ಚಿಕ್ಕಬಳ್ಳಾಪುರ: ನಗರದಲ್ಲಿ ಜ್ಯೂಸ್ ಕುಡಿದ ನರ್ಸ್ ಒಬ್ಬರು ದಿಢೀರ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರಾದ ಶುಶ್ರೂಷಕಿಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ.
ನರ್ಸ್ ಹೇಮಾವತಿಯನ್ನು ಭೇಟಿ ಮಾಡಲು ವಿಶಾಖಪಟ್ಟಣ ಮೂಲದ ಪ್ರಶಾಂತ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದನು. ಹೀಗೆ ಭೇಟಿ ವೇಳೆ ಆಸ್ಪತ್ರೆ ಎದುರಿದ್ದ ಬೇಕರಿಯಲ್ಲಿ ಜ್ಯೂಸ್ ಖರೀದಿಸಿ ಹೇಮಾವತಿ ಹಾಗೂ ಮತ್ತೊಬ್ಬ ನರ್ಸ್ ರಾಜೇಶ್ವರಿಗೆ ತಂದುಕೊಟ್ಟಿದ್ದಾನೆ.
ಜ್ಯೂಸ್ ಕುಡಿದ ಕೆಲ ನಿಮಿಷಗಳ ನಂತರ ರಾಜೇಶ್ವರಿ ಅಸ್ವಸ್ಥರಾಗಿದ್ದಾರೆ. ನರ್ಸ್ ಹೇಮಾವತಿ ಹಾಗೂ ಪ್ರಶಾಂತ್ ಸ್ನೇಹಿತರು ಮಾತ್ರೆ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಶಾಂತ್ ಹಾಗೂ ಹೇಮಾವತಿ, ಹಾಗೂ ಬೇಕರಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv