ಬೆಂಗಳೂರು: ಕಳ್ಳರು ಮನೆಯಲ್ಲಿರುವ ನಾಯಿಗೆ ವಿಷವುಣಿಸಿ, ಕಳ್ಳತನ ಮಾಡಿ ಭಯದಲ್ಲಿ ತಮ್ಮ ಮೊಬೈಲ್ ನ್ನು ಕದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಶಾಂತಿನಗರದಲ್ಲಿ ಸ್ಟೀಲ್ ಸೀಮೆಂಟ್ ಉದ್ಯಮಿ ಶ್ರೀನಿವಾಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗೆ ಬಂದ ಕಳ್ಳರು ಶ್ರೀನಿವಾಸ ಅವರ ಮನೆಯಲ್ಲಿದ್ದ ಸಾಕು ನಾಯಿಗೆ ವಿಷ ಹಾಕಿದ್ದಾರೆ. ಈ ವೇಳೆ ಕಳ್ಳರು ತಮ್ಮ ಮೊಬೈಲ್ ನ್ನು ಶ್ರೀನಿವಾಸ್ ಅವರ ಮನೆಯಲ್ಲಿ ಮರೆತಿದ್ದಾರೆ. ಸುಮಾರು 3 ಲಕ್ಷ ರೂ. ನಗದು ಮತ್ತು 400 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್ ಸೇವನೆಯಿಂದ ಅಸ್ವಸ್ಥಗೊಂಡಿದ್ದ ನಾಯಿ ಸದ್ಯ ಚೇತರಿಸಿಕೊಂಡಿದೆ.