Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Ayodhya Ram Mandir | ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

Ayodhya Ram Mandir

ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

Public TV
Last updated: January 12, 2024 3:04 pm
Public TV
Share
4 Min Read
Ahead of Pran Pratishtha PM Narendra Modi offers prayers at a Kalaram Temple Why is Nashik important in Ramayana 1
SHARE

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದಿನಿಂದ 11 ದಿನಗಳ ಉಪವಾಸವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ (Nashik) ಆರಂಭಿಸಿದ್ದಾರೆ. ಮೋದಿ ಅವರು ನಾಸಿಕ್‌ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ (Kalaram Temple) ದೇವರ ದರ್ಶನ ಮತ್ತು ವಿಶೇಷ ಪೂಜೆ ಮಾಡುವ ವ್ರತ ಆರಂಭಿಸಿದ್ದಾರೆ.

ಪಂಚವಟಿ ವಿಶೇಷ ಏನು?
ನಾಸಿಕ್‌ನಿಂದ ಮೋದಿ ಉಪವಾಸ ಆರಂಭಿಸಲು ಕಾರಣವಿದೆ. 14 ವರ್ಷಗಳ ವನವಾಸ ಆರಂಭಿಸಿದ ರಾಮ, ಲಕ್ಷ್ಮಣ, ಸೀತೆ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಅದರಲ್ಲೂ ಪಂಚವಟಿಯಲ್ಲಿ (Panchvati) ಪರ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಐದು ಆಲದಮರಗಳು ಇದ್ದ ಕಾರಣ ಈ ಜಾಗಕ್ಕೆ ಪಂಚವಟಿ ಎಂಬ ಹೆಸರು ಬಂದಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

Kalaram Temple modi

 

ವಾಲ್ಮೀಕಿ ರಾಮಾಯಣದ ಎಲ್ಲಾ ಘಟನೆಗಳಗೆ ಇಬ್ಬರು ಮೂಲ ಪ್ರೇರಣೆಯಾಗುತ್ತಾರೆ. ಕೈಕೇಯಿಂದ ರಾಮ 14 ವರ್ಷಗಳ ವನವಾಸಕ್ಕೆ ತೆರಳಿದರೆ ಶೂರ್ಪನಖಿ ಪ್ರಸಂಗದಿಂದಲೇ ರಾಮ ಲಂಕೆಗೆ ಯುದ್ಧಕ್ಕೆ ಹೋಗಬೇಕಾಗುತ್ತದೆ.

ರಾಮಾಯಣ ಕಥೆಯಲ್ಲಿ ಮಹತ್ವದ ತಿರುವ ನೀಡುವ ಶೂರ್ಪನಖಿ (Surpanakha) ದಂಡಾಕರಣ್ಯದಲ್ಲಿ ನೆಲೆಸಿದ್ದಳು. ವಿಶ್ರವಸನಿಂದ ಕೈಕಸಿಯೆಂಬ ರಕ್ಕಸಿಯಲ್ಲಿ ಜನಿಸಿದ ಈಕೆಗೆ ರಾವಣ, ಕುಂಭಕರ್ಣರು ಅಣ್ಣಂದಿರು. ರಾವಣ (Ravana) ಈಕೆಯನ್ನು ವಿದ್ಯುಜ್ಜಿಹ್ವನೆಂಬ ರಾಕ್ಷಸನಿಗೆ ಕೊಟ್ಟು ಮದುವೆ ಮಾಡಿದ್ದ. ರಾವಣ ಒಮ್ಮೆ ದಿಗ್ವಿಜಯಕ್ಕೆ ಹೋಗಿದ್ದಾಗ ವಿದ್ಯುಜ್ಜಿಹ್ವ ಶತ್ರು ಪಕ್ಷವನ್ನು ಸೇರಿದ್ದ. ಇದರಿಂದ ಸಿಟ್ಟಾದ ರಾವಣ ವಿದ್ಯುಜ್ಜಿಹ್ವನನ್ನು ಕೊಂದು ಹಾಕಿದ್ದ. ಈ ವಿಚಾರ ತಿಳಿದು ಶೂರ್ಪನಖಿ ರಾವಣನ ಬಳಿ ಪರಿಪರಿಯಾಗಿ ಬೇಡಿಕೊಂಡ ಬಳಿಕ ಆಕೆಯನ್ನು 14 ಸಾವಿರ ಸೈನಿಕರ ಜೊತೆ ದಂಡಕಾರಣ್ಯಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

Ahead of Pran Pratishtha PM Narendra Modi offers prayers at a Kalaram Temple Why is Nashik important in Ramayana 3

ಗಂಡನಿಲ್ಲದ ಶೂರ್ಪನಖಿ ದಂಡಕಾರಣ್ಯದಲ್ಲಿ ತಿರುಗಾಡುತ್ತಿದ್ದಾಗ ರಾಮನನ್ನು ನೋಡುತ್ತಾಳೆ. ರಾಮನ ಸುಂದರ ರೂಪಕ್ಕೆ ಮನಸೋತ ಶೂರ್ಪನಖಿ ಸುಂದರ ಹೆಣ್ಣಿನ ರೂಪ ಧರಿಸಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಾಳೆ. ಈ ವೇಳೆ ರಾಮ ನನಗೆ ಈಗಾಗಲೇ ಮದುವೆಯಾಗಿದೆ ನಾನು ಏಕ ಪತ್ನಿವ್ರತಸ್ಥ ಎಂದು ಹೇಳಿ ಲಕ್ಷ್ಮಣನ ಬಳಿ ಹೋಗುವಂತೆ ಆಕೆಯನ್ನು ಕಳುಹಿಸುತ್ತಾನೆ.

ಲಕ್ಷ್ಮಣನ ಬಳಿ ಬಂದು ಮದುವೆಯಾಗುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಲಕ್ಷ್ಮಣ ಈಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ರಾಮ ನನ್ನ ಮನವಿಯನ್ನು ಒಪ್ಪದೇ ಇರಲು ಕಾರಣ ಸೀತೆ ಎಂದು ತಿಳಿದು ಶೂರ್ಪನಖಿ ಆಕೆಯನ್ನು ನುಂಗಲು ಹೋದಾಗ ಲಕ್ಷ್ಮಣ ಆಕೆಯನ್ನು ತಡೆಯುತ್ತಾನೆ. ಅಷ್ಟೇ ಅಲ್ಲದೇ ಲಕ್ಷ್ಮಣ ಆಕೆಯ ಕಿವಿ ಮೂಗುಗಳನ್ನು ಕತ್ತರಿಸುತ್ತಾನೆ. ಈ ಅವಮಾನ ತಾಳಲಾರದೇ ಶೂರ್ಪನಖಿ ರಾವಣನ ಬಳಿ ತೆರಳಿ ದೂರು ನೀಡುತ್ತಾಳೆ. ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸಲು ಪ್ರಚೋದನೆ ನೀಡುತ್ತಾಳೆ. ಸಹೋದರಿಗೆ ಅವಮಾನ ಮಾಡಿದ್ದಕ್ಕೆ ರಾವಣ ಮಾರು ವೇಷ ಧರಿಸಿ ಪಂಚವಟಿಯಿಂದಲೇ ಸೀತೆಯನ್ನು ಅಪಹರಣ ಮಾಡುತ್ತಾನೆ. ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ಅಯೋಧ್ಯೆ ರಾಮ ಮಂದಿರ

Ahead of Pran Pratishtha PM Narendra Modi offers prayers at a Kalaram Temple Why is Nashik important in Ramayana 4

ಅಪಹರಣಕ್ಕೂ ಮೊದಲು ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ’ (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಈ ಜಾಗದಲ್ಲೇ. ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ.

ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪಂಚವಟಿ ಪ್ರಾಮುಖ್ಯತೆ ಪಡೆದಿದೆ. ವನವಾಸದ 10 ವರ್ಷ ಪೂರ್ಣಗೊಂಡ ಬಳಿಕ ರಾಮ, ಸೀತೆ, ಲಕ್ಷ್ಮಣ ಸುಮಾರು ಎರಡೂವರೆ ವರ್ಷ ನೆಲೆಸಿರುತ್ತಾರೆ. ಪಂಚವಟಿ ಇರುವುದು ಇರುವುದು ನಾಸಿಕ್‌ನ ಉತ್ತರ ಭಾಗದಲ್ಲಿ. ʼನಾಸಿಕʼ ಎಂದರೆ ಸಂಸ್ಕೃತದಲ್ಲಿ ಮೂಗು. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಎಸೆದ ಸ್ಥಳವೇ ʼನಾಸಿಕ್ʼ ಎಂದು ಕಥೆ ಹೇಳುತ್ತದೆ.

ಪಂಚವಟಿಯಲ್ಲಿ ವರುಣಿ, ತರುಣಿ ಮತ್ತು ಗೋದಾವರಿ ನದಿಗಳ ಸಂಗಮ
ಪಂಚವಟಿಯಲ್ಲಿ ವರುಣಿ, ತರುಣಿ ಮತ್ತು ಗೋದಾವರಿ ನದಿಗಳ ಸಂಗಮ

ತ್ರಿವೇಣಿ ಸಂಗಮ:
ತ್ರಿವೇಣಿ ಸಂಗಮ (Triveni Sangam) ನಾಸಿಕ್‌ನ ಇನ್ನೊಂದು ವಿಶೇಷ. ವರುಣಿ, ತರುಣಿ ಮತ್ತು ಗೋದಾವರಿ ನದಿಗಳು ಇಲ್ಲಿ ಸಂಗಮವಾಗುತ್ತದೆ. ವರುಣಿ ಮತ್ತು ತರುಣಿ ನದಿಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ ಎನ್ನುವ ನಂಬಿಕೆಯಿದೆ. ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ದಕ್ಷಿಣ ಗಂಗೆ ಎನಿಸಿದ ಗೋದಾವರಿ ನಾಸಿಕ್‌ ಸಮೀಪದ ತೃಯಂಬಕೇಶ್ವರಲ್ಲಿ ಹುಟ್ಟುತ್ತಾಳೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

ನಾಸಿಕ್‌ ಕುಂಭಮೇಳ
ನಾಸಿಕ್‌ ಕುಂಭಮೇಳ

ಕುಂಭಮೇಳ:
ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ (Kumbh Mela) ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ಬಿದ್ದವು. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.

 

TAGGED:Ayodhyanarendra modiPanchvatiRam Mandirಅಯೋಧ್ಯೆನರೇಂದ್ರ ಮೋದಿನಾಸಿಕ್ಪಂಚವಟಿರಾಮ ಮಂದಿರಶೂರ್ಪನಖಿ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

Drums Sweets Support Meerut Father Celebrates Daughters Divorce
Court

ಡಿವೋರ್ಸ್‌ ಬಳಿಕ ಸಿಹಿ ಹಂಚಿ, ಬ್ಯಾಂಡ್‌ ಮೆರವಣಿಗೆಯಲ್ಲಿ ಮಗಳನ್ನು ಕರೆತಂದ ನಿವೃತ್ತ ಜಡ್ಜ್‌

Public TV
By Public TV
9 minutes ago
325702249 1 6 1 e1566118011669
Latest

ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ – ಅಮೆರಿಕ ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 113 ಡಾಲರ್​ಗೆ ಏರಿಕೆ​

Public TV
By Public TV
27 minutes ago
Kalaburagi Govt Teacher Murder
Crime

ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ – ಶವ ಸುಟ್ಟುಹಾಕಿದ ಹಂತಕರು

Public TV
By Public TV
40 minutes ago
Raicur Court
Court

ರಾಯಚೂರು | 9 ವರ್ಷಗಳ ಹಿಂದಿನ ಕೇಸ್‌ – ದರೋಡೆ, ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ

Public TV
By Public TV
51 minutes ago
HH 60W Jolly Green II
Latest

7,000 ಅಡಿ ಎತ್ತರ, ಪರ್ವತಗಳ ಬಿರುಕಿನ ಮಧ್ಯೆ ಅವಿತಿದ್ದ ಅಮೆರಿಕ ಪೈಲಟ್‌ – ರಹಸ್ಯ ಕಾರ್ಯಾಚರಣೆಯೇ ರೋಚಕ!

Public TV
By Public TV
1 hour ago
tractor
Crime

ಟ್ರ್ಯಾಕ್ಟರ್ ಹರಿದು 2 ವರ್ಷದ ಪುಟ್ಟ ಕಂದಮ್ಮ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?