ಚಂಡೀಗಢ/ಮಂಗಳೂರು: ಪಂಜಾಬ್ನಲ್ಲಿ (Punjab) ಏರೋಸ್ಪೇಸ್ ಎಂಜಿನಿಯರ್ (Aerospace Engineer) ನಿಗೂಢ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಆಕಾಂಕ್ಷ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಕಾಂಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ನಿವಾಸಿ. ಬೊಳಿಯೂರು ನಿವಾಸಿ ಸುರೇಂದ್ರ ಹಾಗೂ ಸಿಂಧೂದೇವಿ ದಂಪತಿಗಳ ಪುತ್ರಿ 22 ವರ್ಷದ ಆಕಾಂಕ್ಷ ಎಸ್ ನಾಯರ್ ಪಂಜಾಬ್ನ ಎಲ್ಸಿಯು ಪಾಗ್ವಾಡ ಕಾಲೇಜಿನಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಮುಗಿಸಿ ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ತೆರಳಲು ತಯಾರಿ ನಡೆಸಿದ್ದ ಆಕಾಂಕ್ಷ ಕೆಲ ಶೈಕ್ಷಣಿಕ ದಾಖಲೆಗಳನ್ನು ಪಡೆಯಲು ಕಳೆದ ಶುಕ್ರವಾರ ಸಂಜೆ ದೆಹಲಿಯಿಂದ ಅಮೃತಸರಕ್ಕೆ ತೆರಳಿ ಅಲ್ಲಿ ಸ್ನೇಹಿತೆಯ ರೂಂನಲ್ಲಿದ್ದಳು. ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್ನಲ್ಲಿ ನಿಗೂಢ ಸಾವು
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನೇಹಿತ ಕೇರಳ ಮೂಲದ ಯುವಕನೊಂದಿಗೆ ಬೈಕ್ನಲ್ಲಿ ಪಾಗ್ವಾಡ್ ಕಾಲೇಜಿಗೆ ತೆರಳಿದ್ದಳು. ಸುಮಾರು 11 ಗಂಟೆಗೆ ಹೆತ್ತವರು ಆಕೆಗೆ ಕರೆ ಮಾಡಿದ್ದು, ಈ ವೇಳೆ ಕರೆ ಕಟ್ ಮಾಡಿದ್ದ ಆಕಾಂಕ್ಷ ತಾನು ಕಾಲೇಜಿನಲ್ಲಿರುವುದಾಗಿ ಮೆಸೇಜ್ ಮಾಡಿದ್ದಾಳೆ. ಆ ಬಳಿಕ ಎರಡು ಗಂಟೆ ಸುಮಾರಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ, ಮೆಸೇಜ್ ಕೂಡಾ ಮಾಡಿಲ್ಲ. ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪಂಜಾಬ್ನ ಜಲಂಧರ್ ಠಾಣಾ ಪೊಲೀಸರು ಆಕಾಂಕ್ಷಳ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಹೊರಟು ಬನ್ನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರಿಸರದ ಚಿತ್ರ ಕಳಿಸಿದ್ದ ದಾವಣಗೆರೆಯ ಬಾಲಕನಿಗೆ ಪ್ರಧಾನಿ ಮೋದಿ ಮೆಚ್ಚುಗೆ
ಜರ್ಮನಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಲು ಟ್ರೈ ಮಾಡುತ್ತಿದ್ದ ಆಕಾಂಕ್ಷಳಿಗೆ ಅಲ್ಲಿ ತರಬೇತಿಗೆ ಸೀಟ್ ಸಿಕ್ಕಿತ್ತು .ಹೀಗಾಗಿ ಎಲ್ಲಾ ದಾಖಲೆಗಳು ಬೇಕಿದ್ದ ಕಾರಣ ತಾನು ಕಲಿತ ಪಂಜಾಬ್ ನ ಪಾಗ್ವಾಡ್ ಎಲ್ಸಿಯು ಕಾಲೇಜಿಗೆ ಕರೆ ಮಾಡಿ ಸರ್ಟಿಫಿಕೇಟ್ ಕೇಳಿದ್ದಳು. ಆದರೆ ಸರ್ಟಿಫಿಕೇಟ್ ಕಳಿಸಿಕೊಡಲು ಆಗೋದಿಲ್ಲ, ನೀನೇ ಬಂದು ತೆಗೆದುಕೊಂಡು ಹೋಗು ಎಂದು ಕಾಲೇಜಿನವರು ಹೇಳಿದ್ದರು. ಹೀಗಾಗಿ ದೆಹಲಿಯಿಂದ ಪಂಜಾಬ್ನ ಕಾಲೇಜಿಗೆ ಆಕೆ ತೆರಳಿದ್ದಳು. ಕಾಲೇಜಿಗೆ ಹೋಗುವವರೆಗೂ ಸಂಪರ್ಕದಲ್ಲಿದ್ದ ಆಕೆಗೆ ಬಳಿಕ ಏನಾಗಿದೆ ಎಂಬುದು ಕುಟುಂಬಸ್ಥರ ಅನುಮಾನ. ಕಾಲೇಜಿನವರೇ ಏನಾದರೂ ಮಾಡಿರುವ ಸಾಧ್ಯತೆ ಇದೆ ಎಂದು ಹೆತ್ತವರು ಆರೋಪಿಸಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಕಾಲೇಜಿನ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ಹೇಳಿರುವುದರಿಂದ ಕಾಲೇಜಿನವರೇ ಏನೋ ಮಾಡಿದ್ದಾರೆ ಎಂದು ಹೆತ್ತವರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು? ಹೆಚ್ಚು ಮಳೆಯಾದ್ರೆ ಮುಳುಗುತ್ತದೆ, ಕಡಿಮೆ ಸುರಿದರೆ ತೇಲುತ್ತದೆ: ಹೆಚ್ಡಿಕೆ ಕಿಡಿ
ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರು ಧರ್ಮಸ್ಥಳದಿಂದ ತೆರಳಿದ್ದಾರೆ. ದೆಹಲಿ ಮೂಲಕ ಪಂಜಾಬ್ಗೆ ತೆರಳಿದ್ದು, ಅಲ್ಲಿ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ಇರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಅಲ್ಲದೇ ತಮ್ಮ ಮಗಳ ಸಾವಿನ ಸತ್ಯಾಸತ್ಯತೆ ತಿಳಿಯಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!