Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಜನ್‍ಗೂ ಹೆಚ್ಚು ಶಾಸಕರನ್ನ ಕರೆತರೋ ಮಾತಾಡಿದ್ದ ಬೆಳಗಾವಿ ಸಾಹುಕಾರನಿಗೆ ಚಿಂತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಡಜನ್‍ಗೂ ಹೆಚ್ಚು ಶಾಸಕರನ್ನ ಕರೆತರೋ ಮಾತಾಡಿದ್ದ ಬೆಳಗಾವಿ ಸಾಹುಕಾರನಿಗೆ ಚಿಂತೆ!

Bengaluru City

ಡಜನ್‍ಗೂ ಹೆಚ್ಚು ಶಾಸಕರನ್ನ ಕರೆತರೋ ಮಾತಾಡಿದ್ದ ಬೆಳಗಾವಿ ಸಾಹುಕಾರನಿಗೆ ಚಿಂತೆ!

Public TV
Last updated: May 27, 2019 12:26 pm
Public TV
Share
3 Min Read
ramesh
SHARE

-ಮತ್ತೆ ಏಕಾಂಗಿಯಾದ್ರಾ ರಮೇಶ್ ಜಾರಕಿಹೊಳಿ!

ಬೆಂಗಳೂರು: ಶಾಸಕರನ್ನ ಬಿಜೆಪಿ ಕರೆತರುವ ಬಗ್ಗೆ ಮಾತನಾಡಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರಿಗೆ ಇದೀಗ ಹೊಸ ಚಿಂತೆ ಆರಂಭವಾಗಿದೆ.

ಹೌದು. ಆಪರೇಷನ್ ಸಕ್ಸಸ್ ಅಂದ್ಕೊಂಡಿದ್ದ ಸಾಹುಕಾರ್‍ಗೆ ಈಗ ಟೆನ್ಶನ್ ಶುರುವಾಗಿದ್ದು, ಬರುತ್ತೇವೆ ಎಂದು ನಂಬಿಸಿದ್ದ ಶಾಸಕರೇ ಈಗ ಕೈಕೊಟ್ಟು ದೂರವಾದ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಈ ಮೂಲಕ ರಾಜೀನಾಮೆ ಬಗ್ಗೆ ಮಾತಾಡಿದ್ದ ರಮೇಶ್ ಜಾರಕಿಹೊಳಿ ಈಗ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

mahesh

ಒಬ್ಬೊಬ್ಬ ಶಾಸಕರು ಒಂದೊಂದು ಸಮಸ್ಯೆಗೆ ಸಿಲುಕಿ ಸಾಹುಕಾರ್‍ಗೆ ಚಿಂತೆ ಆರಂಭವಾಗಿದೆಯಂತೆ. ಹಾಗಾದ್ರೆ ರಮೇಶ್ ಜಾರಕಿಹೋಳಿಗೆ ಶಾಸಕರುಗಳು ಏನು ಉತ್ತರ ಕೊಟ್ಟಿದ್ದಾರೆ ಎಂಬ ಒಬ್ಬೊಬ್ಬ ಶಾಸಕರ ಒಂದೊಂದು ಸ್ಟೋರಿ ಏನು ಎಂಬುದು ಇಲ್ಲಿದೆ.

ಮಹೇಶ್ ಕುಮಟಳ್ಳಿ: ನೀವು ಹೇಗೆ ಹೇಳ್ತಿರೋ ಹಾಗೆ ನಾನು ಕೇಳ್ತೀನಿ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಆಪರೇಷನ್ ವಿಫಲವಾದರೆ ಕಷ್ಟ. ಅಲ್ಲದೆ ಮತ್ತೆ ಚುನಾವಣೆ ಎದುರಿಸೋದು ಕಷ್ಟ. ಇಲ್ಲೇ ಹೊಂದಾಣಿಕೆ ಮಾಡಿಕೊಂಡು ಹೋಗೋಣ ಸಾರ್ ಎಂದು ಹೇಳಿದ್ದಾರೆ.

ಶಂಕರ್: ನಿಮ್ಮ ಜೊತೆ ಬರುತ್ತೇನೆ. ನನಗೇನು ಸಮಸ್ಯೆ ಇಲ್ಲ. ಆದರೆ, ಎಲ್ಲವೂ ಸರಿಯಾಗಿ ಆಗದಿದ್ದರೆ ಸುಮ್ಮನೆ ಮರ್ಯಾದೆ ಪ್ರೆಶ್ನೆ. ಅಲ್ಲದೆ ನಮ್ಮ ನಾಯಕ ಸಿದ್ದರಾಮಯ್ಯ ಕೂಡ ಎಲ್ಲೂ ಹೋಗದಂತೆ ಸೂಚಿಸಿದ್ದಾರೆ. ಅವರ ಮಾತು ಮೀರಿ ಬರೋದು ಸ್ವಲ್ಪ ಕಷ್ಟವಾಗುತ್ತೆ ಎಂದಿದ್ದಾರೆ.

bc patil

ನಾಗೇಶ್: ನಾನು ಪಕ್ಷೇತರ ಶಾಸಕನಾದ್ರೂ ಕೊತ್ತನೂರು ಮಂಜು ನೆರವಿನಿಂದ ಗೆದ್ದವನು. ಅವರ ಮಾತು ಮೀರೋ ಹಾಗಿಲ್ಲ. ಕಾಂಗ್ರೆಸ್ ಬಗ್ಗೆ ಏನೂ ಅಸಮಧಾನವಿಲ್ಲ. ಅಲ್ಲದೆ ನನ್ನ ಗೆಲುವಿಗೆ ಸಚಿವ ಡಿ.ಕೆ ಶಿವಕುಮಾರ್ ಕೂಡ ಸಹಕರಿಸಿದ್ದಾರೆ. ಅವರ ಮಾತು ಮೀರೋದು ಕಷ್ಟ ಎಂದು ಉತ್ತರಿಸಿದ್ದಾರೆ.

ಬಿ.ಸಿ.ಪಾಟೀಲ್: ಹಾಗೇನಾದರೂ ಪಕ್ಷ ಬಿಟ್ಟು ಬಿಜೆಪಿ ಸೇರಿದರೆ ಅಲ್ಲಿನ ಸಮುದ್ರದಲ್ಲಿ ಸಚಿವನಾಗೋದು ಕಷ್ಟ. ಅದರ ಬದಲು ಇಲ್ಲೇ ಇದ್ದು ಒತ್ತಡ ತಂತ್ರ ಅನುಸರಿಸೋದೆ ಒಳ್ಳೆಯದು ಎಂದಿದ್ದಾರೆ.

nagendra

ಡಾ.ಸುಧಾಕರ್: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕೋಪದ ಜೊತೆಗೆ ಈಗಿನ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕರೂ ಸಿಗಲಿ ಎಂಬ ಆಸೆ. ಅದಕ್ಕಾಗಿ ಒತ್ತಡ ತಂತ್ರ ಅನುಸರಿಸುತ್ತಿರುವ ಸುಧಾಕರ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವ ಧೈರ್ಯ ಸಾಲುತ್ತಿಲ್ಲ. ಕಾಂಗ್ರೆಸ್ ಜೆಡಿಎಸ್ ಪ್ರಬಲವಾಗಿರುವ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಅನ್ನೋ ಆತಂಕ. ಅದಕ್ಕೆ ಪಕ್ಷದಲ್ಲೇ ಒತ್ತಡ ತಂತ್ರ ಅನುಸರಿಸಲು ಯತ್ನ.

ನಾಗೇಂದ್ರ: ಈಗಾಗಲೇ ಬಿಜೆಪಿಗೆ ಜಿಗಿಯುವ ಮನಸ್ಸಿನಲ್ಲಿ ಸಿದ್ಧವಾಗಿದ್ದರು. ಆದರೆ ಸಹೋದರನನ್ನ ಬಿಜೆಪಿಯಿಂದ ಲೋಕಸಭೆಗೆ ಕಳುಹಿಸುವ ಪ್ರಯತ್ನ ಕೈಕೊಟ್ಟಿದೆ. ಮತ್ತೆ ಬಿಜೆಪಿ ನಾಯಕರನ್ನ ನಂಬಿ ಹೋದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತೆ ಎಂಬ ಆತಂಕ ಎದುರಾಗಿದೆ.

ganesh

ಗಣೇಶ್: ಕಂಪ್ಲಿ ಶಾಸಕನಿಗೆ ಆಪರೇಷನ್ ಬೇಡ ಕಮಲವೂ ಬೇಡ ಎಂಬಂತಾಗಿದೆ. ಆನಂದ್ ಸಿಂಗ್ ಜೊತೆ ರಾಜಿಯಾಗಿ ಕೇಸು ವಾಪಾಸ್ ಪಡೆದರೆ ಅಷ್ಟೆ ಸಾಕು ಅನ್ನಿಸಿದೆ. ಆದ್ದರಿಂದ ಈ ಬಾರಿ ಆಪರೇಷನ್ ಮಾತಿಗೆ ಗಣೇಶ್ ನೋ ರಿಯಾಕ್ಷನ್.

ಭೀಮಾನಾಯಕ್: ಕಳೆದ ಬಾರಿ ಅಂದರ್ ಬಾಹರ್ ಆಟ ಆಡಿದ ಶಾಸಕನಿಗೆ ಈಗ ಸಾಕಪ್ಪ ಸಾಕು ಆಪರೇಷನ್ ಆಟ ಅನ್ನಿಸಿದೆ. ಮೂರನೇ ಬಾರಿಗೆ ಪಕ್ಷ ಬದಲಿಸುವ ಬದಲು ಕ್ಷೇತ್ರಕ್ಕೆ ಒಂದಷ್ಟು ಫಂಡ್ ಹಾಕಿಸಿಕೊಂಡು ಕೆಲಸ ಮಾಡೋದೆ ಸೇಫ್ ಅನ್ನಿಸಿದೆ. ಆದ್ದರಿಂದ ಯಾವ ಕಾರಣಕ್ಕೂ ನಾನು ಪಕ್ಷ ಬಿಡಲ್ಲ ಅಣ್ಣ ಎಂದು ನೇರವಾಗಿ ಹೇಳಿದ್ದಾರೆ.

pratap gowda patil

ಪ್ರತಾಪ್ ಗೌಡ ಪಾಟೀಲ್: ಈ ಹಿಂದೆ ನಡೆದ ಆಪರೇಷನ್ ಅವಾಂತರ ನೋಡಿ ಸುಸ್ತಾಗಿರುವ ಮಸ್ಕಿ ಶಾಸಕರಿಗೆ ಕ್ಷೇತ್ರದಲ್ಲಿ ಕೆಲಸಗಳಾಗಬೇಕಂತೆ. ಸರ್ಕಾರ ಹಣ ಬಿಡುಗಡೆ ಮಾಡಿದೆ ಕೆಲಸ ಶುರು ಮಾಡಬೇಕು. ಅದು ಬಿಟ್ಟು ಚುನಾವಣೆಗೆ ಹೋದರೆ ಕಷ್ಟ ನನ್ನ ಕೈಲಿ ಅದು ಆಗಲ್ಲ ಎನ್ನತೊಡಗಿದ್ದಾರೆ.

ಬಸವರಾಜ್ ದದ್ದಲ್: ಮೊದಲಿನಿಂದಲೂ ಆಪರೇಷನ್ ಕಮಲದ ಬಗ್ಗೆ ಆತಂಕ ಇಟ್ಟುಕೊಂಡಿದ್ದ ದದ್ದಲ್ ಸಾಹೇಬರಿಗೆ ಈಗ ಚುನಾವಣೆ ಎದುರಿಸುವ ಆಸಕ್ತಿ ಇಲ್ಲ. ಕ್ಷೇತ್ರಕ್ಕೆ ಅನುದಾನ ಕೊಂಡೊಯ್ದು ಕೆಲಸ ಮಾಡಿಸಿಕೊಂಡರೆ ಸಾಕು ಅನ್ನಿಸಿದೆಯಂತೆ.

shivaram hebbar

ಶಿವರಾಮ ಹೆಬ್ವಾರ್: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ಕೊಟ್ಟಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಹೆಚ್ಚಿನ ಆಸಕ್ತಿ ಇಲ್ಲ. ಆದರೂ ಸಚಿವ ಸ್ಥಾನ ಬೇಕು ಅನ್ನೋ ಆಸೆ. ಆದರೆ ಅದಕ್ಕಾಗಿ ಪಕ್ಷ ಬಿಡೋದು ಬೇಡ. ಬಿಜೆಪಿಗೆ ಹೋದರೂ ಅಲ್ಲಿರುವ ಸ್ಪರ್ಧೆಯಲ್ಲಿ ಸಚಿವ ಸ್ಥಾನ ಪಡೆಯೋದು ಕಷ್ಟ ಅನ್ನೋ ಆತಂಕ ಎದುರಾಗಿದೆಯಂತೆ.

ಆನಂದ್ ಸಿಂಗ್: ಐಟಿ, ಇಡಿ, ಸಿಬಿಐ ಎಲ್ಲದರ ಭಯಕ್ಕೆ ಬಿಜೆಪಿ ಹೊಸ್ತಿಲಿಗೆ ಹೋಗುವ ನಿರ್ಧಾರ ಮಾಡಿದ್ದು ಹೌದು. ಆದರೆ ಈಗ ಎಲ್ಲವು ಒಂದು ಹಂತಕ್ಕೆ ಬಂದಿದೆ. ಈಗ ಪಕ್ಷ ಬಿಡುವ ಪ್ರಮೆಯ ಇಲ್ಲ ಎಂದಿದ್ದಾರೆ.

TAGGED:bengalurubjpcongressMLAopeartion kamalaPublic TVRamesh jarakiholiಆಪರೇಷನ್ ಕಮಲಕಾಂಗ್ರೆಸ್ಪಬ್ಲಿಕ್ ಟಿವಿಬಿಜೆಪಿಬೆಂಗಳೂರುರಮೇಶ್ ಜಾರಕಿಹೊಳಿಶಾಸಕರು
Share This Article
Facebook Whatsapp Whatsapp Telegram

Cinema news

Dharmendra Mammootty Alka Yagnik
ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ
Cinema Latest Main Post National
Shivaraj Kumar
ಶಿವಣ್ಣನ ಮನ ಗೆದ್ದ ʻಲವ್ ಯೂ ಮುದ್ದುʼ ಜೋಡಿ – ಹ್ಯಾಟ್ರಿಕ್‌ ಹೀರೋ ಹೇಳಿದ್ದೇನು?
Cinema Latest Sandalwood Top Stories
Ghaarga Film
`ಘಾರ್ಗಾ’ ಚಿತ್ರದ ಟ್ರೈಲರ್ ರಿಲೀಸ್‌ – ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಂಡು ಸಿನಿಪ್ರಿಯರು ಫುಲ್‌ ಖುಷ್‌
Cinema Latest Sandalwood
Darshan 7
ದರ್ಶನ್ ಹೆಚ್ಚುವರಿ ಬ್ಲಾಂಕೆಟ್‌ ಸೌಲಭ್ಯಕ್ಕೆ ಕುತ್ತು – ಕಾರಾಗೃಹ ಡಿಜಿಪಿ ಹೊಸ ಆದೇಶ
Bengaluru City Cinema Latest Sandalwood

You Might Also Like

Thawar Chand Gehlot 1
Bengaluru City

ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಚೈತನ್ಯ ಉದಯಿಸುತ್ತಿದೆ: ಗೆಹ್ಲೋಟ್‌

Public TV
By Public TV
19 minutes ago
Thawar Chand Gehlot 2
Bengaluru City

77ನೇ ಗಣರಾಜ್ಯೋತ್ಸವ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್‌ರಿಂದ ಧ್ವಜಾರೋಹಣ

Public TV
By Public TV
21 minutes ago
russian s400 missilere
Latest

ಗಣರಾಜ್ಯೋತ್ಸವ ಸಂಭ್ರಮ – ಪರೇಡ್‌ನಲ್ಲಿಂದು ಪಾಕ್‌ ಹುಟ್ಟಡಗಿಸಿದ S-400 ವಾಯು ರಕ್ಷಣಾ ವ್ಯವಸ್ಥೆ ಪ್ರದರ್ಶನ

Public TV
By Public TV
27 minutes ago
Anekal Car Accident
Bengaluru City

ಕುಡಿದ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ – ಮರಕ್ಕೆ ಡಿಕ್ಕಿಯಾಗಿ ಓರ್ವ ದುರ್ಮರಣ

Public TV
By Public TV
38 minutes ago
Republic Day Narendra Modi
Latest

ಈ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ, ಉತ್ಸಾಹ ತುಂಬಲಿ – 77ನೇ ಗಣರಾಜ್ಯೋತ್ಸವಕ್ಕೆ ಮೋದಿ ಶುಭಾಶಯ

Public TV
By Public TV
2 hours ago
Tumkur Accident
Crime

ತುಮಕೂರಿನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ಮೂವರು ದುರ್ಮರಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?