯ ಸ್ಥಿರವಾಗಿದ್ದು. ಕರುಣಾನಿಧಿ ಅವರೊಂದಿಗೆ ನಾವು ಸುದೀರ್ಘ ಸಂಬಂಧವನ್ನು ಹೊಂದಿದ್ದೇವೆ. ಸೋನಿಯಾ ಜೀಯವರು ಸಹ ಕರುಣಾನಿಧಿಯವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.
94 ವರ್ಷದ ಕರುಣಾನಿಧಿಯವರು ಮೂತ್ರನಾಳದ ಸೋಂಕು, ಜ್ವರ ಹಾಗೂ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದ ಪರಿಣಾಮ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ಶುಕ್ರವಾರ ದಾಖಲಿಸಲಾಗಿದೆ.
Rahul Gandhi met ailing DMK chief M Karunanidhi at the Kauvery hospital in Chennai
Read @ANI Story | https://t.co/KZE9mm8yZC pic.twitter.com/Z9aM6MJdCy
— ANI Digital (@ani_digital) July 31, 2018