ನವದೆಹಲಿ: ಗುಜರಾತ್ನ (Gujarat) ಅಹಮದಾಬಾದ್ನಲ್ಲಿ (Ahmedabad) ಏರ್ ಇಂಡಿಯಾ (Air India) ವಿಮಾನ ಪತನಗೊಂಡಿದ್ದು, ಸದ್ಯ ವಿಮಾನದಲ್ಲಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Sardar Vallabhbhai Patel International Airport) ಲಂಡನ್ಗೆ ಹೊರಟ ಏರ್ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ ಪೈಲೆಟ್, ಸಿಬ್ಬಂದಿಗಳು ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಸದ್ಯದ ಮಾಹಿತಿ ಪ್ರಕಾರ ವಿಮಾದಲ್ಲಿದ್ದ 200ಕ್ಕೂ ಹೆಚ್ಚು ಜನರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: Ahmedabad Plane Crash | ಮಂಗಳೂರು ಮೂಲದ ಕ್ಲೈವ್ ಕುಂದರ್ ಸಹ ಪೈಲಟ್!
ಭಾರತದಲ್ಲಿ ಈ ರೀತಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ಅವಘಡಗಳು ಸಂಭವಿಸಿದ್ದವು. ಪ್ರಮುಖ ವಿಮಾನ ಅಪಘಾತಗಳ ಬಗ್ಗೆ ಮಾಹಿತಿ ಇಲ್ಲಿದೆ.
2020ರ ಆಗಸ್ಟ್ 7: ಕ್ಯಾಲಿಕಟ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ದುಬೈ-ಕೋಯಿಕ್ಕೋಡ್ ಮಾರ್ಗದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ 18 ಜನ ಮೃತಪಟ್ಟಿದ್ದು, 172 ಜನ ಪಾರಾಗಿದ್ದರು.
2010ರ ಮೇ 22: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ವೇನಲ್ಲಿ ದುಬೈ-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದು, ಕೇವಲ 8 ಜನ ಬದುಕುಳಿದಿದ್ದರು.
2000ರ ಜುಲೈ 17: ಅಲಯನ್ಸ್ ಏರ್ ವಿಮಾನ 7412 ಪಟ್ನಾದ ವಸತಿ ಪ್ರದೇಶದಲ್ಲಿ ಪತನವಾಗಿ 60 ಜನ ಮೃತಪಟ್ಟಿದ್ದರು.ಇದನ್ನೂ ಓದಿ: ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ
1996ರ ನವೆಂಬರ್ 12: ಹರಿಯಾಣದ ಚಕ್ರಿಡಬ್ರಿ ಬಳಿ ಆಗಸದಲ್ಲಿ ಸೌದಿ ಅರೇಬಿಯಾದ ವಿಮಾನ ಮತ್ತು ಕಜಕಿಸ್ತಾನದ ವಿಮಾನ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಿಮಾನದಲ್ಲಿದ್ದ 349 ಜನ ಸಾವಿಗೀಡಾಗಿದ್ದರು.
1993ರ ಏಪ್ರಿಲ್ 26: ಇಂಡಿಯನ್ ಏರ್ಲೈನ್ಸ್ ವಿಮಾನ ಔರಂಗಾಬಾದ್ನಲ್ಲಿ ಟೇಕ್ಆಫ್ ಆಗುವಾಗ ರನ್ವೇನಲ್ಲಿದ್ದ ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 55 ಜನ ಮೃತಪಟ್ಟಿದ್ದರು.
1991ರ ಆಗಸ್ಟ್ 16: ಇಂಫಾಲದಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 69 ಜನ ಮೃತಪಟ್ಟಿದ್ದರು.
1990ರ ಫೆಬ್ರುವರಿ 14: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಪ್ರೇಮಿಗಳ ದಿನದಂದು ಅಪಘಾತಕ್ಕೀಡಾಗಿ 92 ಜನ ಸಾವನ್ನಪ್ಪಿದ್ದರು.
1988ರ ಅಕ್ಟೋಬರ್ 19: ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 133 ಜನ ಮೃತಪಟ್ಟಿದ್ದರು.
1982ರ ಜೂನ್ 21: ಪ್ರತಿಕೂಲ ಹವಾಮಾನದ ಕಾರಣ ಬಾಂಬೆಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 17 ಜನ ಸಾವನ್ನಪ್ಪಿದ್ದರು.
1978ರ ಜನವರಿ 1: ಬಾಂದ್ರಾದ ಕರಾವಳಿ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಹೊಸವರ್ಷದ ಸಂಭ್ರಮದಲ್ಲಿದ್ದ ಜನರಿಗೆ ಆಘಾತ ನೀಡಿತ್ತು. ಈ ವೇಳೆ 213 ಜನ ಮೃತಪಟ್ಟಿದ್ದರು.ಇದನ್ನೂ ಓದಿ: ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್ ಪ್ರಯಾಣಿಕನ ಭಾವುಕ ಪೋಸ್ಟ್