ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಪುಟ್ಟರಂಗಶೆಟ್ಟಿ ಅವರು ಸಿದ್ದರಾಮಯ್ಯನವರ ಮನೆಗೆ ಭೇಟಿ ಮಾಡಲು ಬಂದಾಗ, “ಏನ್ ಪುಟ್ಟರಂಗ ಶೆಟ್ಟರೇ ಅಧಿಕಾರ ಸ್ವೀಕಾರ ಮಾಡಿದ್ರಾ? ಅಧಿಕಾರಿಗಳ ಜೊತೆ ಸಭೆ ನಡೆಸಿದ್ರಾ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ, ಅಧಿಕಾರ ತೆಗೆದುಕೊಂಡಿದ್ದೀನಿ ಸಭೆ ನಡೆಸಿಲ್ಲ ಎಂದು ಉತ್ತರಿಸಿದ್ದಾರೆ.
ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ ಅಥವಾ ಇಲ್ವಾ?. ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೇ ಸಿರಿ ಬಂದೋರಿಗೆ ಜನ ಕಣ್ಣಿಗೆ ಕಾಣೋಲ್ಲ ಎಂಬ ಮಾತಿದೆ. ನೀವು ಆ ರೀತಿ ಆಗಬೇಡಿ ಎಂದು ಜನಪರ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.