ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ

Public TV
1 Min Read
TUMAKURU UGRESH

ತುಮಕೂರು: ಹೆಲ್ಮೆಟ್ (Helmet) ಆಯ್ತು, ಈಗ ಜೆಡಿಎಸ್ (JDS) ಮುಖಂಡ ಆರ್. ಉಗ್ರೇಶ್ (R Ugresh) ಅವರು ಬಾಳೆ ಹಣ್ಣು ಭಾಗ್ಯ ಕರುಣಿಸಿದ್ದಾರೆ.

TUMAKURU UGRESH 1

ಹೌದು. ಹುಟ್ಟು ಹಬ್ಬದ ಪ್ರಯುಕ್ತ ಉಗ್ರೇಶ್ ಅವರು ಹಣ್ಣು ಹಂಪಲು ಹಂಚಿದ್ದಾರೆ. ಅಂತೆಯೇ ಹಣ್ಣು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಸಿಕ್ಕಿದ್ದೇ ಸೀರುಂಡೆ ಎಂದು ಅಭಿಮಾನಿಗಳು ಬಾಳೆ ಗೊನೆಯನ್ನೇ ಹೊತ್ತೊಯ್ದ ಪ್ರಸಂಗ ನಡೆದಿದೆ.

TUMAKURU UGRESH 4

ಶಿರಾ ಕ್ಷೇತ್ರ (Sira Assembly constituency) ದ ಜೆಡಿಎಸ್ (JDS) ಟಿಕೆಟ್ ಆಕಾಂಕ್ಷಿಯೂ ಆದ ಉಗ್ರೇಶ್, ಕಳೆದ ತಿಂಗಳು ಹೆಲ್ಮೆಟ್ ಹಂಚಿ ಸುದ್ದಿಯಲ್ಲಿದ್ದರು. ಟಿಕೆಟ್ ಗಾಗಿ ಮೂರ್ನಾಲ್ಕು ಮುಖಂಡರಲ್ಲಿ ಫೈಟ್ ನಡೆಯುತ್ತಿದ್ದು, ಅದರಲ್ಲಿ ಉಗ್ರೇಶ್ ಮುಂಚೂಣಿಯಲಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ

TUMAKURU UGRESH 2

ಇದೀಗ ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು, ಕಾರು, ಬೈಕಲ್ಲಿ ಶಿರಾ ಜನತೆ ಬಾಳೆಗೊನೆ ಎಸ್ಕೇಪ್ ಮಾಡಿದ್ದಾರೆ. ಶಿರಾ ನಗರದಲ್ಲಿ ರ‍್ಯಾಲಿ ನಡೆಸಿ, ಅಭಿಮಾನಿಗಳು ಉಗ್ರೇಶ್ ಅವರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *