ಗಾಂಧಿನಗರ: ವಿಮಾನ ದುರಂತದಿಂದ (Plane Crash) 270 ಮಂದಿ ಸುಟ್ಟು ಕರಕಲು ಆಗಿದ್ದು, ವಿಮಾನ ಭಸ್ಮವಾಗಿದೆ. ಆದರೆ ಜನರು ತಂದಿದ್ದ ದುಡ್ಡು ಮಾತ್ರ ಸುಟ್ಟಿಲ್ಲ.
ಅಹಮದಾಬಾದ್ (Ahmedabad) ವಿಮಾನ ದುರಂತದಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಜಗತ್ತು ಕಂಡ ದೊಡ್ಡ ದುರಂತ ಇದಾಗಿದೆ. 270 ಮಂದಿ ಜನ ಸಾವನ್ನಪ್ಪಿದ್ದಾರೆ. ಏರ್ ಇಂಡಿಯಾದಲ್ಲಿ (Air India) ಪ್ರಯಾಣ ಮಾಡುತ್ತಿದ್ದ 242 ಜನರಲ್ಲಿ 241 ಜನ ಬೆಂಕಿಗಾಹುತಿ ಆಗಿ ಸುಟ್ಟು ಕರಕಲು ಆಗಿದ್ದಾರೆ. ಅದರಲ್ಲಿ ರಮೇಶ್ ವಿಶ್ವಾಸ್ ಕುಮಾರ್ ಎಂಬ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದಾರೆ. 241 ಮಂದಿ ಸುಟ್ಟು ಕರಕಲು ಆಗಿದ್ದರೂ ಸಹ ಅವರು ತಂದಿದ್ದ ದುಡ್ಡು ಮಾತ್ರ ಏನೂ ಆಗಿಲ್ಲ. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?
ಮನುಷ್ಯ ಏನೇ ಸಂಪಾದನೆ ಮಾಡಿದರೂ ಏನನ್ನು ಹೊತ್ತು ಕೊಂಡು ಹೋಗಲ್ಲ ಅಂತಾರೆ, ಅದು ನಿಜ. ತನ್ನ ಇಡೀ ಜೀವನ ಹೊಟ್ಟೆಪಾಡಿಗಾಗಿ, ದುಡ್ಡಿಗಾಗಿ ದುಡಿಯೋದು. ಆದರೆ ವಿಮಾನ ದುರಂತದಲ್ಲಿ ಜನ ಸುಟ್ಟು ಕರಕಲು ಆಗಿದ್ದಾರೆ. ಆದರೆ ಜನ ತಂದಿದ್ದ ದುಡ್ಡು ಸುಟ್ಟಿಲ್ಲ. ಅವಶೇಷಗಳ ಪತ್ತೆ ವೇಳೆ ಭಗವದ್ಗೀತೆ ಪುಸ್ತಕ, ಕೃಷ್ಣನ ವಿಗ್ರಹದ ಜೊತೆಗೆ ಸೂಟ್ಕೇಸ್ನಲ್ಲಿದ್ದ ದುಡ್ಡು ಕೂಡ ಪತ್ತೆಯಾಗಿದೆ. ಸುಡದೇ ಇರುವ ದುಡ್ಡನ್ನು ಕ್ರೋಢೀಕರಿಸಲಾಗಿದೆ. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼ ಶೂಟಿಂಗ್ ವೇಳೆ ಮತ್ತೊಂದು ಅವಘಡ – ರಿಷಬ್ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!